ಧ್ವಜಾರೋಹಣ ಸ್ಥಳದಲ್ಲಿ ಮ. ಗಾಂಧಿ ಮತ್ತು ಅಂಬೇಡ್ಕರ್ ಅವರ ಭಾವಚಿತ್ರಗಳ ಸಹಿತ ಟಿಪ್ಪು ಸುಲ್ತಾನ್ ಚಿತ್ರಕ್ಕೆ ಪೂಜೆ

ಕಲ್ಬುರ್ಗಿಯಲ್ಲಿನ ಘಟನೆ

ಕಲಬುರ್ಗಿ – ಇಲ್ಲಿನ ಹುಮನಾಬಾದ ರಿಂಗ್ ರಸ್ತೆ ಬಳಿ ರಿಕ್ಷಾ ಚಾಲಕರ ಸಂಘದ ಮುಖಂಡರು ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ಸಮಾರಂಭದಲ್ಲಿ ಮ. ಗಾಂಧಿ ಮತ್ತು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಸಹಿತ ಟಿಪ್ಪು ಸುಲ್ತಾನ್ ಚಿತ್ರಕ್ಕೂ ಪೂಜೆ ಸಲ್ಲಿಸಿದ ಘಟನೆ ಆಗಸ್ಟ್ 15ರಂದು ನಡೆದಿದೆ. ಪೊಲೀಸರು ಸ್ಥಳಕ್ಕೆ ಬಂದು ಟಿಪ್ಪು ಚಿತ್ರ ತೆಗೆಯುವಂತೆ ಮನವಿ ಮಾಡಿದರು. ಈ ಕುರಿತು ಮುಖಂಡರು, ‘ಚಿತ್ರ ತೆಗೆಯಬೇಕಾದರೆ ಟಿಪ್ಪು ಚಿತ್ರ ಮಾತ್ರವಲ್ಲ, ಇನ್ನೆರಡು ಚಿತ್ರ ತೆಗೆಯುತ್ತೇವೆ’ ಎಂದರು. ಇದಾದ ಬಳಿಕ ಪೊಲೀಸರೇ ಟಿಪ್ಪು ಚಿತ್ರವನ್ನು ತೆಗೆದಿದ್ದಾರೆ. (ಟಿಪ್ಪುವಿನ ಚಿತ್ರ ಹಾಕಿದವರನ್ನು ಪೊಲೀಸರು ಬಂಧಿಸಿ ಜೈಲಿಗೆ ಹಾಕಬೇಕಿತ್ತು ! – ಸಂಪಾದಕರು)