|

ತಿರುವನಂತಪುರಮ(ಕೇರಳ) – ಶಬರಿಮಲಾ ದೇವಸ್ಥಾನದಲ್ಲಿ ದರ್ಶನಕ್ಕಾಗಿ ಬರುವ ಭಕ್ತರಿಗೆ `ಅರವಣ ಪ್ರಸಾದ’ ನೀಡಲಾಗುತ್ತದೆ.ಅಯ್ಯಪ್ಪಾ ಸ್ವಾಮಿಯ ಚಿತ್ರ ಮುದ್ರಿತಗೊಂಡಿರುವ ಚಿಕ್ಕ ಡಬ್ಬಿಯಲ್ಲಿ ಈ ಪ್ರಸಾದವನ್ನು ಭಕ್ತರಿಗೆ ನೀಡಲಾಗುತ್ತದೆ. ಕಳೆದ ಒಂದು ವರ್ಷದಿಂದ ಸಂಗ್ರಹಿಸಿಡಲಾಗಿದ್ದ ಅರವಣ ಪ್ರಸಾದದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹುಳುಗಳು ಕಂಡು ಬಂದಿದ್ದರಿಂದ 2023 ರ ಜನವರಿಯಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ದೂರು ದಾಖಲಿಸಲಾಗಿತ್ತು. ಆದರೆ ದೂರುದಾರರು ಈ ಸಂದರ್ಭದಲ್ಲಿ ಯಾವುದೇ ದಾಖಲೆಗಳನ್ನು ಹಾಜರು ಪಡಿಸಿರಲಿಲ್ಲ; ಎಂದು ಸರ್ವೋಚ್ಚ ನ್ಯಾಯಾಲಯವು ದೂರನ್ನು ವಜಾಗೊಳಿಸಿತ್ತು. ತದನಂತರ ಈ ದೇವಸ್ಥಾನದ ನಿಯಂತ್ರಣ ಹೊಂದಿರುವ ತ್ರಾವಣಕೋರ ದೇವಸ್ವಮ್ ಬೋರ್ಡ್ನ ಸುಮಾರು 6 ಲಕ್ಷ 65 ಸಾವಿರ ಡಬ್ಬಿಗಳಲ್ಲಿ (ಟಿನ್ ಕಂಟೇನರಗಳಲ್ಲಿ) ಸಂಗ್ರಹಿಸಲಾಗಿದ್ದ ಅರವಣ ಪ್ರಸಾದವನ್ನು ದೀರ್ಘಕಾಲದ ವರೆಗೆ ಸಂಗ್ರಹಿಸಿಟ್ಟಿದ್ದರಿಂದ ಭಕ್ತರಿಗೆ ವಿತರಿಸದಿರುವಂತೆ ನಿರ್ಣಯಿಸಿದ್ದಾರೆ. ಮೊದಲು ಈ ಪ್ರಸಾದವನ್ನು ಕಾಡಿನಲ್ಲಿ ಎಸೆಯಲು ಪ್ರಸ್ತಾವನೆಯನ್ನು ಮಂಡಿಸಲಾಗಿತ್ತು; ಆದರೆ ಪ್ರಸಾದವನ್ನು ಅರಣ್ಯದಲ್ಲಿ ಎಸೆಯುವ ಬದಲಾಗಿ ಅದನ್ನು ವೈಜ್ಞಾನಿಕ ಪದ್ಧತಿಯಿಂದ ಸಂಸ್ಕರಿಸಿ ಗೊಬ್ಬರವಾಗಿ ಪರಿವರ್ತಿಸುವುದು ಸೂಕ್ತವೆಂದು ಅಂತಿಮವಾಗಿ ನಿರ್ಧರಿಸಲಾಯಿತು. ಈ ಪ್ರಸಾದದ ಒಟ್ಟು ಮೌಲ್ಯ ಐದೂವರೆ ಕೋಟಿಗಳಷ್ಟು ಇದೆಯೆಂದು ಹೇಳಲಾಗುತ್ತಿದೆ.
ಸಂಪಾದಕೀಯ ನಿಲುವುಯಾವುದೇ ಪ್ರಸಾದ ದೀರ್ಘಕಾಲ ಏಕೆ ಸಂಗ್ರಹಿಸಿಡಲಾಗುತ್ತದೆ ? |
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ