ಹುಣಸೂರಿನಲ್ಲಿ ಜಿಹಾದಿ ಮಾನಸಿಕತೆಯಲ್ಲಿ ಏರಿಕೆ ! – ಪ್ರಮೋದ್ ಮುತಾಲಿಕ್, ಸಂಸ್ಥಾಪಕ, ಶ್ರೀರಾಮಸೇನೆ

ಹುಣಸೂರು – ಇಲ್ಲಿಯ ಜನರ ಜಿಹಾದಿ ಮನಸ್ಥಿತಿ ವೇಗವಾಗಿ ಬೆಳೆಯುತ್ತಿದೆ. ಇಲ್ಲಿನ ಜಿಹಾದಿಗಳು ಹಿಂದೂ ಯುವಕರ ಹತ್ಯೆ ಮಾಡುತ್ತಿದ್ದಾರೆ, ಹಾಗೂ ಅವರಿಗೆ ಆತ್ಮಹತ್ಯೆ ಮಾಡಿಕೊಳ್ಳುವಂತೆ ಅನಿವಾರ್ಯ ಗೊಳಿಸುತ್ತಿದ್ದಾರೆ. ಈ ಬಗ್ಗೆ ಸರಕಾರ ಮತ್ತು ಪೊಲೀಸ ಇಲಾಖೆಯು ಜಾಗರೂಕರಾಗಿರಬೇಕು ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ ಮುತಾಲಿಕ್ ಇವರು ಎಚ್ಚರಿಕೆ ನೀಇಡದ್ದಾರೆ. ಹುಣಸೂರು ತಾಲೂಕಿನ ದಾಸನಪುರದ ರವಿ ಅವರ ಪುತ್ರ ಮುತ್ತುರಾಜ್ ನನ್ನು ಜಿಹಾದಿಗಳು ಇತ್ತೀಚೆಗೆ ಹತ್ಯೆ ಮಾಡಿದ್ದರು. ಮುತಾಲಿಕ್ ಅವರು ಮೃತಪಟ್ಟ ಮುತ್ತುರಾಜ್ ಅವರ ಕುಟುಂಬದ ಸದಸ್ಯರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು. ‘ಈ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಲೇಬೇಕು. ಇದಕ್ಕಾಗಿ ಹಿಂದೂ ಸಂಘಟನೆಗಳು ಕಾನೂನು ಹೋರಾಟಕ್ಕೆ ಸಹಾಯ ಮಾಡಲಿವೆ,’ ಎಂದು ಮುತಾಲಿಕ್ ಹೇಳಿದರು. ಬಳಿಕ ಗ್ರಾಮದ ಕೆಲ ಮುಖಂಡರನ್ನು ಭೇಟಿ ಮಾಡಿ ಚರ್ಚಿಸಿದರು. ಕೆಲ ದಿನಗಳ ಹಿಂದೆ ಕೆ.ಆರ್. ನಗರದಲ್ಲಿಯೂ ಮುತ್ತುರಾಜ್ ನಂತೆ ಪುನೀತ್ ನನ್ನು ಹತ್ಯೆ ಮಾಡಿದ್ದರು. ಎರಡೂ ಪ್ರಕರಣಗಳಲ್ಲಿ ದಾಳಿಕೋರರು ಜಿಹಾದಿಗಳಾಗಿದ್ದರು.