ಅಪ್ರಾಪ್ತ ಹುಡುಗರಿಂದ ವೈದ್ಯನ ಕೊಲೆ !

ನವದೆಹಲಿ – ದೆಹಲಿಯ ಕಾಳಿಂದಿ ಕುಂಜ್‌ನಲ್ಲಿರುವ ಜೈತ್ ಪುರ ಪ್ರದೇಶದಲ್ಲಿನ ನೀಮಾ ಆಸ್ಪತ್ರೆಯಲ್ಲಿ ಓರ್ವ 55 ವರ್ಷದ ವೈದ್ಯನನ್ನು ಇಬ್ಬರು ಅಪ್ರಾಪ್ತ ಹುಡುಗರು ಗುಂಡಿಕ್ಕಿ ಕೊಂದಿದ್ದಾರೆ. ಮೃತರ ಹೆಸರು ಯುನಾನಿ ವೈದ್ಯ ಜಾವೇದ್ ಅಖ್ತರ್ ಎಂದಿದೆ. ಘಟನೆ ಬಳಿಕ ಇಬ್ಬರು ಆರೋಪಿಗಳೂ ಪರಾರಿಯಾಗಿದ್ದಾರೆ. ಅವರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.(ಇದು ಪೋಲೀಸ್ ಮತ್ತು ಆಡಳಿತಕ್ಕೆ ಲಜ್ಯಾಸ್ಪದ ! – ಸಂಪಾದಕರು)

ಆಸ್ಪತ್ರೆಯ ಸಿಬ್ಬಂದಿ ನೀಡಿರುವ ಮಾಹಿತಿ ಪ್ರಕಾರ, ಆರೋಪಿಗಳಿಬ್ಬರ ವಯಸ್ಸು 16-17 ವರ್ಷ ಇರಬಹುದು. ಆರೋಪಿಗಳಲ್ಲಿ ಒಬ್ಬನಿಗೆ ಅಕ್ಟೋಬರ್ 1 ರಂದು ಕಾಲಿನ ಗಾಯಕ್ಕೆ ಚಿಕಿತ್ಸೆ ನೀಡಲಾಗಿತ್ತು. ಅಕ್ಟೋಬರ್ 2 ರಂದು ಅವನು ಆಸ್ಪತ್ರೆಗೆ ರಾತ್ರಿ ತಡವಾಗಿ ಬರುವಾಗ ಮತ್ತೊಬ್ಬ ಹುಡುಗನನ್ನು ಕರೆದುಕೊಂಡು ಬಂದನು. ಆರೋಪಿಗಳಿಬ್ಬರೂ ತಮಗೆ ಪ್ರಿಸ್ಕ್ರಿಪ್ಷನ್ ನ (ವೈದ್ಯರ ಸಲಹಾ ಚೀಟಿಯ) ಅವಶ್ಯಕತೆ ಇದೆ ಎಂದು ಹೇಳಿ ಡಾಕ್ಟರ್ ಜಾವೇದ್ ಅವರನ್ನು ಭೇಟಿಯಾಗಲು ಅವರ ಕ್ಯಾಬಿನ್‌ ಒಳಗೆ ಹೋದರು. ಅಲ್ಲಿ ವೈದ್ಯರ ಮೇಲೆ ಗುಂಡು ಹಾರಿಸಿ ಆರೋಪಿಗಳು ಓಡಿ ಹೋದರು. ಈ ಘಟನೆಯ ಮಾಹಿತಿ ಸಿಕ್ಕಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಈ ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂಪಾದಕೀಯ ನಿಲುವು

ಇಂತಹವರನ್ನು ಅಪ್ರಾಪ್ತರೆಂದು ಕರೆಯಬಹುದೇ ? ಇಂತಹ ಹುಡುಗರಿಗೆ ದೊಡ್ಡವರಿಗೆ ನೀಡುವಷ್ಟೇ ಶಿಕ್ಷೆ ನೀಡುವುದು ಅವಶ್ಯಕ !