ಭಯೋತ್ಪಾದಕ ದಾಳಿಯ ಸಂದೇಹ

ನವದೆಹಲಿ – ಇಲ್ಲಿಯ ರೋಹಿಣಿ ಸೆಕ್ಟರ್ ೧೨ರ ಪ್ರಶಾಂತ ವಿಹಾರ ಪರಿಸರದಲ್ಲಿರುವ CRPF (ಕೇಂದ್ರೀಯ ಮೀಸಲು ಪೊಲೀಸ್ ಪಡೆ)ನ ಶಾಲೆಯ ಗೋಡೆಯ ಹತ್ತಿರ ಬೆಳಿಗ್ಗೆ ಭಾರಿ ಸ್ಫೋಟ ಸಂಭವಿಸಿದೆ. ಸ್ಪೋಟದಿಂದ ಆಕಾಶದಲ್ಲಿ ಹೊಗೆ ಆವರಿಸಿತ್ತು. ಇದನ್ನು ನೋಡಿದ ಜನರು ಭಯಭೀತರಾದರು. ಈ ಸ್ಪೋಟದಲ್ಲಿ ಯಾವುದೇ ಜೀವ ಹಾನಿ ಆಗಿಲ್ಲ. ಇಲ್ಲಿಯ ಕೆಲವು ಅಂಗಡಿಗಳಿಗೆ ಹಾನಿ ಆಗಿದೆ ಹಾಗೂ ಇಲ್ಲಿ ನಿಂತಿದ್ದ ವಾಹನಗಳ ಗಾಜುಗಳು ಒಡೆದಿವೆ.
೧. ಪೊಲೀಸ ಉಪಾಯುಕ್ತ ಅಮಿತ ಗೋಯಲ ಇವರು ಮಾತನಾಡಿ, ನಾವು ಈ ಸ್ಪೋಟದ ಕಾರಣ ಹುಡುಕುವ ಪ್ರಯತ್ನ ಮಾಡುತ್ತಿದ್ದೇವೆ. ಅದಕ್ಕಾಗಿ ಕೆಲವು ತಜ್ಞರ ತಂಡ ಕರೆಸಬೇಕಿದೆ. ಈ ಸ್ಫೋಟ ಯಾವುದರದು, ಎಂಬುದು ಇಲ್ಲಿಯವರೆಗೆ ತಿಳಿದು ಬಂದಿಲ್ಲ. ತಜ್ಞರ ತಂಡ ತನಿಖೆ ನಡೆಸಿ ಇದರ ಮಾಹಿತಿ ನೀಡುವರೆಂದು ಹೇಳಿದರು.
೨. ಪೊಲೀಸರು, ಈ ಸ್ಫೋಟದ ಹಿಂದೆ ಭಯೋತ್ಪಾದಕರ ನಂಟಿದಿಯೇ ? ಈ ದೃಷ್ಟಿಯಿಂದ ಕೂಡ ತನಿಖೆ ನಡೆಸಲಾಗುವುದು. ಈಗ ಹತ್ತಿರದ ಪೊಲೀಸ ಠಾಣೆಗಳಿಗೆ ಜಾಗೃತೆಯ ಎಚ್ಚರಿಕೆ ನೀಡಲಾಗಿದೆ. ಮಾರುಕಟ್ಟೆಯಲ್ಲಿ ಗಸ್ತು ಪರೆಡ್ ಕೂಡ ಹೆಚ್ಚಿಸಲಾಗಿದೆ. ಜನರು ಯಾವುದೇ ಅನುಮಾನಾಸ್ಪದ ವಸ್ತು ಕಂಡುಬಂದರೆ ತಕ್ಷಣ ಪೊಲೀಸರಿಗೆ ತಿಳಿಸಬೇಕೆಂದು ಕರೆ ನೀಡಿದ್ದಾರೆ, ಎಂದು ಹೇಳಿದರು.
೩. ಘಟನಾಸ್ಥಳಕ್ಕೆ ಬಂದು ‘ನ್ಯಾಷನಲ್ ಸೆಕ್ಯೂರಿಟಿ ಗಾರ್ಡ್’ ಪಡೆಯಿಂದ ಕೂಡ ಪರಿಶೀಲನೆ ನಡೆಸಲಾಗುತ್ತಿದೆ. ಆ ಸ್ಥಳದಲ್ಲಿ ಬಿಳಿಯ ಪೌಡರ್ ದೊರೆತಿರುವುದರಿಂದ ವಿಧಿ ವಿಜ್ಞಾನ ಪ್ರಯೋಗಾಲಯದಿಂದ ಅದರ ತನಿಖೆ ನಡೆಸುವರು. ಯಾವುದಾದರೂ ದೊಡ್ಡ ಭಯೋತ್ಪಾದಕ ದಾಳಿಗಾಗಿ ಇದು ಪರೀಕ್ಷೆ ಆಗಿದೆಯೇ ? ಈ ಸಾಧ್ಯತೆಯ ಬಗ್ಗೆ ಕೂಡ ಪರಿಶೀಲಿಸಲಾಗುವುದು.
ಪ್ರತಿಯೊಂದು ಕಬ್ರ ಅಥವಾ ದರ್ಗಾ ‘ವಕ್ಫ್ ಬೋರ್ಡ್’ ಆಸ್ತಿಯಲ್ಲ! : Madras High Court
ವಿಶಾಖಪಟ್ಟಣಂ : ಕಾರ್ಖಾನೆಯಲ್ಲಿ ಕರಗಿದ್ದ ಉಕ್ಕು ಬಿದ್ದು 8 ಕಾರ್ಮಿಕರ ಸಾವು
ದೇಶದಲ್ಲಿ 76 ರಿಂದ 80 ದಿನಗಳ ಇಂಧನ ದಾಸ್ತಾನು ಬಾಕಿ ! – ಪೆಟ್ರೋಲಿಯಂ ಸಚಿವ
ಗೋಕರ್ಣದಲ್ಲಿ ಕ್ಷೇತ್ರದಲ್ಲಿ ಅಪಚಾರ : ಕೊಳಚೆ ನೀರಿನಲ್ಲಿ ಮುಳುಗಿದ ಗೋಕರ್ಣದ ಆತ್ಮಲಿಂಗ!
ವಲ್ಲಭನಗರ (ಪಿಂಪರಿ-ಚಿಂಚವಡ) ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಅನಾನುಕೂಲಗಳ ‘ಪ್ರಯಾಣ’ ಮುಂದುವರಿದಿದೆ !
‘ಹಲಾಲ್ ತೆರಿಗೆ’ ಎನ್ನುವುದು ಹಿಂದೂಗಳ ಜೇಬಿನಿಂದ ವಸೂಲಿ ಮಾಡಲಾಗುತ್ತಿರುವ ‘ಜಿಜಿಯಾ ತೆರಿಗೆಯೇ’ ಆಗಿದೆ! – ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ