HinduRashtra Vichar Manthan : ಆಗಸ್ಟ್ 4 ರಂದು ಭೋಪಾಲ್ ನಲ್ಲಿ ‘ಹಿಂದೂ ರಾಷ್ಟ್ರ ವಿಚಾರ ಮಂಥನ’ ಕಾರ್ಯಕ್ರಮದ ನಿಯೋಜನೆ !

ಭೋಪಾಲ್ (ಮಧ್ಯಪ್ರದೇಶ) – ಇಲ್ಲಿ ಆಗಸ್ಟ್ 4 ರಂದು ‘ಧರ್ಮರಕ್ಷಕ’ ಈ ಜನಪ್ರಿಯ ಹಿಂದೂ ಸಂಘಟನೆ 7ನೇ ‘ಹಿಂದೂ ರಾಷ್ಟ್ರ ವಿಚಾರ ಮಂಥನ’ ಕಾರ್ಯಕ್ರಮವನ್ನು ಭೋಪಾಲ್‌ನ ಬೈರಾಗಡ್ ನಲ್ಲಿ ಆಯೋಜಿಸಿದೆ. ಈ ಕಾರ್ಯಕ್ರಮದಲ್ಲಿ ಮಧ್ಯಪ್ರದೇಶದ ಜಿಲ್ಲೆಗಳಲ್ಲಿನ ಅನೇಕ ಹಿಂದುತ್ವನಿಷ್ಠ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಸಂಘಟನೆಯ ಪ್ರದೇಶ ರಾಜ್ಯ ಸಮನ್ವಯಕ ಕೃಷ್ಣ ಸೋಲಂಕಿ ಹೇಳಿದ್ದಾರೆ.