ಭಾರತ ಸರಕಾರವು ಹಿಂದುಗಳಿಗೆ ಭೂಮಿ ಮತ್ತು ಭದ್ರತೆ ನೀಡಲಿ, ನಾವು ಭೋಜನದ ವ್ಯವಸ್ಥೆ ಮಾಡುವೆವು ! – ಜ್ಯೋತಿಷ್ಯ ಪೀಠದ ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಸರಸ್ವತಿ

  • ಬಾಂಗ್ಲಾದೇಶದಲ್ಲಿನ ಹಿಂದುಗಳಿಗಾಗಿ ಧ್ವನಿ ಎತ್ತಿದ ಶಂಕರಾಚಾರ್ಯರು

  • ‘ಸಾವಿರಾರು ಬಾಂಗ್ಲಾದೇಶಿಯರು ಭಾರತದಲ್ಲಿ ವಾಸಿಸುತ್ತಾರೆ ಎಂಬುದನ್ನು ಬಾಂಗ್ಲಾದೇಶದ ಸರಕಾರ ಮರೆಯಬಾರದು’ ಎಂದು ಬಾಂಗ್ಲಾದೇಶಕ್ಕೆ ಎಚ್ಚರಿಕೆ

ನವದೆಹಲಿ – ಶೇಖ ಹಸೀನಾ ಅವರನ್ನು ಅಧಿಕಾರದಿಂದ ಕೆಳಗಿಳಿಸಿ ಅವರನ್ನು ದೇಶದಿಂದ ಪಲಾಯನ ಮಾಡಲು ಅನಿವಾರ್ಯಗೊಳಿಸಿರುವುದರಿಂದ ಬಾಂಗ್ಲಾದೇಶದಲ್ಲಿನ ಹಿಂದೂಗಳ ಮೇಲೆ ಜಿಹಾದಿ ಮುಸಲ್ಮಾನರಿಂದ ನಿರಂತರ ದಾಳಿಗಳು ನಡೆಯುತ್ತಿವೆ. ಇದಕ್ಕೆ ಭಾರತದಲ್ಲಿನ ಹಿಂದುಗಳು ಮತ್ತು ಹಿಂದೂ ಸಂಘಟನೆಗಳಿಂದ ವಿರೋಧ ವ್ಯಕ್ತಪಡಿಸಲಾಗುತ್ತಿದೆ. ಇದೀಗ ಶಂಕರಾಚಾರ್ಯರು ಕೂಡ ಇದನ್ನು ವಿರೋಧಿಸಿದ್ದಾರೆ. ಬಾಂಗ್ಲಾದೇಶದಲ್ಲಿನ ಜಿಹಾದಿಗಳಿಂದ ದಾಳಿಗಳು ನಡೆಯುತ್ತಿರುವುದರಿಂದ ಹಿಂದುಗಳನ್ನು ರಕ್ಷಿಸುವುದಕ್ಕೆ ಭಾರತ ಸರಕಾರ ಕ್ರಮ ಕೈಗೊಳ್ಳಬೇಕು, ಎಂದು ಜ್ಯೋತಿಷ್ಯ ಪೀಠದ ಶಂಕರಚಾರ್ಯ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು ಕರೆ ನೀಡಿದರು. ಬಾಂಗ್ಲಾದೇಶದಲ್ಲಿನ ಹಿಂದೂಗಳ ರಕ್ಷಣೆ ಆಗಬೇಕು, ಸಾವಿರಾರು ಬಾಂಗ್ಲಾದೇಶಿಗರು ಭಾರತದಲ್ಲಿ ವಾಸಿಸುತ್ತಾರೆ ಎಂಬುದನ್ನು ಬಾಂಗ್ಲಾದೇಶ ಸರಕಾರ ಮರೆಯಬಾರದು ಎಂದು ಅವರು ಎಚ್ಚರಿಸಿದರು. ನಾವು ಬಾಂಗ್ಲಾದೇಶದಲ್ಲಿನ ಹಿಂದೂಗಳಿಗೆ ಭಾರತದಲ್ಲಿ ಭೂಮಿ ಮತ್ತು ಸುರಕ್ಷೆ ನೀಡುವುದಕ್ಕಾಗಿ ಸರಕಾರವನ್ನು ವಿನಂತಿಸುತ್ತೇವೆ. ನಾವು ಅವರ ಭೋಜನದ ಮತ್ತು ಇತರ ಅವಶ್ಯಕತೆಗಳ ಜವಾಬ್ದಾರಿ ವಹಿಸುವೆವು ಮತ್ತು ಸರಕಾರದ ಮೇಲೆ ಒತ್ತಡ ಬರದಂತೆ ನೋಡುವೆವು ಎಂದು ಹೇಳಿದರು.

ಭಾರತದಲ್ಲಿ ಅಸ್ಥಿರತೆ ಉಂಟು ಮಾಡಲು ಚೀನಾ ಬಾಂಗ್ಲಾದೇಶವನ್ನು ಉಪಯೋಗಿಸುತ್ತಿದೆ ! – ಪುರಿಯ ಪೂರ್ವಾಮ್ನಾಯ ಪೀಠದ ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ

ಪುರಿಯ ಪೂರ್ವಾಮ್ನಾಯ ಪೀಠದ ಶಂಕರಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ ಅವರು, ಬಾಂಗ್ಲಾದೇಶದಲ್ಲಿ ಶಾಂತಿ ನೆಲೆಸಿದರೆ ಎಲ್ಲವನ್ನೂ ಪರಿಹರಿಸಬಹುದು. ಹಿಂದೂ ಶಾಂತಿ ಪ್ರಿಯರಾಗಿದ್ದಾರೆ, ಯಾವಾಗ ಹಿಂದುಗಳು ಸುರಕ್ಷಿತವಾಗಿರುವರೋ ಆಗ ಮಾತ್ರ ದೇಶ ಸುರಕ್ಷಿತವಾಗಿರಲು ಸಾಧ್ಯ. ಬಾಂಗ್ಲಾದೇಶದಲ್ಲಿ ಈ ರೀತಿಯ ಹಿಂಸಾಚಾರ ನಡೆಸುತ್ತಿರುವುದು ಚೀನಾದ ಷಡ್ಯಂತ್ರವಾಗಿದೆ. ಚೀನಾ ಈಗ ಭಾರತವನ್ನು ಅಸ್ಥಿರಗೊಳಿಸುವುದಕ್ಕಾಗಿ ಬಾಂಗ್ಲಾದೇಶವನ್ನು ಉಪಯೋಗಿಸಿಕೊಳ್ಳುತ್ತಿದೆ. ಬಾಂಗ್ಲಾದೇಶಕ್ಕೆ ಇದು ತಿಳಿಯದಿದ್ದರೆ ಮುಂಬರುವ ಕೆಲ ದಿನಗಳಲ್ಲಿ ಅದರ ಅಸ್ತಿತ್ವ ಅಳಿವಿನ ಅಂಚಿಗೆ ಬರುವುದೆಂದು ಸ್ವಾಮಿ ನಿಶ್ಚಲಾನಂದ ಸರಸ್ವತಿ ಅವರು ಹಳಿದರು.

ಬಾಂಗ್ಲಾದೇಶದಲ್ಲಿನ ಹಿಂದುಗಳ ಹತ್ಯೆ ಯಾರು ಮಾಡುತ್ತಿದ್ದಾರೆ ಎಂಬುದನ್ನು ಭಾರತೀಯ ಮುಸಲ್ಮಾನರು ಯೋಚಿಸಬೇಕು ! – ದ್ವಾರಕಾಪೀಠದ ಶಂಕರಾಚಾರ್ಯ ಸ್ವಾಮಿ ಸದಾನಂದ ಸರಸ್ವತಿ

ದ್ವಾರಕಾ ಪೀಠದ ಶಂಕರ ಆಚಾರ್ಯ ಸ್ವಾಮಿ ಸದಾನಂದ ಸರಸ್ವತಿ ಅವರು, ಭಾರತ ಮತ್ತು ಬಾಂಗ್ಲಾದೇಶದ ಸರಕಾರಗಳು ಒಟ್ಟಾಗಿ ಹಿಂದುಗಳ ದುಃಸ್ಥಿತಿಯ ಕುರಿತು ಚರ್ಚಿಸಬೇಕು. ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿನ ಹಿಂದೂಗಳ ಪರಿಸ್ಥಿತಿ ದಯನೀಯವಾಗಿದೆ. ಕಳೆದ ೫೦ ವರ್ಷಗಳಿಂದ ಏನೆಲ್ಲಾ (ಹಿಂದುಗಳ ಮೇಲೆ ದೌರ್ಜನ್ಯ) ನಡೆಯುತ್ತಿದೆ ಅದು ಯೋಗ್ಯವಲ್ಲ. ಇದರಲ್ಲಿ ಹಿಂದೂಗಳ ತಪ್ಪೇನಿದೆ? ಅವರನ್ನು ಹುಡುಕಿ ಹುಡುಕಿ ಏಕೆ ಕೊಲ್ಲಲಾಗುತ್ತಿದೆ? ದೇವಸ್ಥಾನಗಳು ಏಕೆ ನೆಲೆಸಮಾಡಲಾಗುತ್ತಿದೆ? ಈ ಸಮಸ್ಯೆಗಳ ಕುರಿತು ಆದಷ್ಟು ಬೇಗನೆ ಪರಿಹಾರ ಹುಡುಕಬೇಕು, ಇಲ್ಲದಿದ್ದರೆ ಜಗತ್ತಿನಲ್ಲಿ ಯಾವುದೇ ಪ್ರದೇಶದಲ್ಲಿ ಹಿಂದುಗಳಿಗೆ ಕಿರುಕುಳ ನೀಡಿದರು ಅವರಿಗೆ ಸಹಾಯ ಮಾಡಲು ಯಾರು ಇರುವುದಿಲ್ಲ ಎಂಬ ಪರಿಸ್ಥಿತಿ ಬರುವುದು.

ಬಾಂಗ್ಲಾದೇಶದಲ್ಲಿನ ಹಿಂದುಗಳ ಹತ್ಯೆ ಮತ್ತು ಅವರನ್ನು ಗುರಿಯಾಗಿಸಿ ಮಾಡಲಾಗುತ್ತಿರುವ ದಾಳಿಗಳನ್ನು ಯಾರು ಮಾಡುತ್ತಿದ್ದಾರೆ ಎಂಬುದನ್ನು ಭಾರತೀಯ ಮುಸಲ್ಮಾನರು ಯೋಚನೆ ಮಾಡಬೇಕು. ಬಾಂಗ್ಲಾದೇಶದಲ್ಲಿ ಈಗಲೂ ೧ ಕೋಟಿ ೨೫ ಲಕ್ಷ ಹಿಂದುಗಳಿದ್ದಾರೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಅವರಿದ್ದರೂ ಕೂಡ ಅವರಿಗೆ ಇಂತಹ ಕಠಿಣ ಪರಿಸ್ಥಿತಿ ಎದುರಿಸಬೇಕಾಗುತ್ತಿದೆ. ಅಲ್ಲಿ ಹಿಂದೂಗಳ ಹತ್ಯೆ ಯಾರು ಮಾಡುತ್ತಿದ್ದಾರೆ ಎಂಬುದನ್ನು ಭಾರತದಲ್ಲಿನ ಮುಸಲ್ಮಾನರು ಕೂಡ ಯೋಚಿಸಬೇಕು ಎಂದು ಸ್ವಾಮಿ ಸದಾನಂದ ಸರಸ್ವತಿ ಅವರು ಕರೆ ನೀಡಿದರು.

ಕಾಂಚೀ ಪೀಠದ ಶಂಕರಾಚಾರ್ಯ ವಿಜಯೇಂದ್ರ ಸರಸ್ವತಿ ಇವರಿಂದ ಪರಿಸ್ಥಿತಿ ಶಾಂತವಾಗಲು ಪ್ರಾರ್ಥನೆ

ಕಾಂಚೀ ಪೀಠದ ಶಂಕರಾಚಾರ್ಯ ವಿಜಯೇಂದ್ರ ಸರಸ್ವತಿ ಅವರು ಅಶಾಂತಿ ಪೀಡಿತ ಬಾಂಗ್ಲಾದೇಶದಲ್ಲಿ ಮೊದಲಿನಂತೆ ಶಾಂತಿ ಸ್ಥಾಪನೆ ಆಗಲು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಅವರು ಬಾಂಗ್ಲಾದೇಶದಲ್ಲಿ ಶಾಂತಿ, ಸುರಕ್ಷೆ ಮತ್ತು ಸ್ಥಿರತೆ ಕಾಪಾಡುವಂತೆ ಕರೆ ನೀಡಿದರು