Jihadi Youths ISIS Connection : ಛತ್ರಪತಿ ಸಂಭಾಜಿ ನಗರದ ೫೦ ಜಿಹಾದಿ ಯುವಕರು ಇಸ್ಲಾಮಿ ಸ್ಟೇಟನ್ ಸಂಪರ್ಕದಲ್ಲಿ !

ರಾಷ್ಟ್ರೀಯ ತನಿಖಾ ದಳದ ಆರೋಪ ಪತ್ರದಿಂದ ಬಹಿರಂಗ !

ಛತ್ರಪತಿ ಸಂಭಾಜಿನಗರ – ಜಿಹಾದಿ ಭಯೋತ್ಪಾದಕ ಸಂಘಟನೆ ಇಸ್ಲಾಮಿಕ್ ಸ್ಟೇಟನ್ ಜಾಲ ಛತ್ರಪತಿ ಸಂಭಾಜಿನಗರ ಇಲ್ಲಿ ಕೂಡ ಹಬ್ಬಿದೆ. ಕನಿಷ್ಠ ೫೦ ಮುಸಲ್ಮಾನ ಯುವಕರು ಈ ಭಯೋತ್ಪಾದಕ ಸಂಘಟನೆಯ ಸಂಪರ್ಕದಲ್ಲಿ ಇದ್ದಾರೆ. ಫೆಬ್ರವರಿ ೧೫, ೨೦೨೪ ರಂದು ನಗರದಲ್ಲಿನ ಹರ್ಸುಲ್ ಪರಿಸರದಲ್ಲಿ ಬೇರಿಬಾಗ ಪರಿಸರದಿಂದ ‘ಎನ್.ಐ.ಎ.’ಯು (ರಾಷ್ಟ್ರೀಯ ತನಿಖಾ ದಳ) ಮಹಮ್ಮದ್ ಜೋಯೆಬ್ ಖಾನ್ (ವಯಸ್ಸು ೩೫ ವರ್ಷ) ಇವನನ್ನು ಬಂಧಿಸಿದ್ದರು. ಅವನ ವಿರುದ್ಧ ಜುಲೈ ೧೨ ರಂದು ಮುಂಬಯಿಯಲ್ಲಿನ ‘ಎನ್.ಐ.ಎ.’ದ ನ್ಯಾಯಾಲಯದಲ್ಲಿ ಆರೋಪ ಪತ್ರ ದಾಖಲಿಸಿತ್ತು. ಅದರಲ್ಲಿ ಛತ್ರಪತಿ ಸಂಭಾಜಿ ನಗರದಲ್ಲಿ ನಡೆಯುತ್ತಿರುವ ಇಸ್ಲಾಮಿಕ್ ಸ್ಟೇಟ್ ನ ಚಟುವಟಿಕೆಯ ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ.

೧. ಲಿಬಿಯಾ ದೇಶದಿಂದ ಜಗತ್ತಿನಾದ್ಯಂತ ಇಸ್ಲಾಮಿಕ್ ಸ್ಟೇಟ್ ಜಾಲ ಹಬ್ಬಿಸುವ ಮೊಹಮ್ಮದ್ ಶೋಯೆಬ್ ಖಾನ್ ಇವನು ಐಟಿ ಇಂಜಿನಿಯರ ಆಗಿರುವ ಜೊಯೆಬ್ ನನ್ನು ಸೇರಿಸಿದ್ದನು. (ಮುಸಲ್ಮಾನರು ಎಷ್ಟೇ ಕಲಿತರು, ಅವರ ಮತಾಂಧತೆ ಮತ್ತು ಜಿಹಾದಿ ಪ್ರವೃತ್ತಿ ಹೋಗುವುದಿಲ್ಲ ಇದನ್ನು ತಿಳಿಯಿರಿ ! – ಸಂಪಾದಕರು) ಜೋಯೆಬ್ ಗಾಗಿ ‘ಸ್ಲೀಪರ್ ಸೆಲ್’ (ಭಯೋತ್ಪಾದಕರಿಗೆ ಸಹಾಯ ಮಾಡುವ ಗುಂಪು) ಎಂದು ಕೆಲಸ ಮಾಡುತ್ತಿದ್ದನು.

೨. ದೇಶದಲ್ಲಿನ ಸೂಕ್ಷ್ಮ ಪ್ರದೇಶದಲ್ಲಿ ದಾಳಿ ನಡೆಸುವುದಕ್ಕಾಗಿ ಜೋಯೆಬ ಇವನ ಸಹಾಯದಿಂದ ಶೋಯೆಬ್ ಇವನು ಜಿಹಾದಿ ಯುವಕರ ತಂಡ ರೂಪಿಸಿದ್ದನು.

೩. ಭಾರತದಲ್ಲಿ ದೊಡ್ಡ ಪ್ರಮಾಣದಲ್ಲಿ ಚಟುವಟಿಕೆ ನಡೆಸಿ ಅಪಘಾನಿಸ್ಥಾನ ಅಥವಾ ತುರ್ಕಿಗೆ ಪರಾರಿಯಾಗುವ ಷಡ್ಯಂತ್ರ ರೂಪಿಸಲಾಗಿತ್ತು. ಲಿಬಿಯಾದ ಶೋಯೆಬ್ ಮತ್ತು ಛತ್ರಪತಿ ಸಂಭಾಜಿನಗರದ ಜೋಯೆಬ ಇವರು ಈ ಷಡ್ಯಂತ್ರದ ಮುಖ್ಯ ಸೂತ್ರಧಾರರಾಗಿದ್ದಾರೆ, ಎಂದು ಆರೋಪ ಪತ್ರದಲ್ಲಿ ಹೇಳಿದ್ದಾರೆ.

ಜೋಯೆಬ್ ನ ಓರ್ವ ಸಹೋದರನು ಐಟಿ ಇಂಜಿನಿಯರ್ ಆಗಿದ್ದು ಅವನು ಲಿಬಿಯಾದಲ್ಲಿ ನೌಕರಿಯಲ್ಲಿದ್ದಾನೆ !

ಜೋಯೆಬ್ ಇವನು ಸಾಮಾನ್ಯ ಕುಟುಂಬದವನಾಗಿದ್ದಾನೆ. ಫೆಬ್ರುವರಿ ತಿಂಗಳಲ್ಲಿ ಎನ್.ಐ.ಎ.ಯು ಜೋಯೆಬ್ ನನ್ನು ಬಂಧಿಸಿ ನಗರದ ೯ ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ. ಇವನು ವಿವಾಹಿತನಾಗಿದ್ದು ಅವನಿಗೆ ೨ ಹೆಣ್ಣು ಮಕ್ಕಳು ಇದ್ದಾರೆ. ಅವನ ತಂದೆ ನಿವೃತ್ತ ಸರಕಾರಿ ಕಾರ್ಮಿಕನಾಗಿದ್ದಾರೆ. ಜೋಯೆಬ್ ಬೆಂಗಳೂರಿನಲ್ಲಿ ನೌಕರಿ ಮಾಡುತ್ತಿದ್ದನು. ಇತ್ತೀಚೆಗೆ ‘ವರ್ಕ ಫ್ರಮ್ ಹೋಂ’ (ಮನೆಯಿಂದ ಕೆಲಸ ಮಾಡುವುದು) ಮಾಡುತ್ತಿದ್ದನು. ಅವನ ಇಬ್ಬರು ಸಹೋದರರು ಕೊಲ್ಲಿ ದೇಶದಲ್ಲಿ ನೌಕರಿ ಮಾಡುತ್ತಾರೆ. ಅದರಲ್ಲಿನ ಓರ್ವ ಐಟಿ ಇಂಜಿನಿಯರ್ ಆಗಿದ್ದು ಅವನು ಇಸ್ಲಾಮಿಕ್ ಸ್ಟೇಟ್ ದೊಡ್ಡ ಜಾಲ ಇರುವ ಲಿಬಿಯಾದಲ್ಲಿನ ಒಂದು ಕಂಪನಿಯಲ್ಲಿ ಕೆಲಸ ಮಾಡುತ್ತಾನೆ.

ಭಾರತದಲ್ಲಿನ ಇತರ ಯುವಕರನ್ನು ಕೂಡ ಬಲೆಗೆ ಎಳೆಯುವ ಹೊಣೆ !

ಭಯೋತ್ಪಾದಕ ಚಟುವಟಿಕೆಯಲ್ಲಿ ಸಹಭಾಗಿಯಾಗಲು ಇಸ್ಲಾಮಿಕ್ ಸ್ಟೇಟ್ ನಂತಹ ಸಂಘಟನೆ ಜಿಹಾದಿ ಯುವಕರಿಗೆ ‘ಬಾಯಥ’ ಎಂದರೆ ನಿಷ್ಠೆಯ ಪ್ರತಿಜ್ಞೆ ನೀಡುತ್ತಾರೆ. ಇಸ್ಲಾಮಿಕ್ ಸ್ಟೇಟ್ ನ ಸ್ವಯಂ ಘೋಷಿತ ಖಲೀಫಾ (ಮುಖ್ಯಸ್ಥ) ಈ ಪ್ರತಿಜ್ಞೆ ನೀಡುತ್ತಾನೆ. ಈ ಪ್ರತಿಜ್ಞೆ ಕೂಡ ಜೋಯೆಬ್ ತೆಗೆದುಕೊಂಡಿದ್ದನು. ಮಹಾರಾಷ್ಟ್ರ ಸಹಿತ ಭಾರತದ ಇತರ ರಾಜ್ಯಗಳಲ್ಲಿನ ಯುವಕರನ್ನು ಬಲೆಗೆ ಸೆಳೆಯುವ ಹೊಣೆ ಜೋಯೆಬ್ ಮೇಲೆ ಇತ್ತು. ಪ್ರಚೋದಿಸುವ ಕಥೆಗಳನ್ನು ಹೇಳಿ ಯುವಕರನ್ನು ಇಸ್ಲಾಮಿಕ್ ಸ್ಟೇಟ್ ಕಡೆಗೆ ಆಕರ್ಷಿಸಲು ಜಾಲತಾಣ (ವೆಬ್ಸೈಟ್) ತಯಾರಿಸುವ ಹೊಣೆ ಜೋಯೆಬ್ ಗೆ ಒಪ್ಪಿಸಲಾಗಿತ್ತು. ಇದನ್ನು ಆತ ಛತ್ರಪತಿ ಸಂಭಾಜಿ ನಗರದಿಂದ ಮಾಡುತ್ತಿದ್ದನು. ಉಗ್ರಗಾಮಿಗಳಾಗಲು ಆತುರರಾಗಿರುವ ವ್ಯವಸ್ಥೆಯನ್ನು ಅವನು ತಯಾರಿಸುತ್ತಿದ್ದನು.

ವಾಟ್ಸಾಪ್ ಗುಂಪಿನಲ್ಲಿ ‘ಚಾಟಿಂಗ್’ ನಡೆಯುತ್ತಿತ್ತು !

ಮಹಮ್ಮದ್ ಜೋಯೆಬ್ ಖಾನ್ ಇವನು ‘ವಾಟ್ಸಾಪ್ ಗುಂಪು’ ತಯಾರಿಸಿದ್ದನು. ಈ ಗುಂಪಿನಲ್ಲಿ ಜೋಯೆಬ್ ನು ನಗರದಲ್ಲಿನ ೫೦ ಯುವಕರನ್ನು ಸೇರಿಸಿದ್ದನು. ಈ ಗುಂಪಿನಲ್ಲಿ ಅನೇಕ ಸ್ಥಳಗಳಲ್ಲಿ ದಾಳಿಗಾಗಿ ಸ್ಫೋಟಕದ ನಿರ್ಮಾಣ ಮತ್ತು ಆಧುನಿಕ ಸ್ಫೋಟಕಗಳನ್ನು ತಯಾರಿಸುವ ವಿಡಿಯೋ ಹಾಕುತ್ತಿದ್ದರು. ಅವನು ಚಟುವಟಿಕೆಯ ಪೂರ್ಣ ಆಯೋಜನೆ ಕೂಡ ರೂಪಿಸಿದ್ದರು’, ಹೀಗೂ ಆರೋಪ ಪತ್ರದಲ್ಲಿ ಹೇಳಿದ್ದಾರೆ.

ಸಂಪಾದಕೀಯ ನಿಲುವು

ಛತ್ರಪತಿ ಸಂಭಾಜಿನಗರ ಇದು ಜಿಹಾದಿ ಭಯೋತ್ಪಾದಕರ ನೆಲೆಯಾಗಿದೆ, ಇದೆ ಇದರಿಂದ ಸಿದ್ಧವಾಗುತ್ತದೆ. ಜಿಹಾದಿ ಭಯೋತ್ಪಾದನೆ ದಿಲ್ಲಿಯಿಂದ ಗಲ್ಲಿಯವರೆಗೆ ತಲುಪಿರುವಾಗ ಅದನ್ನು ತಡೆಯುವದಕ್ಕಾಗಿ ಸರಕಾರವು ಆಕ್ರಮಕ ನಿರ್ಣಯ ತೆಗೆದುಕೊಳ್ಳುವುದು ಆವಶ್ಯಕವಾಗಿದೆ !