ಕೃಷಿ ಸಚಿವರಿಂದ ಟಾರ್ಚರ್; ಅಧಿಕಾರಿ ಆತ್ಮಹತ್ಯೆಗೆ ಪ್ರಯತ್ನ!

ಕಲಬುರ್ಗಿ – ಕೃಷಿ ಸಚಿವ ಚೆಲುವರಾಯ ಸ್ವಾಮಿ ಹಾಗೂ ಕೃಷಿ ಇಲಾಖೆ ವಿರುದ್ಧ ಆರೋಪ ಮಾಡಿದ ಕೃಷಿ ಇಲಾಖೆಯ ಅಧಿಕಾರಿ ಧರ್ಮರಾಜ್ ಎಂಬುವರು ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಧರ್ಮರಾಜ್ ಇವರು ಜೇವರ್ಗಿ ತಾಲೂಕಿನಲ್ಲಿ ಕೃಷಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಆತ್ಮಹತ್ಯೆಗೂ ಮುನ್ನ ಧರ್ಮರಾಜ್ ಬರೆದಿರುವ ಪತ್ರದಲ್ಲಿ, ‘ನನಗೆ ಮಾನಸಿಕ ಹಿಂಸೆ ಸಹಿಸ ಬೇಕಾಗಿದೆ. ಅಲ್ಲದೆ ನನ್ನನ್ನು ವರ್ಗಾವಣೆ ಮಾಡಬಾರದು ಎಂಬ ಮನವಿಯನ್ನು ಸ್ವೀಕರಿಸಲು ನನ್ನಿಂದ 2 ಲಕ್ಷದ 50 ಸಾವಿರ ರೂಪಾಯಿ ಪಡೆದರು, ಎಂದು ಆರೋಪಿಸಿದ್ದಾರೆ. ವಿಜಯಪುರ ಜಿಲ್ಲೆಗೆ ವರ್ಗಾವಣೆ ಮಾಡುವಂತೆ ಹೇಳಿ ನನಗೆ ಬ್ಲಾಕ್ ಮೇಲ್ ಮಾಡಲಾಗಿದೆ. ಈ ಘಟನೆಯಿಂದ ಕಲಬುರ್ಗಿಯಲ್ಲಿ ವರ್ಗಾವಣೆಯ ಹಗರಣ ನಡೆದಿರುವ ಶಂಕೆ ವ್ಯಕ್ತವಾಗಿದೆ ಎಂದು ಹೇಳಿದ್ದಾರೆ.