ಜೈಪುರ (ರಾಜಸ್ಥಾನ) ಇಲ್ಲಿ ಕ್ಷುಲ್ಲಕ ಕಾರಣದಿಂದ ಮುಸಲ್ಮಾನರಿಂದ ಹಿಂದೂ ಯುವಕನ ಥಳಿತ ಬಳಿಕ ಸಾವು

ಪೊಲೀಸರ ನಿರ್ಲಕ್ಷದಿಂದ ನಡೆದಿದೆ; ಕುಟುಂಬದವರ ಆರೋಪ

ಜೈಪುರ (ರಾಜಸ್ಥಾನ) – ಇಲ್ಲಿಯ ಶಾಸ್ತ್ರೀನಗರದಲ್ಲಿ ಈ ರಿಕ್ಷಾ ಚಾಲಕ ಮುಸಲ್ಮಾನರಿಂದ ದಿನೇಶ ಎಂಬ ಹಿಂದೂ ಯುವಕನ ಮೇಲೆ ರಸ್ತೆಯಲ್ಲಿ ನಡೆದಿರುವ ಅಮಾನುಷ ಹಲ್ಲೆಯಿಂದ ಅಸುನೀಗಿದ್ದಾನೆ. ದಿನೇಶನು ತನ್ನ ಸ್ನೇಹಿತ ಜಿತೇಂದ್ರನ ಜೊತೆಗೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿರುವಾಗ ಶಾಹರುಖ್ ಖಾನ್ ಮತ್ತು ಅವನ ಸ್ನೇಹಿತರ ಜೊತೆಗೆ ಈ ರಿಕ್ಷಾದ ಕುರಿತಾದ ಮಾತಿನ ಚಕಮಕಿ ನಡೆಯಿತು. ಆ ಸಮಯದಲ್ಲಿ ಶಾಹರುಖ್ ಮತ್ತು ಅವನ ಸ್ನೇಹಿತರು ದಿನೇಶನಿಗೆ ಅಮಾನುಷವಾಗಿ ಹೊಡೆದರು. ಮನೆಗೆ ತಲುಪಿದ ನಂತರ ದಿನೇಶನ ಆರೋಗ್ಯ ಹದಗೆಟ್ಟಿತು. ಅವನನ್ನು ಆಸ್ಪತ್ರೆಗೆ ಸೇರಿಸಿದ ನಂತರ ಅವನು ಸಾವನ್ನಪ್ಪಿದನು. ಈ ಘಟನೆ ಆಗಸ್ಟ್ ೧೬ ರಂದು ನಡೆದಿದೆ. ಅದರ ನಂತರ ಪೊಲೀಸರು ಈ ಪರಿಸರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದರು.

ದಿನೇಶನ ಮೃತ್ಯುವಿನ ನಂತರ ಆಗಸ್ಟ್ ೧೭ ರಂದು ಅವನ ಕುಟುಂಬದವರು ಮತ್ತು ಸ್ನೇಹಿತರು ಶಾಸ್ತ್ರಿನಗರ ಪೊಲೀಸ್ ಠಾಣೆಯಲ್ಲಿನ ಪೊಲೀಸರಿಗೆ ಪ್ರಶ್ನಿಸಿದರು. ಅವರು ಪೊಲೀಸರು ನಿರ್ಲಕ್ಷದಿಂದ ಈ ರೀತಿ ನಡೆದಿದೆ ಎಂದು ಆರೋಪಿಸಿದರು. ಪೊಲೀಸರು ಶಾಹಾರುಖನನ್ನು ಬಂಧಿಸಿದ್ದು ಅವನ ಸ್ನೇಹಿತರ ಹುಡುಕಾಟ ನಡೆಸುತ್ತಿದ್ದಾರೆ.

ಸಂಪಾದಕೀಯ ನಿಲುವು

ದೇಶದಲ್ಲಿ ಹಿಂದುಗಳು ಅಸುರಕ್ಷಿತವಾಗಿದ್ದು ಅವರು ಸ್ವಂತದ ರಕ್ಷಣೆ ಮಾಡಿಕೊಳ್ಳಲು ಸಾಧ್ಯವಿಲ್ಲ ಅಥವಾ ಯಾವುದೇ ಸರಕಾರ ಮಾಡುತ್ತಿಲ್ಲ, ಇದು ಹಿಂದುಗಳಿಗೆ ಲಜ್ಜಾಸ್ಪದ !