ಶಿಕ್ಷಕಿಗೆ ಅಶ್ಲೀಲ ಮೆಸೇಜ್ ಕಳುಹಿಸಿದ ಉಸ್ತುವಾರಿ ಮುಖ್ಯೋಪಾಧ್ಯಾಯ ಮಹಾಬೂಬ್ ಅಲಿ ಗೆ ಥಳಿತ !

ಶಿಕ್ಷಕಿಯ ಕಾಲು ಹಿಡಿದು ಕ್ಷಮೆ ಯಾಚನೆ ಮಾಡಿಸಿದ ಕುಟುಂಬದವರು

ರಾಯಚೂರು (ಕರ್ನಾಟಕ) – ಓರ್ವ ಶಿಕ್ಷಕಿಗೆ ಅಶ್ಲೀಲ ಮೆಸೇಜ್ ಕಳುಹಿಸಿರುವ ಪ್ರಕರಣದಲ್ಲಿ ಇಲ್ಲಿಯ ಒಂದು ಸರಕಾರಿ ಶಾಲೆಯ ಉಸ್ತುವಾರಿ ಮುಖ್ಯೋಪಾಧ್ಯಾಯ ಮಹಬೂಬ್ ಅಲಿ ಎಂಬವನನ್ನು ಶಿಕ್ಷಕಿಯ ಮನೆಯವರು ಥಳಿಸಿದ್ದಾರೆ. ಶಿಕ್ಷಕಿಯು ನೀಡಿರುವ ದೂರಿನ ಪ್ರಕಾರ, ಮಹಬೂಬ್ ಅಲಿ ‘ರಾತ್ರಿ ಮಲಗಲು ಬಾ, ೧೦ ಸಾವಿರ ರೂಪಾಯಿ ನೀಡುತ್ತೇನೆ’ ಎಂದು ಮೆಸೇಜ್ ಕಳುಹಿಸಿದ್ದನು. ಈ ಘಟನೆ ಶಿಕ್ಷಕಿಯು ತನ್ನ ಕುಟುಂಬದವರಿಗೆ ತೋರಿಸಿದಳು. ನಂತರ ಶಿಕ್ಷಕಿಯ ಸಂಬಂಧಿಕರು ಮಹಬೂಬ್ ಅಲಿಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ ಮತ್ತು ಶಿಕ್ಷಕಿಯ ಕಾಲು ಹಿಡಿದು ಕ್ಷಮಯಾಚನೆ ಮಾಡಿಸಿದ್ದಾರೆ. ಇದಲ್ಲದೇ ಕ್ಷಮಾಯಾಚನೆಯ ಪತ್ರ ಕೂಡ ಅವನಿಂದ ಬರೆಸಿಕೊಂಡಿದ್ದಾರೆ.

ಸಂಪಾದಕೀಯ ನಿಲುವು

ಇಂತಹ ಕಾಮುಕ ಮುಖ್ಯೋಪಾಧ್ಯಾಯರು ಶಾಲೆಯಲ್ಲಿನ ಮಕ್ಕಳಿಗೆ ನೈತಿಕತೆಯ ಬಗ್ಗೆ ಏನು ಪಾಠ ಮಾಡುವರು?