Vishalgad Encroachments : ವಿಶಾಲಗಢ ಮೇಲೆ ಅತಿಕ್ರಮಣವನ್ನು ತೆಗೆದುಹಾಕಲು ಆಡಳಿತದಿಮದ ಪ್ರಾರಂಭ : ಅಂಗಡಿಗಳು ಮತ್ತು ಕಂಪನಿಗಳನ್ನು ತೆಗೆಸಿತು !

ಗಢಪ್ರೇಮಿಯ(ಕೋಟೆ ಬಗ್ಗೆ ಪ್ರೀತಿ) ಆಕ್ರಮಣಕಾರಿ ನಿಲುವು ಮತ್ತು ಬೆಂಬೆತ್ತುವಿಕೆಯಿಂದ ಯಶಸ್ಸು

ಕೊಲ್ಲಾಪುರ – ಮಾಜಿ ಸಂಸದ ಛತ್ರಪತಿ ಸಂಭಾಜಿ ರಾಜೆ ಮತ್ತು ಗಢಪ್ರೇಮಿ ಅವರ ಆಕ್ರಮಣಕಾರಿ ನಿಲುವಿನ ನಂತರ ಅಂತಿಮವಾಗಿ ಜುಲೈ 15 ರಂದು ಆಡಳಿತವು ವಿಶಾಲಗಢದ ಮೇಲಿನ ಅತಿಕ್ರಮಣಗಳನ್ನು ತೆಗೆಸಲು ಪ್ರಾರಂಭಿಸಿತು. ಮಧ್ಯಾಹ್ನ 3 ಗಂಟೆಯವರೆಗೆ 30 ಅಂಗಡಿ ಮತ್ತು ಮಳಿಗೆಗಳನ್ನು ತೆರವು ಮಾಡಲಾಗಿದೆ ಎಂದು ವರದಿಯಾಗಿದೆ. ಆಡಳಿತದ ಅನೇಕ ಮುಖ್ಯ ಅಧಿಕಾರಿಗಳು ಪೋಲೀಸ್ ಬಂದೋಬಸ್ತ್ ನಲ್ಲಿ ವಿಶಾಲಗಢದಲ್ಲಿ ಉಪಸ್ಥಿತರಿದ್ದರು. ಬೃಹತ್ಪ್ರಮಾಣದ ಪೊಲೀಸ್ ಬಂದೋಬಸ್ತಿನಲ್ಲಿ ಈ ಕ್ರಮ ಕೈಗೊಳ್ಳಲಾಯಿತು. ವಿಶಾಲಗಢ ದರ್ಗಾ ಪ್ರದೇಶದಲ್ಲಿ ಅನೇಕ ಜನರು ಅಂಗಡಿ, ಮನೆಗಳನ್ನು ಒತ್ತುವರಿ ಮಾಡಿಕೊಂಡಿದ್ದಾರೆ.