ಕೆನಡಾ ಮತ್ತು ಅಮೆರಿಕಾ ದೇಶದಿಂದ ಪೋಷಿಸಿರುವ ಖಲಿಸ್ತಾನಿ ಭಯೋತ್ಪಾದಕ ಗುರುಪತವಂತ ಸಿಂಹ ಇವನ ಬೆದರಿಕೆ

ನವ ದೆಹಲಿ – ‘ಸಿಖ್ ಫಾರ್ ಜಸ್ಟಿಸ್’ ಈ ನಿಷೇಧಿತ ಖಲಿಸ್ತಾನಿ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ಗುರುಪತವಂತ ಸಿಂಹ ಪನ್ನು ಇವನು ‘ನವೆಂಬರ್ ೧ ರಿಂದ ೧೯ ಈ ಕಾಲಾವಧಿಯಲ್ಲಿ ಏರ್ ಇಂಡಿಯಾ ವಿಮಾನದಿಂದ ಪ್ರವಾಸ ಮಾಡಬಾರದು. ೧೯೮೪ ರಲ್ಲಿ ದೆಹಲಿಯಲ್ಲಿ ನಡೆದಿರುವ ಸಿಖರ ನರಸಂಹಾರಕ್ಕೆ ೪೦ ನೇ ದಿನದ ಪ್ರಯುಕ್ತ ಏರ್ ಇಂಡಿಯಾ ವಿಮಾನಗಳ ಮೇಲೆ ದಾಳಿ ನಡೆಯುವ ಸಾಧ್ಯತೆ ಇದೆ’, ಎಂದು ಪ್ರಯಾಣಿಕರಿಗೆ ಬೆದರಿಕೆ ನೀಡಿದ್ದಾನೆ. ಕಳೆದ ಕೆಲವು ದಿನಗಳಿಂದ ಭಾರತೀಯ ವಿಮಾನಗಳಿಗೆ ನಿರಂತರವಾಗಿ ಬಾಂಬ್ ಸ್ಫೋಟದ ಬೆದರಿಕೆ ಬರುತ್ತಿವೆ. ಪನ್ನು ಇವನು ಕಳೆದ ವರ್ಷ ನವಂಬರ್ ನಲ್ಲಿ ಕೂಡ ಒಂದು ವಿಡಿಯೋದ ಮೂಲಕ ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹೆಸರು ಬದಲಾಯಿಸಲಾಗುವುದು ಮತ್ತು ಅದು ನವಂಬರ್ ೧೯ ರ ವರೆಗೆ ಮುಚ್ಚಲಾಗುವುದು, ಎಂದು ಬೆದರಿಕೆ ನೀಡಿದ್ದನು. ಅವನು ಆ ದಿನದಂದು ಜನರಿಗೆ ಏರ್ ಇಂಡಿಯಾದ ವಿಮಾನದಿಂದ ಪ್ರಯಾಣ ಮಾಡದಿರಲು ಸಲಹೆ ನೀಡಿದ್ದನು.
ಪಂಜಾಬದ ಮುಖ್ಯಮಂತ್ರಿ ಭಗವಂತ ಮಾನ ಇವರಿಗೂ ಜೀವ ಬೆದರಿಕೆ
ಖಲಿಸ್ತಾನಿ ಭಯೋತ್ಪಾದಕ ಗುರುಪತವಂತ ಸಿಂಹ ಪನ್ನು ಇವನು ಈ ವರ್ಷ ಗಣರಾಜ್ಯೋತ್ಸವದ ದಿನದಂದು ಪಂಜಾಬನ ಮುಖ್ಯಮಂತ್ರಿ ಭಗವಂತ ಮಾನ ಮತ್ತು ರಾಜ್ಯದ ಪೊಲೀಸ್ ಮಹಾಸಂಚಾಲಕ ಗೌರವ ಯಾದವ್ ಇವರಿಗೂ ಕೂಡ ಜೀವ ಬೆದರಿಕೆ ನೀಡಿದ್ದನು. ಅವನು ಗೂಂಡಾಗಳಿಗೆ ಒಟ್ಟಾಗಿ ಸೇರಿ ಜನವರಿ ೨೬ ರಂದು ಮುಖ್ಯಮಂತ್ರಿ ಭಗವಂತ ಮಾನ ಇವರ ಮೇಲೆ ದಾಳಿ ನಡೆಸಲು ಹೇಳಿದ್ದನು.
ಸಂಪಾದಕೀಯ ನಿಲುವು
|
ಪ್ರತಿಯೊಂದು ಕಬ್ರ ಅಥವಾ ದರ್ಗಾ ‘ವಕ್ಫ್ ಬೋರ್ಡ್’ ಆಸ್ತಿಯಲ್ಲ! : Madras High Court
ಭಾರತ, ರಷ್ಯಾ ಮತ್ತು ಚೀನಾ ನಡುವಿನ ದೃಢವಾದ ಸಂಬಂಧ ಜಾಗತಿಕ ಸ್ಥಿರತೆಗೆ ಮುಖ್ಯ! – ಚೀನಾ : China
ವಿಶಾಖಪಟ್ಟಣಂ : ಕಾರ್ಖಾನೆಯಲ್ಲಿ ಕರಗಿದ್ದ ಉಕ್ಕು ಬಿದ್ದು 8 ಕಾರ್ಮಿಕರ ಸಾವು
ದೇಶದಲ್ಲಿ 76 ರಿಂದ 80 ದಿನಗಳ ಇಂಧನ ದಾಸ್ತಾನು ಬಾಕಿ ! – ಪೆಟ್ರೋಲಿಯಂ ಸಚಿವ
ಗೋಕರ್ಣದಲ್ಲಿ ಕ್ಷೇತ್ರದಲ್ಲಿ ಅಪಚಾರ : ಕೊಳಚೆ ನೀರಿನಲ್ಲಿ ಮುಳುಗಿದ ಗೋಕರ್ಣದ ಆತ್ಮಲಿಂಗ!
ವಲ್ಲಭನಗರ (ಪಿಂಪರಿ-ಚಿಂಚವಡ) ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಅನಾನುಕೂಲಗಳ ‘ಪ್ರಯಾಣ’ ಮುಂದುವರಿದಿದೆ !