
ರಾಮನಾಥಿ (ಗೋವಾ), ಜೂ.29 (ಸುದ್ದಿ) – ಡಾ. ನರೇದ್ರ ದಾಭೊಲ್ಕರ್ ಕೊಲೆ ಕ್ರಕರಣದಲ್ಲಿ ಖುಲಾಸೆಗೊಂಡ ಸನಾತನದ ಸಾಧಕ ಶ್ರೀ. ವಿಕ್ರಂ ಭಾವೆ ಸಹಿತ ‘ಹಿಂದುತ್ವದ ಕಾರ್ಯ’ ಎಂದು ಉಚಿತವಾಗಿ ನ್ಯಾಯಾಂಗ ಹೋರಾಟ ಮಾಡಿದ ನ್ಯಾಯವಾದಿಗಳ ಸನ್ಮಾನ ಮಾಡಲಾಯಿತು.

ನ್ಯಾಯವಾದಿ ಪ್ರಕಾಶ ಸಾಳಸಿಂಗಿಕರಗಿಕರ್, ನ್ಯಾಯವಾದಿ ಘನಶ್ಯಾಮ ಉಪಾಧ್ಯಾಯ, ವಕೀಲೆ (ಸೌ.) ಮೃಣಾಲ್ ವ್ಯವಹಾರೆ-ಸಾಖರೆ ಮತ್ತು ವಕೀಲೆ (ಸೌ.) ಸ್ಮಿತಾ ದೇಸಾಯಿ ಇವರನ್ನು ಬಿಜೆಪಿಯ ಪ್ರಖರ ಹಿಂದುತ್ವನಿಷ್ಠ ಶಾಸಕ ಟಿ. ರಾಜಾ ಸಿಂಗ ಇವರ ಹಸ್ತದಿಂದ ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದಲ್ಲಿ ಸನ್ಮಾನಿಸಲಾಯಿತು.

ರಾಜಾ ಸಿಂಗ್ ಲೋಧ್ ಅವರು ಶಾಲು ಹೊಧಿಸಿ, ಶ್ರೀಫಲ ನೀಡಿ ಜೊತೆಗೆ ದೇವತೆಗಳ ಸಾತ್ವೀಕ ಪ್ರತಿಮೆಯನ್ನು ನೀಡಿ ಸನ್ಮಾನ ಮಾಡಿದರು. ಈ ಸಂದರ್ಭದಲ್ಲಿ ಸಭಾಂಗಣದಲ್ಲಿ ಸೇರಿದ್ದ ಹಿಂದೂ ಧರ್ಮಪ್ರೇಮಿಗಳು ‘ಹರ ಹರ ಮಹಾದೇವ್’, ‘ಜೈ ಶ್ರೀರಾಮ್’ ಎಂದು ಘೋಷಣೆ ಕೂಗಿದರು.


ಈ ಮೊಕದ್ದಮೆಯಲ್ಲಿ ಗಣನೀಯ ಕೊಡುಗೆ ನೀಡಿದ ಹಿರಿಯ ನ್ಯಾಯವಾದಿ ಸುಭಾಷ್ ಝಾ, ನ್ಯಾಯವಾದಿ ಸಂಜೀವ್ ಪುನಾಳೆಕರ್, ನ್ಯಾಯವಾದಿ ವೀರೇಂದ್ರ ಇಚಲಕರಂಜಿಕರ್, ನ್ಯಾಯವಾದಿ ಸುವರ್ಣ ವತ್ಸ್-ಅವ್ಹಾಡ್ ಮೊದಲಾದವರು ಸಭೆಯ ಸ್ಥಳದಲ್ಲಿ ಪ್ರತ್ಯಕ್ಷವಾಗಿ ಇರಲು ಸಾಧ್ಯವಾಗಲಿಲ್ಲ. ಇವರೆಲ್ಲರಿಗೂ ವೈಶ್ವಿತಿಕ ಹಿಂದೂ ರಾಷ್ಟ್ರ ಮಹೋತ್ಸವದ ಸಂದರ್ಭದಲ್ಲಿ ಅಭಿನಂಧಿಸಲಾಯಿತು ಹಾಗೂ ಘೋಷಣೆಗಳನ್ನು ನೀಡಿ ಗೌರವಿಸಲಾಯಿತು.
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!
ಹಡಪ್ಸರ್ನಲ್ಲಿ ಹಿಂದುತ್ವನಿಷ್ಠ ಕಾರ್ಯಕರ್ತನ ಮೇಲೆ ಸಾಹಿಲ್ ಶೇಖ್ ಮತ್ತು ಆತನ ಗ್ಯಾಂಗ್ನಿಂದ ಹಿಂಸಾತ್ಮಕ ಹಲ್ಲೆ!