ಮೂರಾದಬಾದ (ಉತ್ತರಪ್ರದೇಶ)ಕಳ್ಳತನವಾಗಿದ್ದ ವಸ್ತುಗಳನ್ನು ಹಿಂಪಡೆಯಲು ಹೋದ ಪೊಲೀಸರ ಮೇಲೆ ಮುಸಲ್ಮಾನರಿಂದ ದಾಳಿ !

ಇಬ್ಬರು ಪೊಲೀಸ್ ಅಧಿಕಾರಿಗಳಿಗೆ ಗಾಯ

ಮುರಾದಾಬಾದ (ಉತ್ತರಪ್ರದೇಶ) – ಲೂಟಿ ಮಾಡಿ ತಂದಿರುವ ವಸ್ತುಗಳನ್ನು ಹಿಂಪಡೆಯುವದಕ್ಕಾಗಿ ಪಾಕಬಾಡ ಪ್ರದೇಶಕ್ಕೆ ಹೋಗಿದ್ದ ತಮಿಳುನಾಡು ಪೊಲೀಸರ ಮೇಲೆ ಅಪರಾಧಿ ಪ್ರವೃತ್ತಿಯ ಮುಸಲ್ಮಾನರು ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ. ಈ ದಾಳಿಯ ಪ್ರಕರಣದಲ್ಲಿ ಪೊಲೀಸರು ೧೫ ಜನರ ವಿರುದ್ಧ ದೂರು ದಾಖಲಿಸಿಕೊಂಡು ಕೆಲವರನ್ನು ಬಂಧಿಸಿದ್ದಾರೆ .

೧ . ಏಪ್ರಿಲ್ ೬ ರಂದು ತಮಿಳುನಾಡಿನಲ್ಲಿನ ಬಿಲ್ಲುಪುರಂನ ನಿವಾಸಿಯಾದ ಗೀತಾದೇವಿ ಅವರ ಮನೆಗೆ ದುಷ್ಕರ್ಮಿಗಳು ದರೋಡೆ ನಡೆಸಿದ್ದರು. ತಮಿಳುನಾಡು ಪೋಲಿಸರು ನಡೆಸಿರುವ ತನಿಖೆಯಿಂದ ಕೆಲವು ಜನರನ್ನು ಬಂಧಿಸಲಾಗಿತ್ತು. ಈ ಕಳ್ಳರು, ಲೂಟಿ ಮಾಡಿರುವ ವಸ್ತುಗಳನ್ನು ಪಾಕಬಾಡ ಮುರಾದಾಬಾದದ ಓರ್ವ ಚಿನ್ನ ಬೆಳ್ಳಿ ವ್ಯಾಪಾರಿಗೆ ಮಾರಿದ್ದರು.

೨. ನಂತರ ತಮಿಳುನಾಡು ಪೊಲೀಸರು ಪಾಕಬಾಡ ಪೊಲೀಸರನ್ನು ಸಂಪರ್ಕಿಸಿದರು . ತಮಿಳುನಾಡು ಪೊಲೀಸರ ತಂಡ ಪಾಕಬಾಡದ ಚಿನ್ನ ಬೆಳ್ಳಿ ಮಾರುಕಟ್ಟೆಯಲ್ಲಿನ ನಿವಾಸಿ ಅಕಬರ ಮತ್ತು ಯೂಸಫ್ ಅವರ ಅಂಗಡಿಗೆ ತಲುಪಿ ತಪಾಸಣೆ ಆರಂಭಿಸಿದಾಗ ಇತರ ವ್ಯಾಪಾರಿಗಳು ಅದನ್ನು ವಿರೋಧಿಸಿದರು. ಕೆಲವರು ಪೊಲೀಸರಿಗೆ ಬೈಗುಳ ಬೈದರು. ಈ ಗಲಾಟೆಯನ್ನು ಕೇಳಿ ಅನೇಕ ಜನ ಸೇರಿದರು. ಆ ಬಳಿಕ ನೆರೆದ ಗುಂಪಿನಿಂದ ಪೊಲೀಸರ ಮೇಲೆ ದಾಳಿ ನಡೆಯಿತು.

೩. ಈ ದಾಳಿಯ ಮಾಹಿತಿ ಪಾಕಬಾಡ ಪೊಲೀಸ್ ಠಾಣೆಗೆ ನೀಡಿದ ನಂತರ ಹೆಚ್ಚುವರಿ ಪೊಲೀಸ್ ಪಡೆಯ ಸಹಿತ ಹಿರಿಯ ಅಧಿಕಾರಿಗಳು ಅಲ್ಲಿಗೆ ತಲುಪಿದರು. ಅಲ್ಲಿಯವರೆಗೆ ಈ ದಾಳಿಯಲ್ಲಿ ಪೊಲೀಸ್ ಅಧಿಕಾರಿ ಕುಲದೀಪ ತೋಮಾರ್ ಮತ್ತು ಆಕಾಶ ತ್ಯಾಗಿ ಗಾಯಗೊಂಡಿದ್ದರು. ಪೊಲೀಸ್ ಪಡೆ ಬಂಡಿದ್ದನ್ನು ನೋಡಿ ದಾಳಿಕೋರರು ಪರಾರಿಯಾದರು. ಈ ಘಟನೆಯಲ್ಲಿ ನಾಲ್ವರನ್ನು ಬಂಧಿಸಲಾಯಿತು .

೪ . ಪೊಲೀಸರು ಅಕ್ಬರ್, ಯೂಸುಫ್, ಫರಜಾನ್, ಯೂನುಸ್, ಅಬ್ದುಲ್ ಗನಿ, ವಾಸಿಂ, ಹನೀಫ್ ಮೆಡ್ಡ, ಸಾಯರಾ ಬಾನು, ಹಿನಾ ಪರವಿನ್ ಮತ್ತು ೬ ಅಜ್ಞಾತ ಪುರುಷರು ಮತ್ತು ಮಹಿಳೆಯರ ವಿರುದ್ಧ ಗಲಭೆ ಮತ್ತು ಸರಕಾರಿ ಕಾರ್ಯದಲ್ಲಿ ಅಡಚಣೆ ಮಾಡುವುದು, ಹೊಡೆಯುವುದು, ಪೊಲೀಸರ ಮೇಲೆ ದಾಳಿ ಮಾಡುವುದು ಮುಂತಾದ ಕಲಂ ಅಡಿಯಲ್ಲಿ ದೂರು ದಾಖಲಿಸಿದ್ದಾರೆ.