ಜಗತ್ತಿನ ಕೊಳೆಯನ್ನು ಸ್ವಚ್ಛಗೊಳಿಸಲು ಇದೇ ಯೋಗ್ಯ ಪದ್ಧತಿ: ಇಸ್ರೇಲ್ ನ ಮಂತ್ರಿ ಎಲಿಯಾಹು

ಟೆಲ್ ಅವೀವ್ (ಇಸ್ರೇಲ್) – ಹಮಾಸ್ ಮುಖ್ಯಸ್ಥ ಇಸ್ಮಾಯಿಲ್ ಹಾನಿಯ ಸಾವನ್ನು ‘ಇಸ್ರೇಲ್‌ ನ ದೊಡ್ಡ ವಿಜಯ’ ಎಂದು ಪರಿಗಣಿಸಲಾಗಿದ್ದರೂ ಸಹ ಇಸ್ರೇಲ್ ಈ ಹತ್ಯೆಯ ಹೊಣೆಯನ್ನು ಹೊತ್ತಿಲ್ಲ. ಇಸ್ರೇಲಿನ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಹಾನಿಯ ಸಾವಿನ ಬಗ್ಗೆ ಯಾವುದೇ ಸಚಿವರು ಪ್ರತಿಕ್ರಿಯೆ ನೀಡುವುದನ್ನು ನಿಷೇಧಿಸಿದ್ದಾರೆ ಎಂದು ಅಲ್ಲಿನ ಸ್ಥಳೀಯ ಮಾಧ್ಯಮಗಳು ತಿಳಿಸಿವೆ. ಅದೇನೇ ಇದ್ದರೂ, ಇಸ್ರೇಲ್ ನಲ್ಲಿ ಸಚಿವರು ಸೇರಿದಂತೆ ಜನಸಾಮಾನ್ಯರು ಹಾನಿಯ ಹತ್ಯೆಯ ಸಂಭ್ರಮಾಚರಣೆಯನ್ನು ಆಚರಿಸುತ್ತಿದ್ದಾರೆ. ಈ ನಡುವೆ ಇಸ್ರೇಲ್ ನ ಸಚಿವರಾದ ಅಮಿಚಾಯ್ ಎಲಿಯಾಹು ಅವರು ಮಾತ್ರ ಹಾನಿಯ ಸಾವಿನ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ಜಗತ್ತಿನ ಕೊಳೆಯನ್ನು ಸ್ವಚ್ಛಗೊಳಿಸಲು ಇದೇ ಯೋಗ್ಯ ಪದ್ಧತಿ’ ಎಂದವರು ಹೇಳಿದ್ದಾರೆ.