TMC MLA Threatens Hindus : ನೀವು ೩೦% ರಷ್ಟಿದ್ದೀರಿ, ನಾವು ೭೦% ರಷ್ಟಿದ್ದೇವೆ, ಗಂಗೆಯಲ್ಲಿ ಮುಳುಗಿಸಿ ಬಿಡುತ್ತೇವೆ ! – ತೃಣಮೂಲ ಕಾಂಗ್ರೆಸ್ಸಿನ ಸಂಸದ ಹುಮಾಯೂನ್ ಕಬೀರ್

ಮುರ್ಸಿದಾಬಾದ್ (ಬಂಗಾಲ) ತೃಣಮೂಲ ಕಾಂಗ್ರೆಸ್ಸಿನ ಸಂಸದ ಹುಮಾಯೂನ್ ಕಬೀರ್ ಇವರಿಂದ ಹಿಂದುಗಳಿಗೆ ಬೆದರಿಕೆ !

ತೃಣಮೂಲ ಕಾಂಗ್ರೆಸ್ಸಿನ ಸಂಸದ ಹುಮಾಯೂನ್ ಕಬೀರ್

ಕೋಲಕಾತಾ (ಬಂಗಾಲ) : ಮುರ್ಸಿದಾಬಾದ್ ನಲ್ಲಿ ನೀವು (ಹಿಂದುಗಳು) ಶೇಕಡ ೩೦ ರಷ್ಟು ಮತ್ತು ನಾವು ಮುಸಲ್ಮಾನರು ಶೇಕಡಾ ೭೦ ರಷ್ಟು ಇದ್ದೇವೆ . ಇಲ್ಲಿ ಗಲಭೆ ನಡೆಸಲು ಪ್ರಯತ್ನ ಮಾಡಿದರೆ, ಮುಸಲ್ಮಾನರು ಶಾಂತವಾಗಿರುವುದಿಲ್ಲ. ಎರಡು ಗಂಟೆಯಲ್ಲಿ ಭಾಗಿರಥಿ (ಗಂಗೆಯಲ್ಲಿ) ನದಿಯಲ್ಲಿ ನಿಮ್ಮನ್ನು ಮುಳುಗಿಸದಿದ್ದರೆ ನಾನು ರಾಜಕೀಯವನ್ನೇ ಬಿಡುತ್ತೇನೆ, ಎಂದು ಆಡಳಿತ ಪಕ್ಷ ತೃಣಮೂಲ ಕಾಂಗ್ರೆಸ್ಸಿನ ಸಂಸದ ಹುಮಾಯೂನ್ ಕಬೀರ್ ಒಂದು ಪ್ರಚಾರ ಸಭೆಯಲ್ಲಿ ಈ ರೀತಿ ಬೆದರಿಕೆ ನೀಡಿದರು. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರಗೊಂಡಿದೆ.

ಬಂಗಾಲದಲ್ಲಿ ಹಿಂದುಗಳು ಅಲ್ಪಸಂಖ್ಯಾತರಾದರೆ, ಏನಾಗಬಹುದು ? ಇದರ ಯೋಚನೆ ಮಾಡಿ ! – ಬಿಜೆಪಿ

ಕಬೀರ್ ಅವರ ಬೆದರಿಕೆಯ ಬಗ್ಗೆ ಬಿಜೆಪಿ ಮಾಹಿತಿ ತಂತ್ರಜ್ಞಾನ ಇಲಾಖೆಯ ಮುಖ್ಯಸ್ಥ ಅಮಿತ್ ಮಾಳವಿಯ ಅವರು ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರನ್ನು ಟೀಕಿಸಿದರು. ಎಕ್ಸ್ ನಲ್ಲಿ ಪೋಸ್ಟ್ ಮಾಡಿದ ಮಾಳವಿಯ, ಮುರ್ಸಿದಾಬಾದ್ ನಲ್ಲಿ ಹಿಂದುಗಳ ಸಂಖ್ಯೆ ಕೇವಲ ಶೇಕಡ ೨೮ ರಷ್ಟು ಇದೆ, ಯೋಚನೆ ಮಾಡಿ ಉಳಿದ ಬಂಗಾಲದಲ್ಲಿ ಹಿಂದೂ ಅಲ್ಪಸಂಖ್ಯಾತರಾದರೆ ಏನಾಗುವುದು? ಬಂಗಾಲದಲ್ಲಿ ಓಲೈಕೆ ರಾಜಕಾರಣ ಇನ್ನಷ್ಟು ಕೀಳು ಮಟ್ಟಕ್ಕೆ ಇಳಿದಿದೆ. ಈ ಸಂಸದನನ್ನು ಪಕ್ಷದಿಂದ ಅಮಾನತುಗೊಳಿಸುವ ಧೈರ್ಯ ಮಮತಾ ಬ್ಯಾನರ್ಜಿ ಮಾಡುವರೆ?

ಬಿಜೆಪಿಯ ವಕ್ತಾರರಾದ ಸುಧಾಂಶು ತ್ರಿವೇದಿ ಅವರು,ಹುಮಾಯೂನ್ ಅವರ ಈ ಹೇಳಿಕೆ ಹಿಂದುಗಳನ್ನು ಸಂಪೂರ್ಣವಾಗಿ ನಾಶ ಮಾಡುವ ಷಡ್ಯಂತ್ರದ ಸಂಕೇತವಾಗಿದೆ ಎಂದು ಆರೋಪಿಸಿದರು.

ಸಂಪಾದಕೀಯ ನಿಲುವು

  • ಭವಿಷ್ಯದಲ್ಲಿ ಬಂಗಾಲದಲ್ಲಿನ ಹಿಂದುಗಳ ಸ್ಥಿತಿ ಹೇಗಿರುವುದು ಎಂಬುದನ್ನು ಈ ಹೇಳಿಕೆ ತೋರಿಸಿದೆ, ಇದನ್ನು ತಿಳಿದುಕೊಳ್ಳಿ
  • ಜಾತ್ಯಾತೀತ ರಾಜಕೀಯ ಪಕ್ಷಗಳು ಈ ಬಗ್ಗೆ ಮಾತನಾಡುವುದಿಲ್ಲ; ಯಾಕೆಂದರೆ ಅವರಿಗೆ ಹಿಂದುಗಳದ್ದಲ್ಲ, ಮುಸಲ್ಮಾನರ ಮತಗಳು ಬೇಕಾಗಿದೆ!
  • ಇದು ಒಂದೆರಡು ಹೇಳಿಕೆಗಳಲ್ಲ, ಕಳೆದ 1400 ವರ್ಷಗಳಲ್ಲಿ ಹಿಂದೂಗಳ ಅಸ್ತಿತ್ವಕ್ಕೇ ಧಕ್ಕೆ ತರುವ ಜಿಹಾದಿ ಪಿತೂರಿಯ ಮುಂದುವರಿಕೆಯಾಗಿದೆ !.
  • ಹಿಂದುಗಳಿಂದ ಪ್ರಜಾಪ್ರಭುತ್ವದ ಹತ್ಯೆ ಆಗುತ್ತಿದೆ, ಭಾರತದಲ್ಲಿನ ಮುಸಲ್ಮಾನರು ಭಯದಲ್ಲಿ ಬದುಕುತ್ತಿದ್ದಾರೆ, ಎಂದು ವಿಷ ಕಾರುವ ಅಮೇರಿಕ ವಾರ್ತಾ ಸಂಸ್ಥೆ ಸಿಎನ್ಎನ್ ಗೆ ಹಿಂದುಗಳು ಈ ಬಗ್ಗೆ ಪ್ರಶ್ನೆ ಕೇಳಬೇಕು !