
ಕಠುವಾ (ಜಮ್ಮು) – ಭಯೋತ್ಪಾದಕರಿಗೆ ಬೆಂಬಲ ನೀಡುವ ಪಾಕಿಸ್ತಾನಕ್ಕೆ ಎಷ್ಟು ಬೆಲೆ ತೆತ್ತಬೇಕಾಗುತ್ತದೆ, ಇದು ಪಾಕಿಸ್ತಾನ ಪೋಷಿತ ಭಯೋತ್ಪಾದಕರಿಗೂ ಕೂಡ ತಿಳಿದಿದೆ. ಇದರಿಂದ ಪಾಕಿಸ್ತಾನವು ೩ ಭಾಗವಾಗಬಹುದು ಮತ್ತು ಅದರ ಅಸ್ತಿತ್ವ ಕೂಡ ಉಳಿಯಲಾರದು, ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರು ಇಲ್ಲಿಯ ಚುನಾವಣೆ ಪ್ರಚಾರ ಸಭೆಯಲ್ಲಿ ಹೇಳಿದರು.
ಪಾಕಿಸ್ತಾನ ಆಕ್ರಮಿತ ಕಾಶ್ಮೀರವು ಭಾರತದಲ್ಲಿ ವಿಲೀನವಾಗಲು ಸಿದ್ಧ !
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇವರು, ಪಾಕಿಸ್ತಾನ ಆಕ್ರಮಿತ ಕಾಶ್ಮೀರವು ಭಾರತದಲ್ಲಿ ವಿಲೀನವಾಗಲು ಸಿದ್ಧವಿದೆ. ಅದಕ್ಕೆ ಪಾಕಿಸ್ತಾನದಿಂದ ಸ್ವಾತಂತ್ರ್ಯ ಬೇಕಿದೆ. ಅಲ್ಲಿಯ ಜನರಿಗೆ ಅಭಿವೃದ್ಧಿ, ರೇಷನ್, ಶಾಂತಿ ಮತ್ತು ಆಯುಷ್ಮಾನ್ ಹೆಲ್ತ್ ಕಾರ್ಡ್ ಬೇಕಿದೆ; ಆದರೆ ಇದೆಲ್ಲಾ ಕೇವಲ ಭಾರತದಲ್ಲಿಯೇ ಸಾಧ್ಯವಿದೆ. ಪಾಕಿಸ್ತಾನದ ಪರಿಸ್ಥಿತಿ ಭಿಕ್ಷೆಯ ಪಾತ್ರೆ ಹಿಡಿದು ತಿರುಗುತ್ತಿರುವಂತೆ ಇದೆ. ಬಲೂಚಿಸ್ತಾನ ಕೂಡ ಈಗ ಪಾಕಿಸ್ತಾನದ ಜೊತೆಗೆ ಇರಲು ಸಾಧ್ಯವಿಲ್ಲ ಎಂದು ಹೇಳುತ್ತಿದೆ; ಕಾರಣ ಅವರ ಜೊತೆಗೆ ವಿದೇಶಿಗಳಂತೆ ವರ್ತಿಸಲಾಗುತ್ತದೆ. ಯಾರಾದರೂ ಪಾಕಿಸ್ತಾನದ ಬೆಂಬಲದಿಂದ ಭಾರತದಲ್ಲಿ ಭಯೋತ್ಪಾದನೆಯ ಬಿಜ ಬಿತ್ತುವ ಪ್ರಯತ್ನ ಮಾಡಿದರೆ, ಅದರ ಹತ್ತಿರ ತನ್ನನ್ನೇ ಮುಚ್ಚಿಕೊಳ್ಳಲು ಕಫನ ಕೂಡ (ಮೃತ ದೇಹ ಮುಚ್ಚಲು ಉಪಯೋಗಿಸುವ ಬಟ್ಟೆ) ಇರುವುದಿಲ್ಲ ಮತ್ತು ಸ್ವಂತಕ್ಕೆ ಹೂಳಲು ಭೂಮಿ ಕೂಡ ಇರದು ಎಂದು ಹೇಳಿದೆ.
ಸಂಪಾದಕೀಯ ನಿಲುವುಈಗ ಭಾರತವು ಕೂಡ ಇಸ್ರೇಲ್ ನಂತೆ ಕಠಿಣ ಕ್ರಮ ಕೈಗೊಂಡು ಪಾಕಿಸ್ತಾನಕ್ಕೆ ಸರಿಯಾದ ಪಾಠ ಕಲಿಸಬೇಕೆಂದು ಭಾರತೀಯರಿಗೆ ಅನಿಸುತ್ತದೆ ! |
ಅಂಡಮಾನ್ ನ ‘ಶಾಲೋ ಆಫ್ಶೋರ್ ಬ್ಲಾಕ್’ನಲ್ಲಿ ಎರಡನೇ ಅತಿ ದೊಡ್ಡ ನೈಸರ್ಗಿಕ ಅನಿಲದ ನಿಕ್ಷೇಪ ಪತ್ತೆ
ಬಂಗಾಳದ ಭಾಂಗರ ಬಾಂಬ್ ಸ್ಫೋಟ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್ ಮಾಜಿ ಶಾಸಕ ಶೌಕತ್ ಮೊಲ್ಲಾ ಬಂಧನ
ನೆರೂಲ್ (ನವಿ ಮುಂಬಯಿ): ಹಾಸ್ಟೆಲ್ನಲ್ಲಿದ್ದ ಹಿಂದೂ ದೇವತೆಗಳ ಮೂರ್ತಿಗಳನ್ನು ಎಸೆದ ಕ್ರಿಶ್ಚಿಯನ್ ಯುವತಿ!
ಪಂಢರಪುರ: ಶ್ರೀ ವಿಠ್ಠಲ ಮೂರ್ತಿಯ ರಾಸಾಯನಿಕ ಲೇಪನಕ್ಕೆ ವಾರಕರಿ ಸಂಪ್ರದಾಯದ ವಿರೋಧ: ರಾಸಾಯನಿಕ ಲೇಪನದಿಂದ ಮೂರ್ತಿಗೆ ಹಾನಿ!
ಅಮೆರಿಕದ ‘ಬ್ಲೂಮ್ ಬರ್ಗ್’ ಸುದ್ದಿ ಸಂಸ್ಥೆಯು ತನ್ನ ಭಾರತ ವಿರೋಧಿ ಲೇಖನ ಹಿಂಪಡೆಯಿತು!
ಭಾರತೀಯರು ಜಗತ್ತಿನ ಅತ್ಯಂತ ಪ್ರತಿಭಾವಂತ ಜನರಲ್ಲಿ ಒಬ್ಬರಾಗಿದ್ದಾರೆ! – ವ್ಲಾದಿಮಿರ್ ಪುಟಿನ್, ಅಧ್ಯಕ್ಷರು, ರಷ್ಯಾ