ಶ್ರೀರಾಮಪುರ (ಅಹಲ್ಯಾನಗರ ಜಿಲ್ಲೆ) ನಗರ ಪೊಲೀಸ್ ಠಾಣೆಯ ಪರಿಸರದಲ್ಲಿ ಮತಾಂಧರಿಂದ 2 ಹಿಂದೂಗಳ ಮೇಲೆ ಮಾರಣಾಂತಿಕ ಹಲ್ಲೆ !

ಹಸುಗಳನ್ನು ಸಾಗಿಸುತ್ತಿದ್ದ ವಾಹನಗಳನ್ನು ಪೊಲೀಸ ಠಾಣೆಗೆ ತಂದಿದ್ದರಿಂದ ಹಲ್ಲೆ !

ಶ್ರೀರಾಮಪುರ (ಅಹಲ್ಯಾನಗರ ಜಿಲ್ಲೆ) – ಕಸಾಯಿಖಾನೆಗೆ ಹಸುವನ್ನು ಸಾಗಿಸುತ್ತಿದ್ದ ವಾಹನವನ್ನು ಪೊಲೀಸರು ಹಿಡಿದಿದ್ದಾರೆ. ಈ ವಾಹನವನ್ನು ಘಟನಾ ಸ್ಥಳದಿಂದ ಪೊಲೀಸ್ ಠಾಣೆಯವರೆಗೆ ನಿರ್ಮಲ ಮತ್ತು ಮಾಪಾರಿ ಹೆಸರಿನ ಎಂಬ ಇಬ್ಬರು ಹಿಂದೂಗಳ ತೆಗೆದುಕೊಂಡು ಹೋಗಲು ಸಹಾಯ ಮಾಡಿದ್ದರಿಂದ ಮತಾಂಧರ ಗುಂಪು ಮಾರಣಾಂತಿಕ ಹಲ್ಲೆ ನಡೆಸಿದೆ. ಈ ಘಟನೆ ಆಗಸ್ಟ 16 ರಂದು ಶ್ರೀರಾಮಪುರ ನಗರ ಪೊಲೀಸ್ ಠಾಣೆಯ ಪರಿಸರದಲ್ಲಿ ನಡೆದಿದೆ. ಬಳಿಕ ಹಿಂದುತ್ವನಿಷ್ಠ ಸಂಘಟನೆಗಳ ಕಾರ್ಯಕರ್ತರು ಪೊಲೀಸ್ ಠಾಣೆಯಲ್ಲಿ ಜಮಾಯಿಸಿದರು. ಪೊಲೀಸರು ಮತಾಂಧರ ತಂಡದಲ್ಲಿದ್ದ ಇಬ್ಬರನ್ನು ಬಂಧಿಸಿದ್ದು, ಇತರ ಆರೋಪಿಗಳನ್ನು ಹುಡುಕುತ್ತಿದ್ದಾರೆ. ಈ ಪ್ರಕರಣದಲ್ಲಿ ನಿರ್ಮಲನು ಶ್ರೀರಾಮಪುರ ನಗರ ಪೊಲೀಸ ಠಾಣೆಯಲ್ಲಿ ಮತಾಂಧರ ವಿರುದ್ಧ ದೂರು ದಾಖಲಿಸಿದ್ದಾರೆ.

ಶ್ರೀರಾಮಪುರ ನಗರ ಪೊಲೀಸರು ಆರ್.ಬಿ.ಎನ್.ಬಿ. ಕಾಲೇಜಿನ ಕಡೆಗೆ ಹೋಗುವ ಸುರಂಗದ ಬಳಿ ಹಸುಗಳನ್ನು ಸಾಗಿಸುತ್ತಿದ್ದ ತಡೆದಿದ್ದರು. ಘಟನಾ ಸ್ಥಳದಲ್ಲಿ ಜನರ ಗುಂಪು ಸೇರಿತ್ತು. ಆಗ ಅಲ್ಲಿದ್ದ ಪೊಲೀಸರು, ‘ಈ ವಾಹನವನ್ನು ಯಾರಿಗಾದರೂ ಓಡಿಸಲು ಬರುತ್ತದೆಯೇ?’ ಎಂದು ವಿಚಾರಿಸಿದಾಗ ನಿರ್ಮಲ ವಾಹನ ಚಲಾಯಿಸಲು ಬರುವುದೆಂದು ಹೇಳಿದನು. ಅವನು ತನ್ನ ಸ್ನೇಹಿತ ಮಾಪಾರಿಯವನೊಂದಿಗೆ ಆ ವಾಹನವನ್ನು ಪೊಲೀಸ್ ಠಾಣೆಗೆ ತಂದನು. ಅವರಿಬ್ಬರೂ ಪೊಲೀಸ್ ಠಾಣೆಯ ಪರಿಸರದಲ್ಲಿರುವಾಗಲೇ ವಸೀಮ ಕುರೇಶಿ, ಶಾಹೀದ ಕುರೇಶಿ, ಬುಂದಿ ಕುರೇಶಿ, ಶಾಹರುಪ ಕುರೇಶಿ, ತೌಫಿಕ ಕುರೇಶಿ, ಮೊಹಸಿನ ಕುರೇಶಿ, ಅದನಾನ ಕುರೇಶಿ, ಸದಾಮ ಕುರೇಶಿ, ಇರಫಾನ ಶೇಖ, ಶಾಹರೂಖ ಕುರೆಶಿ ಇವರು ನಿರ್ಮಲನಿಗೆ `ನೀನು ವಾಹನವನ್ನು ಏಕೆ ಚಲಾಯಿಸಿಕೊಂಡು ಬಂದೆ? ನಿನ್ನನ್ನು ಬದುಕಲು ಬಿಡುವುದಿಲ್ಲ’ ಎಂದು ಹೇಳುತ್ತಾ ನಿರ್ಮಲ ಮೇಲೆ ಮಾರಣಾಂತಿಕ ದಾಳಿ ನಡೆಸಿದನು. ಮೇಲಿನ ಎಲ್ಲ ಮತಾಂಧರ ಮೇಲೆ ಅಪರಾಧ ದಾಖಲಿಸಲಾಗಿದೆ.

ಸಂಪಾದಕೀಯ ನಿಲುವು

ಮತಾಂಧರು ಪೊಲೀಸ ಠಾಣೆಯ ಪರಿದಲ್ಲಿಯೇ ದಾಳಿ ಮಾಡಲು ಧೈರ್ಯ ತೋರಿಸುತ್ತಾರೆ, ಇದು ಅವರಿಗೆ ಪೊಲೀಸರ ಬಗ್ಗೆ ಭಯ ಉಳಿದಿಲ್ಲ ಎಂಬುದರ ಸಿದ್ಧವಾಗುತ್ತದೆ ! ಇದು ಪೊಲೀಸರಿಗೆ ನಾಚಿಕೆಗೇಡು ! ಮತಾಂಧರ ಹೆಚ್ಚುತ್ತಿರುವ ಧೈರ್ಯವನ್ನು ನಿಯಂತ್ರಿಸಲು ಪೊಲೀಸರು ಯಾವಾಗ ಸಕ್ಷಮರಾಗುತ್ತಾರೆ ?