ಹಿಂದೂಗಳ ದೇವಾಲಯಗಳನ್ನು ಈಗ ಭಕ್ತರೇ ನಡೆಸಬೇಕು ! – ಸದ್ಗುರು ಜಗ್ಗಿ ವಾಸುದೇವ್

ಚೆನ್ನೈ (ತಮಿಳುನಾಡು) – ಭಕ್ತರು ಸೇವಿಸುವ ದೇವಾಲಯದ ಪ್ರಸಾದದಲ್ಲಿ ಗೋಮಾಂಸದ ಕೊಬ್ಬು ಸಿಕ್ಕಿರುವುದು ಅಸಹ್ಯಕರವಾಗಿದೆ. ಆದ್ದರಿಂದ ಹಿಂದೂ ದೇವಸ್ಥಾನಗಳ ಆಡಳಿತವನ್ನು ಸರಕಾರ ನಡೆಸದೆ, ಹಿಂದೂ ಭಕ್ತರೇ ನಿರ್ವಹಿಸಬೇಕು. ಎಲ್ಲಿ ಭಕ್ತಿ ಇಲ್ಲವೋ ಅಲ್ಲಿ ಪಾವಿತ್ರ್ಯತೆ ಇರುವುದಿಲ್ಲ, ಎಂದು ಸದ್ಗುರು ಜಗ್ಗಿ ವಾಸುದೇವ್ ಅವರು ತಿರುಪತಿ ದೇವಸ್ಥಾನದ ಲಾಡುವಿನ ಪ್ರಕರಣದ ನಂತರ ‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿ ಆಗ್ರಹಿಸಿದ್ದಾರೆ.