
ನವದೆಹಲಿ – ದೆಹಲಿಯ ಕಾಳಿಂದಿ ಕುಂಜ್ನಲ್ಲಿರುವ ಜೈತ್ ಪುರ ಪ್ರದೇಶದಲ್ಲಿನ ನೀಮಾ ಆಸ್ಪತ್ರೆಯಲ್ಲಿ ಓರ್ವ 55 ವರ್ಷದ ವೈದ್ಯನನ್ನು ಇಬ್ಬರು ಅಪ್ರಾಪ್ತ ಹುಡುಗರು ಗುಂಡಿಕ್ಕಿ ಕೊಂದಿದ್ದಾರೆ. ಮೃತರ ಹೆಸರು ಯುನಾನಿ ವೈದ್ಯ ಜಾವೇದ್ ಅಖ್ತರ್ ಎಂದಿದೆ. ಘಟನೆ ಬಳಿಕ ಇಬ್ಬರು ಆರೋಪಿಗಳೂ ಪರಾರಿಯಾಗಿದ್ದಾರೆ. ಅವರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.(ಇದು ಪೋಲೀಸ್ ಮತ್ತು ಆಡಳಿತಕ್ಕೆ ಲಜ್ಯಾಸ್ಪದ ! – ಸಂಪಾದಕರು)
ಆಸ್ಪತ್ರೆಯ ಸಿಬ್ಬಂದಿ ನೀಡಿರುವ ಮಾಹಿತಿ ಪ್ರಕಾರ, ಆರೋಪಿಗಳಿಬ್ಬರ ವಯಸ್ಸು 16-17 ವರ್ಷ ಇರಬಹುದು. ಆರೋಪಿಗಳಲ್ಲಿ ಒಬ್ಬನಿಗೆ ಅಕ್ಟೋಬರ್ 1 ರಂದು ಕಾಲಿನ ಗಾಯಕ್ಕೆ ಚಿಕಿತ್ಸೆ ನೀಡಲಾಗಿತ್ತು. ಅಕ್ಟೋಬರ್ 2 ರಂದು ಅವನು ಆಸ್ಪತ್ರೆಗೆ ರಾತ್ರಿ ತಡವಾಗಿ ಬರುವಾಗ ಮತ್ತೊಬ್ಬ ಹುಡುಗನನ್ನು ಕರೆದುಕೊಂಡು ಬಂದನು. ಆರೋಪಿಗಳಿಬ್ಬರೂ ತಮಗೆ ಪ್ರಿಸ್ಕ್ರಿಪ್ಷನ್ ನ (ವೈದ್ಯರ ಸಲಹಾ ಚೀಟಿಯ) ಅವಶ್ಯಕತೆ ಇದೆ ಎಂದು ಹೇಳಿ ಡಾಕ್ಟರ್ ಜಾವೇದ್ ಅವರನ್ನು ಭೇಟಿಯಾಗಲು ಅವರ ಕ್ಯಾಬಿನ್ ಒಳಗೆ ಹೋದರು. ಅಲ್ಲಿ ವೈದ್ಯರ ಮೇಲೆ ಗುಂಡು ಹಾರಿಸಿ ಆರೋಪಿಗಳು ಓಡಿ ಹೋದರು. ಈ ಘಟನೆಯ ಮಾಹಿತಿ ಸಿಕ್ಕಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಈ ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂಪಾದಕೀಯ ನಿಲುವುಇಂತಹವರನ್ನು ಅಪ್ರಾಪ್ತರೆಂದು ಕರೆಯಬಹುದೇ ? ಇಂತಹ ಹುಡುಗರಿಗೆ ದೊಡ್ಡವರಿಗೆ ನೀಡುವಷ್ಟೇ ಶಿಕ್ಷೆ ನೀಡುವುದು ಅವಶ್ಯಕ ! |
ವಲ್ಲಭನಗರ (ಪಿಂಪರಿ-ಚಿಂಚವಡ) ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಅನಾನುಕೂಲಗಳ ‘ಪ್ರಯಾಣ’ ಮುಂದುವರಿದಿದೆ !
‘ಹಲಾಲ್ ತೆರಿಗೆ’ ಎನ್ನುವುದು ಹಿಂದೂಗಳ ಜೇಬಿನಿಂದ ವಸೂಲಿ ಮಾಡಲಾಗುತ್ತಿರುವ ‘ಜಿಜಿಯಾ ತೆರಿಗೆಯೇ’ ಆಗಿದೆ! – ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ
ಇಬ್ಬರು ಮಕ್ಕಳ ತಂದೆ ಅರ್ಬಾಜ್ನಿಂದ ಹಿಂದೂ ಯುವತಿಯ ಲೈಂಗಿಕ ಶೋಷಣೆ
‘ನೀಟ್’ ಮರುಪರೀಕ್ಷೆಯ ಪ್ರಶ್ನೆಪತ್ರಿಕೆ ಸಿದ್ಧಪಡಿಸುವ ತಜ್ಞರಿಗೆ ಜೂನ್ 21 ರವರೆಗೆ ಅಜ್ಞಾತವಾಸ!
ಪಶ್ಚಿಮ ಬಂಗಾಳ: ಜಾದವ್ಪುರ ರೈಲ್ವೆ ನಿಲ್ದಾಣ ಬಳಿಯ ಅನಧಿಕೃತ ಕಟ್ಟಡಗಳ ತೆರವಿಗೆ ವಿರೋಧ!
ಭಾರತದ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿ ದಾಖಲೆ ನಿರ್ಮಿಸಿದ ಪ್ರಧಾನಿ ಮೋದಿ!