Drink Gomutra Before Garba : ಗರಬಾದಲ್ಲಿ ಪ್ರವೇಶಿಸುವವರಿಗೆ ಗೋಮೂತ್ರ ಸೇವಿಸಲು ನೀಡಿರಿ ! – ಭಾಜಪ ಜಿಲ್ಲಾಧ್ಯಕ್ಷ ಚಿಂಟೂ ವರ್ಮಾ

  • ಭಾಜಪ ಜಿಲ್ಲಾಧ್ಯಕ್ಷರ ಆಗ್ರಹ

  • ಹಿಂದೂಯೇತರರಿಗೆ ಗರಬಾದ ಪ್ರವೇಶವನ್ನು ತಡೆಯಲು ಸೂಚಿಸಿರುವ ಉಪಾಯ

ಇಂದೋರ್ – ಕಳೆದ ಕೆಲವು ವರ್ಷಗಳಿಂದ ಗರಬಾ ಸ್ಥಳಗಳಲ್ಲಿ ಲವ್ ಜಿಹಾದ್ ಪ್ರಕರಣಗಳು ಬೆಳಕಿಗೆ ಬಂದಿದ್ದರಿಂದ ನವರಾತ್ರಿ ಉತ್ಸವ ಮಂಡಳಿಗಳಲ್ಲಿ ಹಿಂದೂಯೇತರರಿಗೆ ಪ್ರವೇಶವನ್ನು ಅನುಮತಿಸದಿರುವಲ್ಲಿ ಮಂಡಳಿಗಳು ಬಲವಾದ ನಿಲುವನ್ನು ಹೊಂದಿವೆ. ಹಿಂದೂಯೇತರರು ನವರಾತ್ರಿ ಉತ್ಸವದಲ್ಲಿ ಗರಬಾ ಆಡಬಾರದು. ಇದಕ್ಕಾಗಿ ಹಲವರು ವಿವಿಧ ಉಪಾಯ ಯೋಜನೆಗಳನ್ನು ಸೂಚಿಸಿದ್ದಾರೆ. ಇಂದೂರ ಜಿಲ್ಲೆಯ ಭಾಜಪ ಜಿಲ್ಲಾಧ್ಯಕ್ಷ ಚಿಂಟೂ ವರ್ಮಾ ಇವರು `ಗರಬಾ ಮಂಟಪದಲ್ಲಿ ಬರುವವರಿಗೆ ಗೊಮೂತ್ರವನ್ನು ಸೇವಿಸಲು ನೀಡಬೇಕು’ ಎಂದು ಸಂಘಟಕರಿಗೆ ಸೂಚನೆ ನೀಡಿದ್ದಾರೆ.

ಶ್ರೀ. ಚಿಂಟು ವರ್ಮಾ ಹೇಳಿದರು,

1. ಗರಬಾ ಸಂಘಟಕರಿಗೆ, ಅವರು `ಗರಬಾ ಮಂಟಪದಲ್ಲಿ ಪ್ರವೇಶಿಸುವವರು ಹಿಂದೂಗಳೇ ಆಗಿದ್ದಾರೆಯೇ?’ ಎನ್ನುವುದನ್ನು ದೃಢಪಡಿಸಿಕೊಳ್ಳಬೇಕು. ಅದಕ್ಕಾಗಿ ಅವರು ಮಂಟಪಕ್ಕೆ ಪ್ರವೇಶಿಸುವವರಿಗೆ ಗೋಮೂತ್ರವನ್ನು ಸೇವಿಸಲು ನೀಡಬೇಕು ಎಂದು ಕರೆ ನೀಡಿದ್ದಾರೆ.

2. ಕೆಲವೊಮ್ಮೆ ಬೇರೆ ಜನರು ಗರಬಾ ಸ್ಥಳಕ್ಕೆ ಬಂದಿರುವುದು ಕಂಡು ಬಂದಿದೆ. ಆಧಾರ್ ಕಾರ್ಡ್‌ನಲ್ಲಿಯೂ ಬದಲಾವಣೆಗಳನ್ನು ಮಾಡಲಾಗುತ್ತದೆ. ಇದರಿಂದ ಯಾವುದೇ ವ್ಯಕ್ತಿಯ ನಿಜವಾದ ಗುರುತು ಮರೆಮಾಚಲು ಸಾಧ್ಯವಾಗುತ್ತದೆ. ಆದ್ದರಿಂದ `ವ್ಯಕ್ತಿಯು ಹಿಂದೂ ಆಗಿದ್ದಾರೆಯೇ ಅಥವಾ ಅಲ್ಲವೇ?’ ಎಂಬುದನ್ನು ಹೇಗೆ ಕಂಡು ಹಿಡಿಯುತ್ತೀರಿ ?

3. ಇದನ್ನು ಗಮನದಲ್ಲಿಟ್ಟುಕೊಂಡು ಗರಬಾ ಆಡಲು ಮಂಟಪದಲ್ಲಿ ಪ್ರವೇಶಿಸುವ ಎಲ್ಲರಿಗೂ ಗೋಮೂತ್ರ ಸೇವಿಸುವಂತೆ ಕಡ್ಡಾಯಗೊಳಿಸಬೇಕು. ಹಿಂದೂ ಆಗಿರುವ ವ್ಯಕ್ತಿ ಇದನ್ನು ನಿರಾಕರಿಸುವುದಿಲ್ಲ.

ಸಂಪಾದಕೀಯ ನಿಲುವು

ಕಳೆದ ಕೆಲವು ವರ್ಷಗಳಲ್ಲಿ ಗರಬಾದಲ್ಲಿ ಮುಸಲ್ಮಾನರಿಗೆ ಪ್ರವೇಶ ಸಿಗಬಾರದು ಎಂದು ಹಿಂದೂಗಳು ಜಾಗರೂಕರಾಗಿ ಪ್ರಯತ್ನಿಸುತ್ತಿದ್ದಾರೆ. ಇದು ಶ್ಲಾಘನೀಯವಾಗಿದೆ. ಹೀಗಿದ್ದರೂ, ಹಿಂದೂ ಹುಡುಗಿಯರ ಜೀವನವನ್ನು ಹಾಳು ಮಾಡುವುದನ್ನು ಬಿಡಿರಿ, ಅವರನ್ನು ವಕ್ರ ದೃಷ್ಟಿಯಿಂದ ನೋಡುವುದೂ ಮತಾಂಧ ಮುಸಲ್ಮಾನರಿಗೆ ಧೈರ್ಯವಾಗದಂತೆ ಹಿಂದೂಗಳು ಸಂಘಟನೆ ನಿರ್ಮಾಣ ಮಾಡುವ ಆವಶ್ಯಕತೆಯಿದೆ !

‘ಭಾಜಪದಿಂದ ಸಮಾಜದಲ್ಲಿ ಬಿರುಕು ಮೂಡಿಸುವ ಪ್ರಯತ್ನವಂತೆ !’ – ಕಾಂಗ್ರೆಸ್

ಮಧ್ಯಪ್ರದೇಶ ಕಾಂಗ್ರೆಸ್ ವಕ್ತಾರ ನೀಲಭ ಶುಕ್ಲಾ ಮಾತನಾಡಿ, ಭಾಜಪಕ್ಕೆ ಗೋಮೂತ್ರದ ರಾಜಕಾರಣ ಮಾಡುವುದಿದೆ. ಭಾಜಪದಿಂದ ಗೋಮೂತ್ರ ಸೇವನೆಯ ಆಗ್ರಹ ಮುನ್ನೆಲೆಗೆ ಬಂದಿದ್ದರಿಂದ ಸಮಾಜದಲ್ಲಿ ಮತ್ತಷ್ಟು ಧ್ರುವೀಕರಣ ಹೆಚ್ಚಾಗುವುದು. ಮೊದಲು ಭಾಜಪ ನಾಯಕರು ಗರಬಾ ಮಂಟಪದಲ್ಲಿ ಪ್ರವೇಶಿಸುವಾಗ ಗೋಮೂತ್ರ ಸೇವಿಸಬೇಕು ಮತ್ತು ಆ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಬೇಕು ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಹಿಂದೂಗಳ ರಕ್ಷಣೆಗಾಗಿ ಸ್ವತಃ ತಾವು ಏನನ್ನೂ ಮಾಡುವುದಿಲ್ಲ ಮತ್ತು ಇತರರು ಪ್ರಯತ್ನಿಸುತ್ತಿದ್ದರೆ, ಅವರನ್ನು ಟೀಕಿಸುವುದು ಕಾಂಗ್ರೆಸ್ಸಿಗರ ಹಳೆಯ ಚಾಳಿಯಾಗಿದೆ. ಇಂತಹವರ ರಾಜಕೀಯ ಅಸ್ವಿತ್ವವನ್ನು ಅಂತ್ಯಗೊಳಿಸುವ ಸಮಯ ಈಗ ಬಂದಿದೆ !