Protest For Killing Student Leader: ವಿದ್ಯಾರ್ಥಿ ಮುಖಂಡ ಹರ್ಷರಾಜ ಹತ್ಯೆಯನ್ನು ವಿರೋಧಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ !

ಪಾಟಲಿಪುತ್ರ (ಬಿಹಾರ) – ಇಲ್ಲಿನ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿ ಮುಖಂಡ ಹರ್ಷರಾಜ ಅವನನ್ನು ಮಹಾವಿದ್ಯಾಲಯದಲ್ಲಿ ಚಿತ್ರಹಿಂಸೆ ನೀಡಿ ಹತ್ಯೆ ಮಾಡಲಾಗಿತ್ತು. ಈ ಹತ್ಯೆಯನ್ನು ಖಂಡಿಸಿ ವಿದ್ಯಾರ್ಥಿಗಳು ಪಾಟಲಿಪುತ್ರದ ಅಶೋಕ ರಾಜಪಥವನ್ನು ಅಡ್ಡಗಟ್ಟಿ ಪ್ರತಿಭಟನೆಯನ್ನು ಪ್ರಾರಂಭಿಸಿದರು. ಪ್ರತಿಭಟನಾಕಾರರು ರಸ್ತೆಗಿಳಿದು ಎಲ್ಲೆಡೆ ಬೆಂಕಿಹಚ್ಚಲು ಸುಡಲು ಪ್ರಾರಂಭಿಸಿ, ಹರ್ಷರಾಜನ ಕೊಲೆಗಾರರನ್ನು ಬಂಧಿಸುವಂತೆ ಒತ್ತಾಯಿಸಿದರು. ಈ ವಿಷಯದ ಮಾಹಿತಿ ಸಿಗುತ್ತಲೇ ಪೊಲೀಸ ಪಡೆ ಘಟನಾಸ್ಥಳಕ್ಕೆ ಧಾವಿಸಿತು.

ರಸ್ತೆ ತಡೆ ನಡೆಸಿ ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಪೊಲೀಸರು ತೆಗೆದುಹಾಕಲು ಯತ್ನಿಸಿದರು; ಆದರೆ ಸಿಟ್ಟಿಗೆದ್ದ ವಿದ್ಯಾರ್ಥಿಗಳು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಪೊಲೀಸರು ಬಲಪ್ರಯೋಗ ಮಾಡಿ ಪರಿಸ್ಥಿತಿಯನ್ನು ಹತೋಟಿಗೆ ತರಲು ಯತ್ನಿಸಿದರು. ಗಲಭೆ ಮಾಡುತ್ತಿದ್ದ ಕೆಲ ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.