ಹಿಂದು ರಾಷ್ಟ್ರಕ್ಕೆ ತಗಲಿದ ಗ್ರಹಣವನ್ನು ದೂರ ಮಾಡಬೇಕಾಗಿದೆ ! – ಡಾ. ದೇವಕರಣ ಶರ್ಮಾ, ಸಂಸ್ಥಾಪಕರು, ಸಪ್ತರ್ಷಿ ಗುರುಕುಲ, ಉಜ್ಜೈನ

ಭಾರತವು ಸೃಷ್ಟಿಯ ನಿರ್ಮಿತಿಯಿಂದಲೇ ‘ಹಿಂದು ರಾಷ್ಟ್ರ’ವಾಗಿತ್ತು, ಅದು ಇಂದಿಗೂ ಇದೆ ಮತ್ತು ಚಂದ್ರ, ಸೂರ್ಯ ಮತ್ತು ಹಿಮಾಲಯಗಳು ಇರುವವರೆಗೂ ಅದು ಹಿಂದೂ ರಾಷ್ಟ್ರವಾಗಿಯೇ ಉಳಿಯಲಿದೆ. ಹಿಂದು ರಾಷ್ಟ್ರ ಸೂರ್ಯನಂತಿದೆ. ಯಾವ ರೀತಿ ಸೂರ್ಯನಿಗೆ ಗ್ರಹಣ ತಗಲಿದುದರಿಂದ ಅಥವಾ ಅದರೆದುರು ಮೋಡ ಕವಿದುದರಿಂದ ಅದರ ಪ್ರಕಾಶ ಬರುವುದು ನಿಲ್ಲುತ್ತದೆಯೋ, ಅದರಂತೆ ಹಿಂದು ರಾಷ್ಟ್ರಕ್ಕೆ ಗ್ರಹಣ ತಗಲಿದೆ. ಆ ಗ್ರಹಣವನ್ನು ದೂರ ಮಾಡುವುದು ಆವಶ್ಯಕವಾಗಿದೆ, ಎಂಬ ಪ್ರತಿಪಾದನೆಯನ್ನು ಸಪ್ತರ್ಷಿ ಗುರುಕುಲದ ಸಂಸ್ಥಾಪಕ ಡಾ. ದೇವಕರಣ ಶರ್ಮಾ ಇವರು ‘ವೈಶ್ವಿಕ ಹಿಂದು ರಾಷ್ಟ್ರ ಮಹೋತ್ಸವ’ದ ಮೂರನೇ ದಿನ ಮಾಡಿದರು.