
ಲಂಡನ್ (ಬ್ರಿಟನ) – ಬ್ರಿಟನನಲ್ಲಿ ಒಂದು ವಾರದಿಂದ ನಡೆಯುತ್ತಿರುವ ಗಲಭೆಯ ಹಿನ್ನೆಲೆಯಲ್ಲಿ ಪ್ರಧಾನಿ ಕೀರ ಸ್ಟಾರ್ಮರ ಅವರು ಮಾತನಾಡಿ, ‘ಗಲಭೆಕೋರರಿಗೆ ಕಾನೂನಿನ ಶಕ್ತಿ ತೋರಿಸಬೇಕು. ಬಂಧಿಸಲಾಗಿರುವವರಿಗೆ ವಾರದಲ್ಲಿಯೇ ನ್ಯಾಯಾಲಯದಿಂದ ಸೂಕ್ತ ಶಿಕ್ಷೆಯನ್ನು ನೀಡಲಾಗುವುದೆಂದು ಭರವಸೆ ಇದೆ’ ಎಂದು ಹೇಳಿದರು. ಕಳೆದ ತಿಂಗಳು ಬ್ರಿಟನ್ನಿನ ಸೌತ್ ಪೋರ್ಟ ನಗರದ ಒಂದು ಡ್ಯಾನ್ಸ್ ಕ್ಲಬ್ನಲ್ಲಿ ಚಾಕುವಿನಿಂದ ನಡೆಸಿದ ದಾಳಿಯಲ್ಲಿ 3 ಹುಡುಗಿಯರು ಸಾವನ್ನಪ್ಪಿದ್ದರು. ಹಾಗೂ 10 ಜನರು ಗಾಯಗೊಂಡಿದ್ದರು. ಶಂಕಿತರು ಮುಸಲ್ಮಾನ ನಿರಾಶ್ರಿತರಾಗಿದ್ದಾರೆ ಎಂಬ ಸುದ್ದಿ ಹರಡಿದ್ದರಿಂದ ನಿರಾಶ್ರಿತ ಮುಸಲ್ಮಾನರ ಮೇಲೆ ಮತ್ತು ಮಸಿದಿಗಳ ಮೇಲೆ ದಾಳಿ ನಡೆಯಿತು. ಈ ಕುರಿತು ಪ್ರಧಾನಿ ಸ್ಟಾರ್ಮರ ಇವರು ಮೇಲಿನ ಹೇಳಿಕೆಯನ್ನು ನೀಡಿದ್ದಾರೆ.
ಮುಸಲ್ಮಾನರ ಮೇಲೆ ನಡೆದ ದಾಳಿ ಸಹಿಸಲಾಗದು ! – ಸ್ಟಾರ್ಮರಸ್ಟಾರ್ಮರ ತಮ್ಮ ಮಾತನ್ನು ಮುಂದುವರಿಸಿ, ಪರಿಸ್ಥಿತಿಯ ಮೇಲೆ ನಿಯಂತ್ರಣವನ್ನಿಡಲು ಬ್ರಿಟನ್ನಿನಲ್ಲಿ ಸುಮಾರು 6 ಸಾವಿರ ವಿಶೇಷ ಗಲಭೆ ನಿಯಂತ್ರಣ ಪೊಲೀಸರನ್ನು ನಿಯೋಜಿಸಲಾಗುತ್ತಿದೆ. ಕಾರಣ ಏನೇ ಆಗಲಿ ಇದು ನಿಷೇಧದ ಮಾರ್ಗವಲ್ಲ. ಇದು ಹಿಂಸೆಯಾಗಿದೆ ಮತ್ತು ನಾವು ಮಸಿದಿ ಅಥವಾ ನಮ್ಮ ಮುಸಲ್ಮಾನ ಸಮುದಾಯದ ಮೇಲೆ ದಾಳಿಯನ್ನು ಸಹಿಸುವುದಿಲ್ಲ. ಈ ಗಲಭೆಯಲ್ಲಿ ಭಾಗವಹಿಸಿರುವವರ ವಿರುದ್ಧ ಕಾನೂನಿನ ಬಲದಿಂದ ಕೆಲಸ ಮಾಡುತ್ತದೆ ಎಂದು ಹೇಳಿದರು.
|
ಯುದ್ಧದಲ್ಲಿ ಅಮೆರಿಕಾವನ್ನು ಬೆಂಬಲಿಸುವ ‘ನಾಟೋ’ ಸದಸ್ಯ ದೇಶಗಳನ್ನು ಹೊಣೆಗಾರರನ್ನಾಗಿ ಮಾಡಬೇಕು ! – ಇರಾನ
ಪಾಕಿಸ್ತಾನವು 1971 ರಲ್ಲಿ ಭಾರತದಿಂದ ಅನುಭವಿಸಿದ ಸೋಲನ್ನು ನೆನಪಿಸಿಕೊಳ್ಳಲಿ !
ಕೆನಡಾದಲ್ಲಿ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಶೇ. ೬೦ ರಷ್ಟು ಕುಸಿತ!
‘ಭಾರತವು ಔಷಧಗಳ ಪೆಟ್ಟಿಗೆಯಲ್ಲಿ ಅಫ್ಘಾನಿಸ್ತಾನಕ್ಕೆ ಡ್ರೋನ್ಗಳನ್ನು ಕಳುಹಿಸಿದೆ!’(ಯಂತೆ)
ವೆನೆಜುವೆಲಾದಲ್ಲಿ ಸಂಭವಿಸಿದ ಭೂಕಂಪದಲ್ಲಿ ಇಲ್ಲಿಯವರೆಗೆ 235 ಮಂದಿ ಸಾವು!
ದೇಶದ 3 ರಾಜ್ಯಗಳಲ್ಲಿ ಲವ್ ಜಿಹಾದ್ನ 4 ಘಟನೆಗಳು ಬೆಳಕಿಗೆ!