Ketaki Chitale : ಹಿಂದೆ ಸ್ವಾತಂತ್ರ್ಯಕ್ಕಾಗಿ ಹೋರಾಡಿದೆವು, ಈಗ ಹಿಂದೂಗಳು ಧರ್ಮಕ್ಕಾಗಿ ಹೋರಾಡುವ ಆವಶ್ಯಕತೆ ! – ಕೇತಕಿ ಚಿತಳೆ, ನಟಿ

(ಎಡದಿಂದ) ಮರಾಠಿ ನಟಿ ಕೇತಕಿ ಚಿತಳೆ, ಯಶಶ್ರೀ ಶಿಂದೆ ಮತ್ತು ಅವಳ ಹತ್ಯೆ ಮಾಡಿದ ದಾವುದ್ ಶೇಕ್

ಮುಂಬಯಿ – ಹಿಂದೂ ಹುಡುಗಿಯರು ನಾಪತ್ತೆ ಆಗುತ್ತಿದ್ದಾರೆ. ಕೆಲವೊಮ್ಮೆ ಕಪಾಟಿನಲ್ಲಿ, ಕೆಲವೊಮ್ಮೆ ಸಮುದ್ರದಲ್ಲಿ, ಕೆಲವೊಮ್ಮೆ ಫ್ರಿಡ್ಜ್ ನಲ್ಲಿ, ಹಾಗೂ ಕೆಲವೊಮ್ಮೆ ಸೂಟ್ ಕೇಸಿನಲ್ಲಿ ಯುವತಿಯರ ಶವ ಸಿಗುತ್ತಿವೆ. ಹಿಂದೆ ಜನರು ಸ್ವಾತಂತ್ರಕ್ಕಾಗಿ ಹೋರಾಡಿದರು, ಈಗ ಹಿಂದೂಗಳು ಧರ್ಮಕ್ಕಾಗಿ ಹೋರಾಡುವ ಆವಶ್ಯಕತೆ ಇದೆ ಎಂದು ಮರಾಠಿ ನಟಿ ಕೇತಕಿ ಚಿತಳೆ ಅವರು ಯಶಶ್ರೀ ಶಿಂದೆ ಎಂಬ ಯುವತಿಯ ಬರ್ಬರ್ ಹತ್ಯೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿರುವ ವಿಡಿಯೋದಲ್ಲಿ ಹೇಳಿದ್ದಾರೆ.

ಪೊಲೀಸರು ಮತ್ತು ಸರಕಾರದವರು ನಮ್ಮ ಪರವಾಗಿ ನಿಂತಿಲ್ಲ ಹಾಗಾಗಿ ಹಿಂದೂಗಳು ಒಗ್ಗಟ್ಟಾಗುವುದು ಆವಶ್ಯಕವಾಗಿದೆ ಎಂದು ಅವರು ಕರೆ ನೀಡಿದರು. ಉರಣ (ಜಿಲ್ಲಾ ರಾಯಗಡ) ದಲ್ಲಿ ದಾವುದ್ ಶೇಕ್ ಎಂಬವನು ಯಶಶ್ರೀ ಶಿಂದೆ ಎಂಬ ಯುವತಿಯ ಬರ್ಬರ್ ಹತ್ಯೆ ಮಾಡಿದ ಹಿನ್ನೆಲೆಯಲ್ಲಿ ಕೇತಕಿ ಅವರು ವಿಡಿಯೋ ಪ್ರಸಾರ ಮಾಡಿದ್ದಾರೆ.

ಕೇವಲ ಮುಸಲ್ಮಾನ ಬಹು ಸಂಖ್ಯಾತರಿರುವಲ್ಲಿ ಮಾತ್ರವಲ್ಲ ಎಲ್ಲೆಡೆಯೂ ‘ಲವ್ ಜಿಹಾದ್’ ನಡೆಯುತ್ತಿದೆ !

ಲವ್ ಜಿಹಾದ್ ಕೇವಲ ಉತ್ತರ ಪ್ರದೇಶ, ಕೇರಳ ಮತ್ತು ಬಂಗಾಲ ಈ ರಾಜ್ಯಗಳಲ್ಲಿ ನಡೆಯುತ್ತಿದೆ ಎಂಬುದು ಸುಳ್ಳಾಗಿದೆ. ಕೇವಲ ಮುಸಲ್ಮಾನರ ವರ್ಚಸ್ವ ಇರುವ ಸ್ಥಳಗಳಲ್ಲಿ ಲವ್ ಜಿಹಾದ್ ಘಟನೆಗಳು ಘಟಿಸುತ್ತವೆ ಎಂಬುದು ಕೂಡ ಸುಳ್ಳಾಗಿದೆ ಅಥವಾ ಲವ್ ಜಿಹಾದ್ ಘಟನೆಗಳು ಗ್ರಾಮೀಣ ಭಾಗದಲ್ಲಿ ಮಾತ್ರ ನಡೆಯುತ್ತಿವೆ ಎಂಬುದು ಕೂಡ ಅಸತ್ಯವಾಗಿದೆ. ಆರ್ಥಿಕ ದೃಷ್ಟಿಯಿಂದ ಹಿಂದುಳಿದ ಮಹಿಳೆಯರ ಜೊತೆಗೆ ಮಾತ್ರ ಈ ಲವ್ ಜಿಹಾದ್ ಘಟಿಸುತ್ತವೆ ಎನ್ನುವುದು ಕೂಡ ಅಷ್ಟೇ ಸುಳ್ಳಾಗಿದೆ. ನಗರಗಳು ಗ್ರಾಮಗಳು ಎಲ್ಲಾ ಸ್ಥಳದಲ್ಲಿಯೂ ಕೂಡ ಈ ಲವ್ ಜಿಹಾದ್ ಘಟನೆಗಳು ಘಟಿಸುತ್ತಿವೆ, ಎಂದು ಕೇತಕಿ ಅವರು ತಮ್ಮ ವಿಡಿಯೋದಲ್ಲಿ ಹೇಳಿದ್ದಾರೆ.