ಪಾಕಿಸ್ತಾನದ ರಕ್ಷಣಾ ತಜ್ಞ ಝೈದ್ ಹಮೀದ್ ಅವರ ಪ್ರಚೋದನಕಾರಿ ಹೇಳಿಕೆ

‘ಘಜವಾ-ಎ-ಹಿಂದ್‌ನ ಭೀಕರ ಯುದ್ಧವು ಹಲವು ವರ್ಷಗಳವರೆಗೆ ಮುಂದುವರಿಯಲಿದೆ!’

(ಗಜ್ವಾ-ಎ-ಹಿಂದ್ ಎಂದರೆ ಭಾರತದ ಇಸ್ಲಾಮೀಕರಣ)

ಇಸ್ಲಾಮಾಬಾದ್ (ಪಾಕಿಸ್ತಾನ) – ‘ಗಜವಾ-ಎ-ಹಿಂದ್’ ಅನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಿ. ಇದು ಅತ್ಯಂತ ಭಯಾನಕ ಯುದ್ಧವಾಗಿದೆ. ಇದು ಹಲವು ವರ್ಷಗಳವರೆಗೆ ಮುಂದುವರಿಯಲಿದೆ. ಈ ಯುದ್ಧದಲ್ಲಿ ಭಾರತವು ಮುಸ್ಲಿಮರ ಕೈಗೆ ಒಮ್ಮೆ ಸಿಕ್ಕರೆ ಸಾಕು ಅದು ನಮ್ಮಲ್ಲಿಯೇ ಉಳಿಯಲಿದೆ ಎಂದು ಪಾಕಿಸ್ತಾನದ ತಥಾಕಥಿತ ರಕ್ಷಣಾ ತಜ್ಞ ಝೈದ್‌ ಹಮೀದ್ ಅವರು ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ. ಅವರ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಪ್ರಖರ ಹಿಂದುತ್ವನಿಷ್ಠ ಮಧು ಪೂರ್ಣಿಮಾ ಕಿಶ್ವರ್ ಅವರು ಕೂಡ ಈ ವಿಡಿಯೋ ಅನ್ನು ಪ್ರಸಾರ ಮಾಡಿದ್ದಾರೆ. ಈ ವೀಡಿಯೊ ನಿಖರವಾಗಿ ಯಾವಾಗಿನದು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಈ ವೀಡಿಯೊದಲ್ಲಿ, ಝೈದ್ ಹಮೀದ್ ಹೇಳಿದ್ದು:

1. ಯಾರು ‘ಬುತಪರಸ್ತ’ (ವಿಗ್ರಹ ಆರಾಧಕರು) ಆಗಿದ್ದವರ ಕೊನೆಯ ತಲೆಮಾರಿನವರು ಈಗ ಭಾರತದಲ್ಲಿ ಮಾತ್ರ ಉಳಿದಿದ್ದಾರೆ. ಈ ಮುಸ್ಲಿಂ ಜಗತ್ತಿನಲ್ಲಿ ಭಾರತದಲ್ಲಿ ಕಾಣುವಷ್ಟು ‘ಮುಶ್ರಿಕ್’ಗಳನ್ನು (ಬಹುದೇವತಾವಾದಿಗಳು) ನೀವು ಬೇರೆ ಎಲ್ಲಿಯೂ ಕಾಣುವುದಿಲ್ಲ.

2. ಕಾಬಾದೊಳಗೆ ವಿಗ್ರಹಗಳನ್ನು ಇರಿಸಿದ್ದು ಇದೇ ಜಾತಿಯವರಾಗಿದ್ದಾರೆ. ಈಗ ಅದೇ ವಿಗ್ರಹ ಮತ್ತು ಅದರಂತಹ ಸಾವಿರಾರು ವಿಗ್ರಹಗಳನ್ನು ಮತ್ತು ದೇವರುಗಳನ್ನು ಭಾರತದಲ್ಲಿ ಇರಿಸಿದ್ದಾರೆ.
3. ಮತ್ತೊಮ್ಮೆ ಈ ಎಲ್ಲಾ ವಿಗ್ರಹಗಳು ಭಗ್ನಗೊಳ್ಳುವುದು. ಮಹ್ಮದ್ ಘಝನಿಯು ಸೋಮನಾಥ ಮತ್ತು ಇತರ ದೇವಾಲಯಗಳನ್ನು ಕೆಡವಿದ ರೀತಿಯಲ್ಲಿಯೇ ಎಲ್ಲಾ ದೇವಾಲಯಗಳನ್ನು ಕೆಡವಲಾಗುವುದು. ವಿಗ್ರಹ ಆರಾಧನೆ ಸಂಪೂರ್ಣವಾಗಿ ಕಣ್ಮರೆಯಾಗುವುದು. ಸ್ವಾಭಾವಿಕವಾಗಿ, ಈ ಯುದ್ಧವು ಭಯಾನಕವಾಗಿರುತ್ತದೆ. ಇದು ಒಂದು ದಿನದ ಯುದ್ಧವಲ್ಲ.

ಝೈದ್ ಹಮೀದ್ ಯಾರು?

ಝೈದ್ ಹಮೀದ್ ತನ್ನನ್ನು ತಾನು ಪಾಕಿಸ್ತಾನದ ವ್ಯೂಹಾತ್ಮಕ ರಕ್ಷಣಾ ತಜ್ಞ ಎಂದು ಹೇಳಿಕೊಳ್ಳುತ್ತಾನೆ. ಈತ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐಗೆ ಆಪ್ತ ಎಂದು ಹೇಳಲಾಗುತ್ತದೆ. ತಾನು ಸೋವಿಯತ್-ಆಫ್ಘಾನ್ ಯುದ್ಧದಲ್ಲಿ ಹೋರಾಡಿದ್ದೆ ಎಂದೂ ಸಹ ಆತ ಹೇಳುತ್ತಾನೆ. ಆತ ಪ್ರತಿದಿನ ಭಾರತದ ವಿರುದ್ಧ ಪ್ರಚೋದನಾಕಾರಿ ಭಾಷಣ ಮಾಡುತ್ತಾನೆ. ಖಲಿಸ್ತಾನ್ ವಿಷಯವನ್ನು ಪ್ರಚೋದಿಸುವುದು ಅಥವಾ ಹಿಂದೂಗಳನ್ನು ದುರ್ಬಲ ಎಂದು ಕರೆಯುವುದು, ಆತ ನಿರಂತರವಾಗಿ ತನ್ನ ಸಾಮಾಜಿಕ ಮಾಧ್ಯಮದಲ್ಲಿ ಈ ವಿಷಯಗಳ ಬಗ್ಗೆ ಮಾತನಾಡುತ್ತಾನೆ. ಆತ ಭಾರತದಲ್ಲಿ ವಾಸಿಸುವ ಮುಸ್ಲಿಮರ ದಾರಿ ತಪ್ಪಿಸಲು ಪ್ರಯತ್ನಿಸುತ್ತಾನೆ.

ಸಂಪಾದಕೀಯ ನಿಲುವು

  • ಈ ಯುದ್ಧಕ್ಕೆ ಹಿಂದೂಗಳು ಮತ್ತು ಸರಕಾರ ಸಿದ್ಧವಾಗಿದೆಯೇ ?
  • ಪಾಕಿಸ್ತಾನ ವಿನಾಶದ ಅಂಚಿನಲ್ಲಿದ್ದರೂ ಸಹ ‘ಜಿಹಾದ್’ ಬಿಡುತ್ತಿಲ್ಲ, ಆದರೆ ಹಿಂದೂಗಳು ಸಾಯುತ್ತಿದ್ದರೂ ಜಾಗೃತರಾಗುತ್ತಿಲ್ಲ! ಹಿಂದೂಗಳಿಗೆ ಇದು ನಾಚಿಕೆಗೇಡಿನ ವಿಷಯವಾಗಿದೆ !