‘ಅಲ್ಲಾ ಹು ಅಕ್ಬರ್’ ಎಂದು ಘೋಷಣೆ ಕೂಗುತ್ತಾ ಮತಾಂಧರಿಂದ ಗಣೇಶ ಮಂಟಪದ ಮೇಲೆ ದಾಳಿ !

  • ಹಿಂದೂಗಳಿಗೆ ‘ಪೂಜೆ ನಿಲ್ಲಿಸಿ, ಇಲ್ಲದಿದ್ದರೆ ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಬೆದರಿಕೆ !

  • ಇಬ್ಬರು ಅಪ್ರಾಪ್ತ ಹುಡುಗರ ಬಂಧನ !

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಇಲ್ಲಿ ಮತಾಂಧ ಮುಸ್ಲಿಮರು ‘ಅಲ್ಲಾ ಹು ಅಕ್ಬರ್’ ಎಂದು ಘೋಷಣೆ ಕೂಗುತ್ತಾ ಗಣೇಶ ಮಂಟಪದ ಮೇಲೆ ಕಲ್ಲು ತೂರಿ, ಶ್ರೀ ಗಣೇಶ ಮೂರ್ತಿಯ ಬಳಿ ಇರಿಸಲಾಗಿದ್ದ ಕಲಶವನ್ನು ಒಡೆದರು. ಈ ಘಟನೆ ಸೆಪ್ಟೆಂಬರ್ 10 ರಂದು ನಡೆದಿದೆ. ಈ ಘಟನೆಯ ಬಗ್ಗೆ ಗಂಗಾ ವಿಹಾರ್ ಕಾಲೋನಿಯ ಚಿಕ್ಕ ಮಸೀದಿ ಬಳಿ ವಾಸವಿರುವ ಕಿರಣ್ ಚೌರಾಸಿಯಾ ಎಂಬ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಅಪರಾಧ ದಾಖಲಿಸಿಕೊಂಡು ಇಬ್ಬರು ಅಪ್ರಾಪ್ತರನ್ನು ಬಂಧಿಸಿದ್ದಾರೆ. (ಅಪ್ರಾಪ್ತರಿರುವಾಗಲೇ ಹಿಂದೂಗಳ ಮೇಲೆ ದಾಳಿ ಮಾಡುವ ಮುಸ್ಲಿಮರು ದೊಡ್ಡವರಾದ ಮೇಲೆ ಜಿಹಾದಿ ಕೃತ್ಯಗಳನ್ನು ಮಾಡುತ್ತಾರೆ ! – ಸಂಪಾದಕರು)

ಮತಾಂಧರಿಂದ ‘ಪೂಜೆಯನ್ನು ನಿಲ್ಲಿಸಿ, ಇಲ್ಲವಾದರೆ ಕೆಟ್ಟ ಪರಿಣಾಮ ಉಂಟಾಗುತ್ತದೆ’, ಎಂದು ಬೆದರಿಕೆ !

ಈ ದೂರಿನಲ್ಲಿ ಕಿರಣ್ ಚೌರಾಸಿಯಾ ಅವರು, ”ಪ್ರತಿ ವರ್ಷದಂತೆ ಈ ವರ್ಷವೂ ನಾವು ಶ್ರೀ ಗಣೇಶ ಮೂರ್ತಿಯನ್ನು ವಿಧಿವತ್ತಾಗಿ ಪ್ರತಿಷ್ಠಾಪಿಸಿದ್ದೇವೆ. ಮರುದಿನದಿಂದ 20-25 ಮತಾಂಧರ ಗುಂಪು ನಮಗೆ ಕಿರುಕುಳ ನೀಡಲು ಪ್ರಾರಂಭಿಸಿತು. ಇದರಲ್ಲಿ ಅಪ್ರಾಪ್ತರು ಹಾಗೂ ಯುವಕರು ಸೇರಿದ್ದರು. ನಾವು ಪ್ರತಿದಿನ ಸಂಜೆ 7 ರಿಂದ 7:30 ರವರೆಗೆ ಆರತಿ ಮಾಡುತ್ತೇವೆ. ಆರತಿ ಸಮಯದಲ್ಲಿ, ಗಣೇಶ ಮಂಟಪದ ಮುಂದೆ ಮತಾಂಧರ ಗುಂಪು ‘ಅಲ್ಲಾ ಹು ಅಕ್ಬರ್’ ಮತ್ತು ಇತರ ಹಲವು ಪ್ರಚೋದನಕಾರಿ ಘೋಷಣೆಗಳನ್ನು ಕೂಗುತ್ತಾ ಗಣೇಶ ಮಂಟಪದ ಮುಂದೆ ಹೋಗಲು ಪ್ರಾರಂಭಿಸಿದರು. ನಂತರ, ಗುಂಪಿನಲ್ಲಿದ್ದ ಜನರು ಆರತಿ ಮಾಡುತ್ತಿದ್ದ ಹಿಂದೂಗಳಿಗೆ ಬೆದರಿಕೆ ಹಾಕಿದರು. ಪ್ರತಿ ದಿನ ಗುಂಪುಗಳು ಪೂಜೆಗೆ ಅಡ್ಡಿಪಡಿಸಲು ಪ್ರಯತ್ನಿಸುತ್ತಿದ್ದವು. ಸೆಪ್ಟೆಂಬರ 10ರಂದು ಸಂಜೆ 7.30ಕ್ಕೆ ಕೆಲವು ಮಹಿಳೆಯರು ಮತ್ತು ಹುಡುಗಿಯರು ಆರತಿ ಮಾಡುತ್ತಿದ್ದಾಗ ಅಲ್ಲಿಗೆ ಎಂದಿನಂತೆ ಮತಾಂಧ ಮುಸ್ಲಿಮರ ಗುಂಪೊಂದು ಬಂದು ಮಂಟಪದಲ್ಲಿ ಇರಿಸಲಾಗಿದ್ದ ಗಣೇಶನ ಮೂರ್ತಿಯನ್ನು ಧ್ವಂಸ ಮಾಡಲು ಯತ್ನಿಸಿ ಕಲ್ಲು ತೂರಾಟ ನಡೆಸಿತು. ಆ ಗುಂಪು ಇಲ್ಲಿನ ಕಲಶವನ್ನು ಒಡೆದಿದೆ. ಈ ಸಮಯದಲ್ಲಿ, ಮತಾಂಧ ಮುಸ್ಲಿಮರು ಪೂಜೆಯನ್ನು ನಿಲ್ಲಿಸಿ, ಇಲ್ಲದಿದ್ದರೆ ಕೆಟ್ಟ ಪರಿಣಾಮ ಉಂಟಾಗುತ್ತವೆ’, ಎಂದು ಬೆದರಿಕೆ ಹಾಕಿದರು. ಘಟನೆ ನಂತರ ಕಿರಣ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಹಿಂದುತ್ವನಿಷ್ಠರಿಂದ ಪ್ರತಿಭಟನೆ!

ಘಟನೆಯ ಮಾಹಿತಿ ತಿಳಿಯುತ್ತಲೇ ಹಿಂದುತ್ವನಿಷ್ಠ ಸಂಘಟನೆಗಳ ಕಾರ್ಯಕರ್ತರು ಪೊಲೀಸ್ ಠಾಣೆಗೆ ಆಗಮಿಸಿ ಪ್ರತಿಭಟನೆ ನಡೆಸಿದರು. ಇದರೊಂದಿಗೆ ಈ ಪ್ರಕರಣದ ಆರೋಪಿಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಸದ್ಯ ಗಣೇಶ ಮಂಟಪದ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಸಂಪಾದಕೀಯ ನಿಲುವು

  • ಬಾಂಗ್ಲಾದೇಶದಲ್ಲಿ ಮುಸ್ಲಿಮರು ಬಹು ಸಂಖ್ಯಾತರಾಗಿರುವುದರಿಂದ ಮತ್ತು ಭಾರತದಲ್ಲಿ ಅವರು ಅಲ್ಪಸಂಖ್ಯಾತರಾಗಿದ್ದರೂ ಸಂಘಟಿತರಾಗಿರುವುದರಿಂದ, ಅವರು ಯಾವಾಗಲೂ ಹಿಂದೂಗಳ ಮೇಲೆ ದಾಳಿ ಮಾಡುತ್ತಾರೆ. ಇದಕ್ಕೆ ವ್ಯತಿರಿಕ್ತವಾಗಿ, ಹಿಂದೂಗಳು ಚದುರಿಹೋಗಿದ್ದಾರೆ ಮತ್ತು ಅವರಿಗೆ ಹಿಂದೂ ನಾಯಕರ ಬೆಂಬಲವೂ ಸಿಗುವುದಿಲ್ಲ. ಈ ಚಿತ್ರಣ ಹಿಂದೂಗಳಿಗೆ ನಾಚಿಕೆಗೇಡು ! ಹಿಂದೂಗಳ ಈ ದುಃಸ್ಥಿತಿಯನ್ನು ಬದಲಾಯಿಸಲು, ಹಿಂದೂ ರಾಷ್ಟ್ರವನ್ನು ಸ್ಥಾಪಿಸಿರಿ !
  • ಈ ರೀತಿ ಆಗಲು ಲಕ್ಷ್ಮಣಪುರಿ ಭಾರತದಲ್ಲಿದೆಯೋ ಅಥವಾ ಪಾಕಿಸ್ತಾನದಲ್ಲಿದೆಯೋ ? ಇದನ್ನು ನೋಡಿದರೆ ‘ಉತ್ತರ ಪ್ರದೇಶದ ರಾಜಧಾನಿಯಲ್ಲಿ ಹಿಂದೂಗಳ ಸ್ಥಿತಿ ಹೀಗಾದರೆ ಹಳ್ಳಿಗಳಲ್ಲಿ ಹಿಂದೂಗಳ ಸ್ಥಿತಿ ಹೇಗಿರಬಹುದು ?’, ಎಂಬುದು ಗಮನಕ್ಕೆ ಬರುತ್ತದೆ !
  • ಮತಾಂಧರಿಗೆ ಪೊಲೀಸರು, ಆಡಳಿತ, ಸರಕಾರ, ನ್ಯಾಯಾಲಯಗಳು ಮುಂತಾದ ಯಾರ ಭಯವೂ ಇಲ್ಲವಾದ್ದರಿಂದ ಅವರು ಹಿಂದೂಗಳ ಮೇಲೆ ರಾಜಾರೋಷವಾಗಿ ದಾಳಿ ಮಾಡಲು ಧೈರ್ಯ ಮಾಡುತ್ತಾರೆ. ಇಂತಹವರ ಮನೆಗಳ ಮೇಲೆ ಕೂಡಲೇ ಬುಲ್ಡೋಜರ್ ಓಡಿಸುವ ಧೈರ್ಯ ಸರಕಾರ ತೋರಿಸಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ !