ಕಾಂಗ್ರೆಸ್ಸಿನ ರಾಹುಲ್ ಗಾಂಧಿ ಇವರ ‘ಒಡೆಯಿರಿ ಮತ್ತು ಆಳಿರಿ’ ಎಂಬ ಹಿಂದೂ ಘಾತಕ ಧೋರಣೆ !

‘ಪ್ರಶ್ನೆ ಪತ್ರಿಕೆ ತಯಾರಿಸುವವರು ಮೇಲ್ ಜಾತಿಯವರಿದ್ದರೆ ದಲಿತರು ಫೇಲಾಗುತ್ತಾರಂತೆ !

ನವ ದೆಹಲಿ – ಸ್ಪರ್ಧಾತ್ಮಕ ಪರೀಕ್ಷೆಯಿಂದ ವಂಚಿತವಾಗಿರುವ ವರ್ಗ, ಹಿಂದುಳಿದ ವರ್ಗ ಮತ್ತು ಮೇಲ್ಜಾತಿಯವರಲ್ಲಿ ಭೇದಭಾವ ಆಗುತ್ತಿದೆ ಎಂದೂ ರಾಹುಲ್ ಗಾಂಧಿ ಇವರು ಆರೋಪಿಸಿದ್ದಾರೆ. ಇದರ ಬಗ್ಗೆ ಅವರ ಒಂದು ವಿಡಿಯೋ ‘ಎಕ್ಸ್’ನಲ್ಲಿ ಬೃಹತ್ ಪ್ರಮಾಣದಲ್ಲಿ ಪ್ರಸಾರವಾಗುತ್ತಿದೆ. ವಿಡಿಯೋದಲ್ಲಿ ಗಾಂಧಿ ಕೆಲವು ಜನರ ಜೊತೆಗೆ ಮಾತನಾಡುತ್ತಿರುವಾಗ ಸಂಪೂರ್ಣ ವ್ಯವಸ್ಥೆಯ ಕುರಿತು ಪ್ರಶ್ನೆಯನ್ನು ಉಪಸ್ಥಿತಗೊಳಿಸುತ್ತ, ಪರೀಕ್ಷೆಯಲ್ಲಿ ಮೇಲ್ವರ್ಗದ ಜನರು ಪ್ರಶ್ನ ಪತ್ರಿಕೆ ತಯಾರಿಸುತ್ತಾರೆ. ಆದ್ದರಿಂದ ದಲಿತರ ಅನೇಕ ಜನರು ಅನ್ನುತ್ತೀರಣರಾಗುತ್ತಾರೆ. ಇದರ ಬಗ್ಗೆ ಗಾಂಧಿ ಇವರು ಅಮೆರಿಕದಲ್ಲಿನ ಕೃಷ್ಣವರ್ಣದವರು ಮತ್ತು ಶ್ವೇತ ವರ್ಣದವರಲ್ಲಿನ ದೀರ್ಘಕಾಲ ನಡೆಯುತ್ತಿರುವ ಇಂತಹ ಭೇದಭಾವದ ಉದಾಹರಣೆ ಸರ್ವಸಾಮಾನ್ಯರಿಗೆ ತಿಳಿಸಿ ಹೇಳುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ವಿಡಿಯೋ ‘ಮೇಘ ಅಪ್ಡೇಟ್ಸ್’ ಈ ಟ್ವಿಟರ್ ಖಾತೆಯಿಂದ ಮೇ ೬ ರ ಮಧ್ಯಾಹ್ನ ಪ್ರಸಾರವಾಗಿದ್ದು ಅದನ್ನು ೧೦ ಲಕ್ಷ ಗಿಂತಲೂ ಹೆಚ್ಚಿನ ಜನರು ನೋಡಿದ್ದಾರೆ. ವಿಡಿಯೋದಲ್ಲಿ ರಾಹುಲ್ ಗಾಂಧಿ, ಈಗ ನೀವು ಓರ್ವ ರೈತನ ಮಗನಾಗಿರುವಿರಿ ಎಂದು ತಿಳಿಯಿರಿ ಮತ್ತು ನಾನು ಒಬ್ಬ ಉದ್ಯೋಗಿಯಾಗಿದ್ದೇನೆ ಎಂದು ತಿಳಿಯಿರಿ. ನೀವು ಪ್ರಶ್ನೆ ಪತ್ರಿಕೆ ತಯಾರಿಸಿದ್ದರೇ ನಾನು ಖಂಡಿತವಾಗಿ ಅನ್ನುತ್ತೀರ್ಣನಾಗುವೆ ಮತ್ತು ನಾನು ಪ್ರಶ್ನೆ ಪತ್ರಿಕೆ ತೆಗೆದರೆ ನೀವು ಅನ್ನುತ್ತೀರ್ಣವಾಗುವಿರಿ. ಇದರ ಅರ್ಥ ಗುಣಮಟ್ಟದ ಪ್ರಶ್ನೆ ಆಗದೆ ನಿಮ್ಮ ಮೇಲೆ ಯಾರಿದ್ದಾರೆ ಇದು ಮಹತ್ವದ್ದಾಗಿದೆ ಎಂದು ಹೇಳುದರು.

ಸಂಪಾದಕೀಯ ನಿಲುವು

ಮೊದಲು ದೇಶದಲ್ಲಿನ ಮುಸಲ್ಮಾನರನ್ನು ಮತ್ತು ಈಗ ಹಿಂದುಳಿದ ಜಾತಿಯ ಹಿಂದುಗಳನ್ನು ತಮ್ಮ ಕಡೆಗೆ ಸೆಳೆಯುವುದಕ್ಕಾಗಿ ರಾಹುಲ್ ಗಾಂಧಿ ಇವರು ನಡೆಸಿರುವ ಪ್ರಯತ್ನ ಲಜ್ಜಾಸ್ಪದವಾಗಿದೆ. ಭಾರತೀಯರೇ, ಇಂತಹ ಕಾಂಗ್ರೆಸ್ಸನ್ನು ಇನ್ನು ಶಾಶ್ವತವಾಗಿ ಮನೆಗೆ ಕಳುಹಿಸುವ ಪ್ರತಿಜ್ಞೆ ಮಾಡಿ !