|

ನೋಯ್ಡಾ (ಉತ್ತರ ಪ್ರದೇಶ) – ನಗರದ ಸೊಸಾಯಟಿಯೊಂದರಲ್ಲಿನ ದೇವಸ್ಥಾನದ ಗಂಟೆಯ ಶಬ್ದ ದೊಡ್ಡದಾಗಿ ಕೇಳಿ ಬರುತ್ತಿದೆ ಎಂದು ಉತ್ತರಪ್ರದೇಶ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯು ಸೊಸಾಯಟಿಗೆ ನೊಟೀಸು ಕಳುಹಿಸಿ ಶಬ್ದವನ್ನು ಕಡಿಮೆ ಮಾಡುವಂತೆ ಹೇಳಿತು. ಅದರಂತೆ ಸೊಸಾಯಟಿಯು ವಾಟ್ಸಅಪ್ ಮತ್ತು ಫಲಕಗಳ ಮೂಲಕ ಈ ಸೂಚನೆಯನ್ನು ಪ್ರಸಾರ ಮಾಡಿತ್ತು; ಆದರೆ ಇದರಿಂದ ಅಲ್ಲಿನ ಜನರು ಆಕ್ರೋಶಗೊಂಡರು ಮತ್ತು ಇದನ್ನು ವಿರೋಧಿಸಿದರು. ಮಾಲಿನ್ಯ ನಿಯಂತ್ರಣ ಮಂಡಳಿಯ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಅಭಿಯಾನ ಮಾಡಿದ ಬಳಿಕ ಮಾಲಿನ್ಯ ನಿಯಂತ್ರಣ ಮಂಡಳಿಯು ಈ ನೊಟೀಸನ್ನು ಹಿಂಪಡೆಯಿತು. ಈ ಪ್ರಕರಣ ಗ್ರೇಟರ್ ನೋಯ್ಡಾ ಗೌರ್ ಸೌಂದರ್ಯಮ್ ಸೊಸಾಯಟಿಯಲ್ಲಿ ನಡೆದಿದ್ದು ಇಲ್ಲಿ `ಹರೇ ರಾಮಾ ಹರೇ ಕೃಷ್ಣಾ’ ದೇವಸ್ಥಾನವನ್ನು ನಿರ್ಮಿಸಲಾಗಿದೆ.
UNIFORM STANDARDS FOR NOISE POLLUTION
The Uttar Pradesh Pollution Board withdraws the noise pollution notice against a temple bell in Noida, after it faces opposition.
▫️Incident at the Gaur Saundaryam Society in Noida (Uttar Pradesh).
👉 Noise pollution is a critical issue… pic.twitter.com/45N5MwPmT0
— Sanatan Prabhat (@SanatanPrabhat) August 23, 2024
ದೇವಸ್ಥಾನದ ಗಂಟೆಯ ಶಬ್ದದ ಬಗ್ಗೆ ಬಂದ ದೂರಿನ ಬಳಿಕ ಮಾಲಿನ್ಯ ನಿಯಂತ್ರಣ ಮಂಡಳಿಯು ಗಂಟೆಯ ಸದ್ದನ್ನು ಪರಿಶೀಲನೆ ನಡೆಸಿದಾಗ, ಅದು 72 ಡೆಸಿಬಲ್ ಇರುವುದು ಬೆಳಕಿಗೆ ಬಂತು. ನಿಯಮಾನುಸಾರ 55 ಡೆಸಿಬಲ್ ಇರಬೇಕು. ಆ ನಂತರ ಮಂಡಳಿಯು ಈ ನೊಟೀಸ್ ಜಾರಿಗೊಳಿಸಿತ್ತು.
ಸಂಪಾದಕೀಯ ನಿಲುವುಶಬ್ದ ಮಾಲಿನ್ಯ ಎಲ್ಲಿಯೂ ಆಗಬಾರದು. ಒಂದು ವೇಳೆ ಎಲ್ಲಿಯಾದರೂ ನಡೆಯುತ್ತಿದ್ದರೆ, ಅದರ ವಿರುದ್ಧ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಕ್ರಮ ಕೈಗೊಳ್ಳಬೇಕು; ಆದರೆ ಮಸೀದಿ ಬಿಟ್ಟು, ಕೇವಲ ದೇವಸ್ಥಾನಗಳ ವಿರುದ್ಧ ಮಾತ್ರ ಕ್ರಮ ಕೈಗೊಳ್ಳುತ್ತಿದ್ದರೆ ಅದು ಅನ್ಯಾಯವಾಗಿದೆ! |
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ
‘ತ್ರಿವಳಿ ತಲಾಖ್’ ಮತ್ತು ‘ಬಹುಪತ್ನಿತ್ವ’ದ ವಿಷಯವಾಗಿ ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಗದ್ದಲ
ಕ್ಷುಲ್ಲಕ ಕಾರಣಕ್ಕೆ ಹಿಂದೂ ಬಸ್ ಚಾಲಕನ ಮೇಲೆ ಹಲ್ಲೆ ಮಾಡಿದ ಮತಾಂಧ ರಿಕ್ಷಾ ಚಾಲಕ!
ಆದಿವಾಸಿಗಳ ಮನೆ ನಿರ್ಮಾಣಕ್ಕೆ ಮುಸ್ಲಿಮರ ವಿರೋಧ: ಪೊಲೀಸ್ ಮಧ್ಯಸ್ಥಿಕೆ ಬಳಿಕ ಕೆಲಸ ಪುನರಾರಂಭ