ಮಕ್ಕಳ ತಟ್ಟೆಯಲ್ಲಿ ಬಡಿಸಿದ್ದ ಮೊಟ್ಟೆ ತೆಗೆಯುತ್ತಿದ್ದ ಇಬ್ಬರು ಅಂಗನವಾಡಿ ಸೇವಕಿಯರು ಅಮಾನತು !

ಕೊಪ್ಪಳದ ಘಟನೆ

ಕೊಪ್ಪಳ – ಅಂಗನವಾಡಿ ಮಕ್ಕಳಿಗೆ ನೀಡಲಾಗುವ ಮೊಟ್ಟೆಯನ್ನು ತಟ್ಟೆಯಿಂದ ತೆಗೆದುಕೊಳ್ಳುವ ಘಟನೆ ಕೊಪ್ಪಳ ಜಿಲ್ಲೆಯಲ್ಲಿನ ಗುಂಡೂರು ಗ್ರಾಮದಲ್ಲಿ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾದ ನಂತರ ಸಂಬಂಧಿತ ಇಬ್ಬರೂ ಅಂಗನವಾಡಿ ಸೇವಕಿಯರನ್ನು ಅಮಾನತುಗೊಳಿಸಲಾಗಿದೆ.

(ಸೌಜನ್ಯ – Tv9 Kannada)

ಅಂಗನವಾಡಿಯ ಮಕ್ಕಳುನ್ನು ಸಾಲಿನಲ್ಲಿ ಕೂಡಿಸಿ ತಟ್ಟೆಯಲ್ಲಿ ಮೊದಲು ಮೊಟ್ಟೆಗಳು ಬಡಿಸುತ್ತಾರೆ. ಬಳಿಕ ಮಕ್ಕಳಿಂದ ಪ್ರಾರ್ಥನೆ ಮಾಡಿಸಿ ನಂತರ ಮಕ್ಕಳು ತಟ್ಟೆಯಲ್ಲಿನ ಮೊಟ್ಟೆ ತಿನ್ನುವಷ್ಟರಲ್ಲಿ ಮೊಟ್ಟೆ ತೆಗೆಯುತ್ತಿರುವುದು ವಿಡಿಯೋದಲ್ಲಿ ಕಾಣುತ್ತಿದೆ. ಓರ್ವ ಹುಡುಗನ ಕೈಯಲ್ಲಿದ್ದ ಮೊಟ್ಟೆಯನ್ನೂ ಕೂಡ ಸೇವಕಿ ಕಸಿದುಕೊಂಡು ಹೋದರು. ಆ ಸಮಯದಲ್ಲಿ ಸಹಾಯಕ ಸೇವಕಿ ಶಾಯನಾಜ ಬೇಗಂ ಮೊಬೈಲ್ ನಲ್ಲಿ ವಿಡಿಯೋ ತಯಾರಿಸುತ್ತಿದ್ದರು. ಈ ವಿಡಿಯೋ ನಂತರ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾದ ನಂತರ ಲಕ್ಷ್ಮಿ ಮತ್ತು ಶಾಯನಾಜ್ ಬೇಗಂ ಇಬ್ಬರನ್ನು ಅಮಾನತುಗೊಳಿಸಲಾಗಿದೆ.