ರೈಲು ಮಾರ್ಗ ಮತ್ತು ಬಂದರಗಳ ಮೂಲಕ ಭಾರತ ಪಶ್ಚಿಮ ಏಷ್ಯಾ ಮತ್ತು ಯುರೋಪ್ ಇವುಗಳೊಂದಿಗೆ ಸಂಪರ್ಕಿಸಬಹುದು !

ಅಪುಲಿಯ (ಇಟಲಿ) – ಭಾರತ, ಪಶ್ಚಿಮ ಏಷಿಯಾ ಮತ್ತು ಯುರೋಪ್ ಇವುಗಳನ್ನು ಸೇರಿಸುವ ಮಹತ್ವಾಕಾಂಕ್ಷಿ ‘ಆಯಮೆಕ ಕಾರಿಡಾರ್’ ಈ ವಾಣಿಜ್ಯ ಹೆದ್ದಾರಿಯ ನಿರ್ಮಾಣಕ್ಕಾಗಿ ವಚನಭದ್ಧ ಇರುವುದಾಗಿ ೭ ವಾಣಿಜ್ಯ ರಾಷ್ಟ್ರಗಳ (‘ಜಿ ೭’ ನ) ಸಮೂಹವು ಇಲ್ಲಿಯ ಶೃಂಗ ಸಭೆಯಲ್ಲಿ ಹೇಳಿದೆ. ‘ಜಾಗತಿಕ ಮೂಲಭೂತ ಸೌಲಭ್ಯಗಳು ಮತ್ತು ಬಂಡವಾಳ ಹೂಡಿಕೆ ಇವುಗಳಿಗೆ ಚಾಲನೆ ನೀಡುವ ಯೋಜನೆ ಅಭಿವೃದ್ಧಿ ಗೊಳಿಸುವುದಕ್ಕಾಗಿ ಪೂರಕ ಪ್ರಯತ್ನಗಳಿಗೆ ಪ್ರೋತ್ಸಾಹ ನೀಡುವೆವು’, ಎಂದು ಕೂಡ ‘ಜಿ ೭’ ರಾಷ್ಟ್ರಗಳು ಈ ಸಮಯದಲ್ಲಿ ನಮೂದಿಸಿದವು.
ಇತ್ತೀಚೆಗೆ ‘ಜಿ ೭’ ಶೃಂಗಸಭೆಯು ದಕ್ಷಿಣ ಇಟಲಿಯಲ್ಲಿನ ಅಪುಲಿಯ ನಗರದಲ್ಲಿ ನೆರವೇರಿತು. ಇಟಲಿಯ ಪ್ರಧಾನಮಂತ್ರಿ ಜಾರ್ಜಿಯಾ ಮೆಲೋನಿ ಇವರ ವಿಶೇಷ ಆಮಂತ್ರಣದ ಮೇರೆಗೆ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಈ ಸಭೆಗೆ ಉಪಸ್ಥಿತರಾಗಿದ್ದರು. ಸಪ್ಟೆಂಬರ್ ೨೦೨೩ ರಲ್ಲಿ ನವದೆಹಲಿಯಲ್ಲಿ ಆಯೋಜಿಸಲಾದ ‘ಜಿ ೨೦’ ಶೃಂಗಸಭೆಯಲ್ಲಿ ಪ್ರಧಾನ ಮಂತ್ರಿಯವರು ಈ ಯೋಜನೆಯ ಘೋಷಣೆ ಮಾಡಿದ್ದರು.
G7 Summit commits to promote India-Middle East-Europe Economic Corridor (IMEC)
The IMEC is a connectivity project that seeks to develop infrastructure ports, railways, roads, sea lines and pipelines to improve trade among India, the Arabian Peninsula, the Mediterranean region… pic.twitter.com/7AlYcT5aNO
— Sanatan Prabhat (@SanatanPrabhat) June 16, 2024
ಏನಿದು, ‘ಐಮೇಕ್ ಕಾರಿಡಾರ್’ ?
‘ಐಮೇಕ್ ಕಾರಿಡಾರ್’ ಎಂದರೆ ಇಂಡಿಯಾ-ಮಿಡಲ್ ಈಸ್ಟ್ ಯುರೋಪ್ ಎಕನಾಮಿಕ್ ಕಾರಿಡಾರ್ (ಭಾರತ ಮಧ್ಯಪೂರ್ವ ಯೂರೋಪ್ ಸಾರಿಗೆ ಮಾರ್ಗ) ಆಗಿದೆ. ಈ ಯೋಜನೆಯ ಮೂಲಕ ಪಶ್ಚಿಮ ಏಷ್ಯಾ ಮತ್ತು ಯುರೋಪ್ ಗೆ ರೈಲು ಮಾರ್ಗ ಮತ್ತು ಬಂದರುಗಳ ಮೂಲಕ ಭಾರತಕ್ಕೆ ಜೋಡಿಸುವ ಪ್ರಯತ್ನ ಮಾಡಲಾಗುವುದು. ಯೋಜನೆಯಲ್ಲಿ ಭಾರತ ಸಹಿತ ಸಂಯುಕ್ತ ಅರಾಬ್ ಅಮಿರೆಟ್ಸ್, ಸೌದಿ ಅರೇಬಿಯಾ, ಯುರೋಪಿಯನ್ ಮಹಾಸಂಘ, ಫ್ರಾನ್ಸ್, ಇಟಲಿ, ಜರ್ಮನಿ ಮತ್ತು ಅಮೆರಿಕಾ ಈ ದೇಶಗಳ ಸಮಾವೇಶವಿದೆ. ಈ ಯೋಜನೆಯನ್ನು ಕುಖ್ಯಾತ ಚೀನಾದ ‘ಬೆಲ್ಟ್ ಅಂಡ್ ರೋಡ್ ಇನಿಶಿಯೇಟಿವ್’ ಹಾಗೂ ‘ಚೀನಾ-ಪಾಕಿಸ್ತಾನ ಎಕನಾಮಿಕ್ ಕಾರಿಡಾರ್’ ಈ ಯೋಜನೆಗೆ ಸವಾಲು ಹಾಕುವುದಕ್ಕಾಗಿ ಆರಂಭಿಸಲಾಗಿದೆ ಎಂದು ಹೇಳಲಾಗುತ್ತಿತ್ತು. ವಿಶೇಷವೆಂದರೆ ಕಳೆದ ವರ್ಷ ಬೆಲ್ಟ್ ಅಂಡ್ ರೋಡ್ ಇನಿಶಿಯೇಟಿವ್ ದಿಂದ ಇಟಲಿ ಹೊರಗೆ ಬಂದಿರುವುದರಿಂದ ಚೀನಾಗೆ ಅದು ಆಘಾತವಾಗಿದೆ ಎಂದು ಹೇಳಲಾಗುತ್ತಿದೆ.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation