
ಅಯೋಧ್ಯೆ(ಉತ್ತರಪ್ರದೇಶ) – ದೇಶದ ಅನೇಕ ಸ್ಥಳಗಳಲ್ಲಿ ತಾಪಮಾನ ೪೦ ಡಿಗ್ರಿ ತಲುಪಿದೆ. ಹವಾಮನ ಇಲಾಖೆ ಈ ಹಿಂದೆಯೇ ದೇಶದಲ್ಲಿ ಬಿಸಿಗಾಳಿಯ ಬಗ್ಗೆ ಎಚ್ಚರಿಕೆ ನೀಡಿತ್ತು. ಅಯೋಧ್ಯೆಯಲ್ಲಿ ತಾಪಮಾನ ೪೧ ಡಿಗ್ರಿ ತಲುಪಿದೆ. ಆದಕಾರಣ ಇಲ್ಲಿನ ಶ್ರಿರಾಮಮಂದಿರದಲ್ಲಿ ಶ್ರಿರಾಮಲಲ್ಲಾಗೆ ಈಗ ಎ.ಸಿ. ವ್ಯವಸ್ಥೆ ಅಳವಡಿಸಲಾಗುವುದು, ಹಾಗೆಯೇ ಶ್ರಿರಾಮಲಲ್ಲಾರ ವೇಷಭೂಷಣಗಳಲ್ಲಿಯೂ ಬದಲಾವಣೆ ಮಾಡಲಾಗಿದೆ. ಶ್ರಿರಾಮಲಲ್ಲಾಗೆ ಹಗುರವಾಗಿ ಕಸೂತಿ ಮಾಡಿದ ಹತ್ತಿ ಬಟ್ಟೆಗಳನ್ನು ಹಾಕುವುದರ ಜೊತೆಗೆ ಹಗುರವಾದ ಆಭರಣಗಳಿಂದ ಅಲಂಕರಿಸಲಾಗುವುದು. ಪ್ರತಿದಿನ ಮೊಸರು ಅಥವಾ ಲಸ್ಸಿಯೊಂದಿಗೆ ಕಾಲೋಚಿತ ಸಿಗುವ ರಸಭರಿತ ಹಣ್ಣುಗಳನ್ನು ಅರ್ಪಿಸಿಲಾಗುತ್ತಿದೆ. ಇದರಲ್ಲಿ ಮಾವು, ಲಿಚಿ, ಕಲ್ಲಂಗಡಿ ಇತ್ಯಾದಿ ಸೇರಿವೆ.
ಸ್ವಾಮಿ ರಾಜಕುಮಾರ ದಾಸ್ ಮಾತನಾಡಿ, ವಿಗ್ರಹದ ಪ್ರಾಣಪ್ರತಿಷ್ಟಾಪನೆಯ ನಂತರ ವಿಗ್ರಹದಲ್ಲಿ ಜೀವ ಬರುತ್ತದೆ. ಬಳಿಕ ದೇವರಿಗೂ ಹಸಿವು ಮತ್ತು ಬಾಯಾರಿಕೆ ಉಂಟಾಗುತ್ತದೆ. ದೇವರು ಭಕ್ತರಿಗೆ ಕಾಲಕಾಲಕ್ಕೆ ಕನಸಿನಲ್ಲಿ ಅಥವಾ ಇತರ ವಿಧಾನಗಳಿಂದ ಇದರ ಅರಿವು ಮಾಡಿಕೊಡುತ್ತಾರೆ; ಆದ್ದರಿಂದ ನಾವು ಶ್ರಿರಾಮಲಲ್ಲಾನನ್ನು ಮಗುವಿನಂತೆ ಪ್ರತಿಯೊಂದು ಸೌಲಬ್ಯಗಳ ಬಗ್ಗೆ ಕಾಳಜಿ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.
ಪ್ರಧಾನಿ ಮೋದಿ ಅವರ ನಿವಾಸದ ಹೊರಗೆ ಕಾಂಗ್ರೆಸ್ ಆಂದೋಲನ : Delhi Congress Protest
ನೌಕೆಯನ್ನು ವಶಕ್ಕೆ ತೆಗೆದುಕೊಂಡು ನಾವಿಕರನ್ನು ಒತ್ತೆಯಾಳಾಗಿರಿಸಿದ್ದ ಸೊಮಾಲಿಯಾದ 44 ನಾಗರಿಕರಿಗೆ ಜೀವಾವಧಿ ಶಿಕ್ಷೆ! : Somalians Get Life Imprisonment
‘ಕಾಕ್ರೋಚ್ ಜನತಾ ಪಾರ್ಟಿ’ಯ ಪ್ರತಿಭಟನಾಕಾರರು ನಡೆಸಿದ ಕಲ್ಲು ತೂರಾಟದಲ್ಲಿ ಪೊಲೀಸರು ಗಾಯಗೊಂಡಿಲ್ಲವಂತೆ! : Mohammed Zubair AltNews
ಬುಲ್ಡೋಜರ್ ಕ್ರಮಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ನ ವಿಭಜಿತ ತೀರ್ಪು! : Allahabad HC
ಬೀದಿ ನಾಯಿಯ ದಾಳಿಯಿಂದ ಗಾಯಗೊಂಡ ಬಾಲಕಿಗೆ ೧ ಲಕ್ಷ ರೂಪಾಯಿ ಪರಿಹಾರ ನೀಡಲು ಆದೇಶ
ಅಂದಿನ ಸಮಾಜವಾದಿ ಮತ್ತು ಕಾಂಗ್ರೆಸ್ ಸರಕಾರಗಳು ಗೋರಿಗಳ ಗೋಡೆಗಳ ಮೇಲೆ ಹಣ ವ್ಯಯ ಮಾಡುವುದನ್ನೇ ‘ಜಾತ್ಯತೀತತೆ’ ಎಂದು ಭಾವಿಸಿದ್ದವು!