Niranjan Hiremath Neha Murder Case : ನೇಹಾ ಹತ್ಯೆ ಹಿಂದೆ ಓರ್ವ ವ್ಯಕ್ತಿಗಳ ಕೈವಾಡವಿಲ್ಲ, ಬದಲಾಗಿ ಹಲವಾರು ವ್ಯಕ್ತಿಗಳ ಕೈವಾಡವಿದೆ; ಆದರೆ ಚಾರ್ಜ್ ಶೀಟ್ ನಮೂದಿಸಿಲ್ಲ ! – ನೇಹಾಳ ತಂದೆ ನಿರಂಜನ ಹಿರೇಮಠ ಆರೋಪ

ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ ಕೊಲೆ ಪ್ರಕರಣ

ನೇಹಾ ಹತ್ಯೆ ಹಿಂದೆ ಹಲವಾರು ವ್ಯಕ್ತಿಗಳ ಕೈವಾಡವಿದೆ

ಹುಬ್ಬಳ್ಳಿ – ನೇಹಾ ಹತ್ಯೆ ಒಬ್ಬ ವ್ಯಕ್ತಿಯದ್ದಲ್ಲ, ಅದರ ಹಿಂದೆ ಅನೇಕರಿದ್ದಾರೆ. ಕೊಲೆ ಪ್ರಕರಣದ ಚಾರ್ಜ್ ಶೀಟ್ ನಲ್ಲಿ ಒಬ್ಬರ ಹೆಸರೇ ಇರುವುದರಿಂದ ಅನುಮಾನ ಹುಟ್ಟಿದೆ. ಕೊಲೆಯ ಹಿಂದೆ ಬೇರೆಯವರ ಸಂಚು ಇದೆ. ಅದನ್ನು ಮರೆಮಾಡಲಾಗಿದೆ. ಕೊಲೆಯನ್ನು ಒಬ್ಬ ವ್ಯಕ್ತಿಯಿಂದ ಮಾಡಲು ಸಾಧ್ಯವಿಲ್ಲ. ಎಂದು ನೇಹಾ ಅವರ ತಂದೆ ಮತ್ತು ಕಾಂಗ್ರೆಸ್ ಕಾರ್ಪೊರೇಟರ್ ನಿರಂಜನ್ ಹಿರೇಮಠ್ ಅವರು ಆರೋಪಿಸಿದ್ದಾರೆ.

ನಿರಂಜನ ಹಿರೇಮಠ ಮಾತನಾಡಿ, ಹಲವು ವ್ಯಕ್ತಿಗಳು ಇದರಲ್ಲಿ ಭಾಗಿಯಾಗಿದ್ದು, ಕಾಣದ ಕೈ ಈ ಕೆಲಸ ಮಾಡಿದೆ. ಅಪರಾಧ ತನಿಖಾ ಇಲಾಖೆ ಇದನ್ನು ಬಹಿರಂಗಪಡಿಸಬೇಕಿತ್ತು. ‘ಮದುವೆ ನಿರಾಕರಣೆಯಿಂದ ಕೊಲೆ’ ಎಂಬ ಕಲ್ಪನೆಯೂ ಸುಳ್ಳು. ಆರೋಪಿಗಳು ಜಾಮೀನಿನ ಮೇಲೆ ಹೊರಬರಬೇಕೆಂದು ಕೆಲವರು ಬಯಸುತ್ತಾರೆ. ಸರಕಾರವನ್ನು ದಿಕ್ಕು ತಪ್ಪಿಸಲಾಗುತ್ತಿದೆ. ಹಾಗಾಗಿ ನನ್ನ ಮಗಳ ಹತ್ಯೆಗೆ ಸಂಬಂಧಿಸಿದಂತೆ ನನಗೆ ನ್ಯಾಯ ಸಿಕ್ಕಿಲ್ಲ. ವಿಚಾರಣೆಯನ್ನು ದಾರಿ ತಪ್ಪಿಸಲಾಗಿದೆ. ನನಗೆ ನ್ಯಾಯಾಲಯದಲ್ಲಿ ನಂಬಿಕೆ ಇದೆ. ಚಾರ್ಜ್ ಶೀಟ್ ನಕಲು ಸಿಕ್ಕ ತಕ್ಷಣ ಹೆಚ್ಚಿನ ಮಾಹಿತಿ ಹೇಳುತ್ತೇನೆ ಎಂದು ಹೇಳಿದ್ದಾರೆ.