
ನವ ದೆಹಲಿ – ಕಾಂಗ್ರೆಸ್ಸಿನ ಹಿರಿಯ ನಾಯಕ ಮತ್ತು ತಿರುವನಂತಪುರಂ (ಕೇರಳ) ಲೋಕಸಭಾ ಚುನಾವಣಾ ಕ್ಷೇತ್ರದ ಸಂಸದ ಶಶಿ ತರೂರು ಇವರ ಆಪ್ತ ಸಹಾಯಕ ಶಿವಕುಮಾರ್ ಇವನನ್ನು ಚಿನ್ನದ ಕಳ್ಳ ಸಾಗಾಣಿಕೆ ಪ್ರಕರಣದಲ್ಲಿ ಬಂಧಿಸಲಾಗಿದೆ. ಕಸ್ಟಮ್ ಸುಂಕ ಇಲಾಖೆಯಿಂದ ಮೇ ೨೯ ರಂದು ಸಂಜೆ ಇಲ್ಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ ೩ ರಲ್ಲಿ ಶಿವಕುಮಾರ್ ಇವರ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಅವನಿಂದ ಒಟ್ಟು ೫೦೦ ಗ್ರಾಮ ಚಿನ್ನ ವಶಪಡಿಸಕೊಳ್ಳಲಾಗಿದೆ. ಕಸ್ಟಮ ಸಂಕ ಇಲಾಖೆಯಿಂದ ಶಿವಕುಮಾರ್ ಇವರನ್ನು ಬಂಧಿಸಿದ್ದಾರೆ, ಆ ಸಮಯದಲ್ಲಿ ಆತ ದುಬೈಯಿಂದ ಹಿಂತಿರುಗಿತ್ತಿದ್ದ. ಮತ್ತು ವಿದೇಶದಿಂದ ಬಂದಿರುವ ಒಂದು ಪರಿಚಿತ ವ್ಯಕ್ತಿಯಿಂದ ಚಿನ್ನವನ್ನು ಹಸ್ತಾಂತರಿಸುತ್ತಿದ್ದ. ಅದರ ಬೆಲೆ ೫೫ ಲಕ್ಷ ರೂಪಾಯಿ ಇದೆ. ಅಧಿಕಾರಿಗಳು ಈ ಚಿನ್ನದ ಬಗ್ಗೆ ವಿಚಾರಿಸಿದಾಗ ಶಿವಕುಮಾರ್ ಯಾವುದೇ ದೃಢವಾದ ಮಾಹಿತಿ ನೀಡಲಿಲ್ಲ. ಬಳಿಕ ಆತನನ್ನು ಬಂಧೀಸಲಾಯಿತು. ಈ ಪ್ರಕರಣದಲ್ಲಿ ಇನ್ನೂ ೨ ರನ್ನು ಬಂಧಿಸಲಾಗಿದೆ.
ರಾಜ್ಯದ ಶಾಲೆಗಳಲ್ಲಿ ಹಿಜಾಬ್ ಗೆ ನೀಡಿರುವ ಅನುಮತಿಯ ವಿರುದ್ಧ ಹಿಂದೂಗಳ ‘ಕೇಸರಿ ಶಾಲು ಅಭಿಯಾನ’ !
ದುಬೈನಲ್ಲಿ ಕೆಲಸ ಕೊಡಿಸುವ ಆಮಿಷವೊಡ್ಡಿ ಮತಾಂಧನಿಂದ ಹಿಂದೂ ಶಿಕ್ಷಕಿಯ ಮೇಲೆ ದೌರ್ಜನ್ಯ: 6 ತೊಲ ಚಿನ್ನ ಮತ್ತು ಲಕ್ಷಾಂತರ ರೂಪಾಯಿ ಲೂಟಿ!
ಅಮೆರಿಕದಲ್ಲಿ ಅಪರಿಚಿತರಿಂದ ಭಾರತೀಯ ಯುವಕನ ಗುಂಡಿಕ್ಕಿ ಕೊಲೆ
ದೀಪ ಬೆಳಗಿ ರೆಸ್ಟೋರೆಂಟ್ ಉದ್ಘಾಟನೆ: IUML ಮಹಿಳಾ ಶಾಸಕಿಗೆ ಕಟ್ಟರವಾದಿಗಳಿಂದ ಟೀಕೆ
ಅಸ್ಸಾಂನ ಶಾಲೆಯೊಂದರಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಂದ ಹಿಂದೂ ವಿದ್ಯಾರ್ಥಿಗಳಿಗೆ ಗೋಮಾಂಸ ತಿನ್ನಿಸಲು ಯತ್ನ
ತೃಣಮೂಲ ಕಾಂಗ್ರೆಸ್ ಶಾಸಕ ಮದನ್ ಮಿತ್ರಾ ಅವರ ಕಾರಿನ ಮೇಲೆ ಮೊಟ್ಟೆ ಎಸೆತ