
ನವದೆಹಲಿ – ರಾಜಧಾನಿಯಲ್ಲಿ ಜೂನ್ 27 ಮತ್ತು 28 ರಂದು ಧಾರಾಕಾರ ಸುರಿದಿದೆ. ಈ ಮಳೆ ಕಳೆದ 88 ವರ್ಷಗಳ ದಾಖಲೆಯನ್ನು ಮುರಿದಿದೆ. ಈ ಮಳೆಯಿಂದಾಗಿ ಹಲವೆಡೆ 4ರಿಂದ 5 ಅಡಿ ನೀರು ನಿಂತಿತ್ತು. ಭಾರೀ ಮಳೆಯಿಂದಾಗಿ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ‘ಟರ್ಮಿನಲ್-1’ ನ ವಾಹನ ನಿಲ್ದಾಣದ (ಪಾರ್ಕಿಂಗ್) ಪ್ರದೇಶದ ಮೇಲ್ಛಾವಣಿ ಮತ್ತು ಆಧಾರ ಕಂಬಗಳು ಕುಸಿದಿವೆ. ಅನೇಕ ವಾಹನಗಳು ಅದರಡಿ ನಜ್ಜುಗುಜ್ಜಾಗಿವೆ. ಈ ಘಟನೆಯಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, 8 ಮಂದಿ ಗಾಯಗೊಂಡಿದ್ದಾರೆ. ಈ ಹಠಾತ್ ಮಳೆಯ ಬಗ್ಗೆ ಹವಾಮಾನ ಇಲಾಖೆಯು, ‘ನಮಗೆ ಈ ಮಳೆಯ ಮುನ್ಸೂಚನೆ ಪಡೆಯಲು ಸಾಧ್ಯವಾಗಲಿಲ್ಲ’ ಎಂದು ಸ್ಪಷ್ಟನೆ ನೀಡಿದೆ.
We couldn’t predict the heavy downpour in Delhi. – Acceptance of the Meteorological Department.
👉 Earlier, when Meteorological Department predicted ‘no rain’, people made sure to venture out with umbrellas and raincoats, the same holds true to this day.
👉 Such massive errors… pic.twitter.com/sCg2baVryM
— Sanatan Prabhat (@SanatanPrabhat) June 29, 2024
ಸಂಪಾದಕೀಯ ನಿಲುವುಹವಾಮಾನ ಇಲಾಖೆ ‘ಮಳೆ ಬರುವುದಿಲ್ಲ’ ಎಂದು ಮುನ್ಸೂಚನೆ ನೀಡಿದರೂ `ಹೊರಗೆ ಹೋಗುವಾಗ ಛತ್ರಿ ಅಥವಾ ರೈನ್ಕೋಟ್ ತಪ್ಪದೇ ತೆಗೆದುಕೊಂಡು ಹೋಗಬೇಕು’ ಎಂದು ಹೇಳಲಾಗುತ್ತದೆ. ಈ ಮಾತು ಇಂದಿಗೂ ಅಷ್ಟೇ ಸತ್ಯವಾಗಿರುವುದು ಹವಾಮಾನ ಇಲಾಖೆಗೆ ನಾಚಿಕೆಗೇಡಿನ ವಿಷಯ! ವಿಜ್ಞಾನದ ಡಂಗುರ ಬಾರಿಸುವವರು ಈ ಬಗ್ಗೆ ಏನು ಹೇಳುವರು? |
ರಾಜ್ಯದ ಶಾಲೆಗಳಲ್ಲಿ ಹಿಜಾಬ್ ಗೆ ನೀಡಿರುವ ಅನುಮತಿಯ ವಿರುದ್ಧ ಹಿಂದೂಗಳ ‘ಕೇಸರಿ ಶಾಲು ಅಭಿಯಾನ’ !
ದುಬೈನಲ್ಲಿ ಕೆಲಸ ಕೊಡಿಸುವ ಆಮಿಷವೊಡ್ಡಿ ಮತಾಂಧನಿಂದ ಹಿಂದೂ ಶಿಕ್ಷಕಿಯ ಮೇಲೆ ದೌರ್ಜನ್ಯ: 6 ತೊಲ ಚಿನ್ನ ಮತ್ತು ಲಕ್ಷಾಂತರ ರೂಪಾಯಿ ಲೂಟಿ!
ದೀಪ ಬೆಳಗಿ ರೆಸ್ಟೋರೆಂಟ್ ಉದ್ಘಾಟನೆ: IUML ಮಹಿಳಾ ಶಾಸಕಿಗೆ ಕಟ್ಟರವಾದಿಗಳಿಂದ ಟೀಕೆ
ಅಸ್ಸಾಂನ ಶಾಲೆಯೊಂದರಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಂದ ಹಿಂದೂ ವಿದ್ಯಾರ್ಥಿಗಳಿಗೆ ಗೋಮಾಂಸ ತಿನ್ನಿಸಲು ಯತ್ನ
ತೃಣಮೂಲ ಕಾಂಗ್ರೆಸ್ ಶಾಸಕ ಮದನ್ ಮಿತ್ರಾ ಅವರ ಕಾರಿನ ಮೇಲೆ ಮೊಟ್ಟೆ ಎಸೆತ
ವಾರಾಣಸಿ: ಇನ್ನುಮುಂದೆ ಮೀನು-ಮಾಂಸ ಮಾರಾಟವಿಲ್ಲ!