ನಾಸಿಕ್‌ನಲ್ಲಿ 300 ಜನರ ವಿರುದ್ಧ ದೂರು ದಾಖಲು; 20ಕ್ಕೂ ಹೆಚ್ಚು ಸಾಮಾಜ ಕಂಟಕರ ಬಂಧನ

ಬಂದ್ ವೇಳೆ ಕಲ್ಲು ತೂರಾಟ ನಡೆದ ಪ್ರಕರಣ

ನಾಸಿಕ್ – ಸಕಲ್ ಹಿಂದೂ ಸಮಾಜದ ವತಿಯಿಂದ ಕರೆ ನೀಡಲಾದ ಬಂದ್ ವೇಳೆ ಅಂಗಡಿಗಳನ್ನು ಮುಚ್ಚುವ ವಿಚಾರವಾಗಿ ಎರಡು ಗುಂಪುಗಳ ನಡುವೆ ವಾಗ್ವಾದ ನಡೆದು ಬಳಿಕ ಅದು ಕಲ್ಲು ತೂರಾಟಕ್ಕೆ ರೂಪಾಂತರವಾಯಿತು. ಈ ಪ್ರಕರಣದಲ್ಲಿ 300 ಮಂದಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 20ಕ್ಕೂ ಹೆಚ್ಚು ಸಮಾಜಘಾತುಕರನ್ನು ಬಂಧಿಸಲಾಗಿದ್ದು, 100ಕ್ಕೂ ಹೆಚ್ಚು ಮಂದಿಯನ್ನು ಗುರುತಿಸಲಾಗಿದೆ. ಗಲಭೆಕೋರರ ಬಂಧನ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದೆ. ಕೊಲೆ ಯತ್ನ ಮತ್ತು ಗಲಭೆಗೆ ಪ್ರಚೋದನೆ ನೀಡಿದ ಪ್ರಕರಣಗಳು ದಾಖಲಾಗಿವೆ.