Pandit Dhirendra Krishna Shastri : ಹಿಂದೂ ರಾಷ್ಟ್ರ ನಿರ್ಮಾಣ ಆಗುವವರೆಗೂ ನಾವು ಸುಮ್ಮನೆ ಕೂಡುವುದಿಲ್ಲ ! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ

ಅಯೋಧ್ಯೆ – ಬಾಗೇಶ್ವರ ಧಾಮದ ಮಹಂತ್ ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ ಅವರು ಇತ್ತೀಚೆಗೆ ಅಯೋಧ್ಯೆಗೆ ಭೇಟಿ ನೀಡಿದರು. ಅಯೋಧ್ಯೆಯಲ್ಲಿ ಪ್ರಸಾರಮಾಧ್ಯಮದವರೊಂದಿಗೆ ಸಂವಾದ ನಡೆಸಿದ ಅವರು,” ಶ್ರೀರಾಮ ಮಂದಿರದಂತೆ ಕಾಶಿ ಮತ್ತು ಮಥುರಾದಲ್ಲಿಯೂ ದೇವಾಲಯಗಳನ್ನು ನಿರ್ಮಿಸಲಾಗುವುದು. ಹಿಂದೂ ರಾಷ್ಟ್ರ ನಿರ್ಮಾಣವಾಗುವವರೆಗೂ ನಾವು ಶಾಂತವಾಗಿ ಕುಳಿತುಕೊಳ್ಳುವುದಿಲ್ಲ,’’ಹಿಂದುತ್ವವು ಒಂದು ಸಕ್ಷಮ ವಿಚಾರ ಧಾರೆಯಾಗಿದ್ದು ರಾಷ್ಟ್ರದ ಗುರುತಾಗಿದೆ. ಆದ್ದರಿಂದ ಈ ಸಿದ್ಧಾಂತವನ್ನು ಪ್ರಸ್ಥಾಪಿಸುವುದು ನಮ್ಮ ಧ್ಯೇಯವಾಗಿದೆ, ಎಂದು ಹೇಳಿದರು. ಲೋಕಸಭೆ ಚುನಾವಣೆಯಲ್ಲಿ ಅಯೋಧ್ಯೆಯಲ್ಲಿನ ಸೋಲಿನ ಬಗ್ಗೆ ಮಾತನಾಡುವಾಗ ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿಅವರು, ಹಿಂದುತ್ವ ಎಂದಿಗೂ ಸೋಲುವುದಿಲ್ಲ, ಹಿಂದುತ್ವ ಕಲಿಯುತ್ತದೆ. ಸೋಲನ್ನು ಅದು ‘ಕಲಿಯುವ ಅವಕಾಶ’ ಎಂದು ನಂಬುತ್ತಾರೆ ಎಂದು ಹೇಳಿದರು.