ಉತ್ತರಖಂಡದಲ್ಲಿನ ಮುಸಲ್ಮಾನರಿಂದ ಅಪ್ರಾಪ್ತ ಹಿಂದು ಹುಡುಗಿಯ ಮೇಲೆ ಬಲತ್ಕಾರ

ಆಕ್ರೋಶಿತ ಹಿಂದುಗಳಿಂದ ಎಲ್ಲಾ ಮುಸಲ್ಮಾನರಿಗೆ ೮ ದಿನಗಳಲ್ಲಿ ಗ್ರಾಮ ತೊರೆಯುವಂತೆ ಎಚ್ಚರಿಕೆ

ನವ ದೆಹಲಿ – ದೇವಭೂಮಿ ಉತ್ತರಖಂಡದಲ್ಲಿನ ಚಮೋಲಿಯಲ್ಲಿ ಓರ್ವ ಅಪ್ರಾಪ್ತ ಹಿಂದೂ ಹುಡುಗಿಯ ಮೇಲೆ ಮುಸಲ್ಮಾನ ಯುವಕನು ಬಲಾತ್ಕಾರ ಮಾಡಿದನು. ಈ ಘಟನೆಯ ನಂತರ ಹಿಂದೂಗಳು ರಸ್ತೆ ತಡೆ ಪ್ರತಿಭಟನೆ ನಡೆಸಿದರು. ಮುಸಲ್ಮಾನ ಯುವಕನ ಈ ಅಸಹ್ಯಾಕರ ಕೃತ್ಯದಿಂದ ಹಿಂದೂ ಸಂಘಟನೆ ಮತ್ತು ಸ್ಥಳೀಯ ಜನರಲ್ಲಿ ಆಕ್ರೋಶದ ಅಲೆ ಭುಗಿಲೆದ್ದಿದೆ. ಬಲಾತ್ಕಾರಿ ದಿಲಬರ್ ಖಾನ್ ಇವನನ್ನು ಪೊಲೀಸರು ಥರಳಿ ಮಾರುಕಟ್ಟೆಯಲ್ಲಿ ಬಂಧಿಸಿದ್ದಾರೆ. ಅವನು ಅಕ್ಟೋಬರ್ ೧೦ ರಂದು ಅಪ್ರಾಪ್ತ ಹಿಂದೂ ಹುಡುಗಿಯ ಮೇಲೆ ಬಲಾತ್ಕಾರ ನಡೆಸಿ ಅಶ್ಲೀಲ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದ್ದ. (ಭಾರತದಲ್ಲಿ ಅಲ್ಪಸಂಖ್ಯಾತರ ಅಸುರಕ್ಷಿತ ಎಂದು ಕೂಗಾಡುವ ಕಮ್ಯೂನಿಸ್ಟ್ ಪ್ರಸಾರ ಮಾಧ್ಯಮಗಳು, ಕಥಿತ ವಿಚಾರವಾದಿಗಳು, ಕಮ್ಯುನಿಸ್ಟರು, ಸರ್ವಧರ್ಮಸಮಭಾವದವರು, ಅರ್ಬನ್ ನಕ್ಸಲರು ಇವರಿಗೆ ಅಲ್ಪಸಂಖ್ಯಾತ ಮುಸಲ್ಮಾನರ ಅಸಹ್ಯಕರ ಕೃತ್ಯಗಳು ಕಾಣುವುದಿಲ್ಲ ಅಥವಾ ಅವರು ಬೇಕಂತಲೇ ನಿರ್ಲಕ್ಷಿಸುತ್ತಾರೆ ? – ಸಂಪಾದಕರು) ಆಕ್ರೋಶಗೊಂಡಿರುವ ಹಿಂದುಗಳು ದಿಲಬರ್ ಖಾನನಿಗೆ ಗಲ್ಲು ಶಿಕ್ಷೆ ವಿಧಿಸಲು ಆಗ್ರಹಿಸಿದ್ದಾರೆ. ಹಾಗೂ ೮ ದಿನದಲ್ಲಿ ಎಲ್ಲಾ ಮುಸಲ್ಮಾನರು ಥರಳಿ ಗ್ರಾಮ ಬಿಟ್ಟು ಹೋಗಲು ಎಚ್ಚರಿಕೆ ನೀಡಿದ್ದಾರೆ.

ಥರಳಿ ಪರಿಸರದಲ್ಲಿ ಪೊಲೀಸ ನೇಮಕ !

ಈ ಘಟನೆಯನ್ನು ಖಂಡಿಸಿ ಪಿಂಡರ ಕಣಿವೆಯಲ್ಲಿನ ಜನರು ಅಕ್ಟೋಬರ್ ೧೦ ರಂದು ದಿನವಿಡೀ ಥರಳಿ ಮಾರುಕಟ್ಟೆ ಮುಚ್ಚಿದ್ದರು. ಬಲಾತ್ಕಾರಿ ದಿಲಬರ್ ಖಾನ್ ಇವನು ಇಲ್ಲಿ ಕ್ಷೌರನಾಗಿ ಕೆಲಸ ಮಾಡುತ್ತಿದ್ದನು. ಅವನು ಇನ್ಸ್ಟಾಗ್ರಾಮ್ ನಲ್ಲಿ ಸಂತ್ರಸ್ತ ಹಿಂದೂ ಹುಡುಗಿಯ ಜೊತೆಗೆ ಸ್ನೇಹ ಬೆಳೆಸಿದನು. ಆಕೆಯನ್ನು ಪ್ರೀತಿಯ ಬಲೆಗೆ ಸಿಲುಕಿಸಿ ಮತ್ತು ಬರುವ ಔಷಧಿ ಕುಡಿಸಿ ಆಕೆಯ ಮೇಲೆ ಬಲಾತ್ಕಾರ ಮಾಡಿದನು. ಅದರ ವಿಡಿಯೋ ತಯಾರಿಸಿ ಅದನ್ನು ಪ್ರಸಾರ ಮಾಡಿದನು. ಥರಳಿ ಪರಿಸರದಲ್ಲಿನ ಪರಿಸ್ಥಿತಿಯನ್ನು ಹತೋಟಿಗೆ ತರಲು ಬೃಹತ್ ಪೊಲೀಸ ಬಂದೋಬಸ್ತ್ ಮಾಡಲಾಗಿದೆ.

ಸಂಪಾದಕೀಯ ನಿಲುವು

ಭಾರತದಲ್ಲಿ ಅಲ್ಪಸಂಖ್ಯಾತ ಮುಸಲ್ಮಾನರು ಅಥವಾ ಬಹು ಸಂಖ್ಯಾತ ಹಿಂದೂಗಳು ಅಸುರಕ್ಷಿತ ?