ನವಂಬರ್ ೧ ರಿಂದ ೧೯ ಈ ಕಾಲಾವಧಿಯಲ್ಲಿ ಏರ್ ಇಂಡಿಯಾದ ವಿಮಾನಗಳ ಮೇಲೆ ದಾಳಿ ! – ಖಲಿಸ್ತಾನಿ ಭಯೋತ್ಪಾದಕ ಗುರುಪತವಂತ ಸಿಂಹ ಇವನ ಬೆದರಿಕೆ

ಕೆನಡಾ ಮತ್ತು ಅಮೆರಿಕಾ ದೇಶದಿಂದ ಪೋಷಿಸಿರುವ ಖಲಿಸ್ತಾನಿ ಭಯೋತ್ಪಾದಕ ಗುರುಪತವಂತ ಸಿಂಹ ಇವನ ಬೆದರಿಕೆ

ನವ ದೆಹಲಿ – ‘ಸಿಖ್ ಫಾರ್ ಜಸ್ಟಿಸ್’ ಈ ನಿಷೇಧಿತ ಖಲಿಸ್ತಾನಿ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ಗುರುಪತವಂತ ಸಿಂಹ ಪನ್ನು ಇವನು ‘ನವೆಂಬರ್ ೧ ರಿಂದ ೧೯ ಈ ಕಾಲಾವಧಿಯಲ್ಲಿ ಏರ್ ಇಂಡಿಯಾ ವಿಮಾನದಿಂದ ಪ್ರವಾಸ ಮಾಡಬಾರದು. ೧೯೮೪ ರಲ್ಲಿ ದೆಹಲಿಯಲ್ಲಿ ನಡೆದಿರುವ ಸಿಖರ ನರಸಂಹಾರಕ್ಕೆ ೪೦ ನೇ ದಿನದ ಪ್ರಯುಕ್ತ ಏರ್ ಇಂಡಿಯಾ ವಿಮಾನಗಳ ಮೇಲೆ ದಾಳಿ ನಡೆಯುವ ಸಾಧ್ಯತೆ ಇದೆ’, ಎಂದು ಪ್ರಯಾಣಿಕರಿಗೆ ಬೆದರಿಕೆ ನೀಡಿದ್ದಾನೆ. ಕಳೆದ ಕೆಲವು ದಿನಗಳಿಂದ ಭಾರತೀಯ ವಿಮಾನಗಳಿಗೆ ನಿರಂತರವಾಗಿ ಬಾಂಬ್ ಸ್ಫೋಟದ ಬೆದರಿಕೆ ಬರುತ್ತಿವೆ. ಪನ್ನು ಇವನು ಕಳೆದ ವರ್ಷ ನವಂಬರ್ ನಲ್ಲಿ ಕೂಡ ಒಂದು ವಿಡಿಯೋದ ಮೂಲಕ ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹೆಸರು ಬದಲಾಯಿಸಲಾಗುವುದು ಮತ್ತು ಅದು ನವಂಬರ್ ೧೯ ರ ವರೆಗೆ ಮುಚ್ಚಲಾಗುವುದು, ಎಂದು ಬೆದರಿಕೆ ನೀಡಿದ್ದನು. ಅವನು ಆ ದಿನದಂದು ಜನರಿಗೆ ಏರ್ ಇಂಡಿಯಾದ ವಿಮಾನದಿಂದ ಪ್ರಯಾಣ ಮಾಡದಿರಲು ಸಲಹೆ ನೀಡಿದ್ದನು.

ಪಂಜಾಬದ ಮುಖ್ಯಮಂತ್ರಿ ಭಗವಂತ ಮಾನ ಇವರಿಗೂ ಜೀವ ಬೆದರಿಕೆ

ಖಲಿಸ್ತಾನಿ ಭಯೋತ್ಪಾದಕ ಗುರುಪತವಂತ ಸಿಂಹ ಪನ್ನು ಇವನು ಈ ವರ್ಷ ಗಣರಾಜ್ಯೋತ್ಸವದ ದಿನದಂದು ಪಂಜಾಬನ ಮುಖ್ಯಮಂತ್ರಿ ಭಗವಂತ ಮಾನ ಮತ್ತು ರಾಜ್ಯದ ಪೊಲೀಸ್ ಮಹಾಸಂಚಾಲಕ ಗೌರವ ಯಾದವ್ ಇವರಿಗೂ ಕೂಡ ಜೀವ ಬೆದರಿಕೆ ನೀಡಿದ್ದನು. ಅವನು ಗೂಂಡಾಗಳಿಗೆ ಒಟ್ಟಾಗಿ ಸೇರಿ ಜನವರಿ ೨೬ ರಂದು ಮುಖ್ಯಮಂತ್ರಿ ಭಗವಂತ ಮಾನ ಇವರ ಮೇಲೆ ದಾಳಿ ನಡೆಸಲು ಹೇಳಿದ್ದನು.

ಸಂಪಾದಕೀಯ ನಿಲುವು

  • ಪನ್ನು ಕೆನಡಾ ಮತ್ತು ಅಮೆರಿಕ ದೇಶದ ನಾಗರೀಕನಾಗಿರುವುದರಿಂದ ಭಾರತವು ಈ ದೇಶದ ಬಳಿ ಅವನ ಮೇಲೆ ಕ್ರಮ ಕೈಗೊಳ್ಳಲು ಆಗ್ರಹಿಸಬೇಕು ಮತ್ತು ವಿಶ್ವಸಂಸ್ಥೆಯಲ್ಲಿ ಕೂಡ ಇದರ ಕುರಿತು ಧ್ವನಿ ಎತ್ತಬೇಕು !
  • ಕೆನಡಾ ಮತ್ತು ಅಮೆರಿಕ ಈ ದೇಶಗಳಿಂದ ಭಾರತದಲ್ಲಿ ಬಹಿರಂಗವಾಗಿ ಭಯೋತ್ಪಾದನೆ ಚಟುವಟಿಕೆ ನಡೆಸುವ ಬೆದರಿಕೆ ನೀಡಲಾಗುತ್ತಿದೆ ಮತ್ತು ಈ ಎರಡು ದೇಶಗಳು ಇದರ ಬಗ್ಗೆ ಪನ್ನುವಿನ ಮೇಲೆ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಇದರಿಂದ ಎರಡು ದೇಶದ ಭಾರತದ್ವೇಷಿ ಮಾನಸಿಕತೆ ಸ್ಪಷ್ಟವಾಗುತ್ತದೆ. ಭಾರತವು ಇಬ್ಬರ ವಿರುದ್ಧ ಈಗ ಕಠೋರ ಆಗುವುದು ಆವಶ್ಯಕವಾಗಿದೆ !