ಪಾಕಿಸ್ತಾನಿ ಹುಡುಗಿಗೆ ಭಾರತದ ಹಿಂದೂವಿನ ಹೃದಯ ಕಸಿ; ತಕರಾರು ತೆಗೆದ ಪಾಕಿಸ್ತಾನಿ ಇಮಾಮ್ !

ಕಾಫಿರರು ಇಸ್ಲಾಂ ಸ್ವೀಕರಿಸದೇ ಇರುವುದರಿಂದ ಅವನು ಹೃದಯ ನೀಡಿದರೂ ಅವನಿಗೆ ಲಾಭ ಆಗುವುದಿಲ್ಲ !

ಇಸ್ಲಾಮಾಬಾದ (ಪಾಕಿಸ್ತಾನ) – ಇತ್ತೀಚಿಗೆ ಪಾಕಿಸ್ತಾನದ ೧೯ ವರ್ಷದ ಓರ್ವ ಬಡ ಮುಸಲ್ಮಾನ ಹುಡುಗಿಗೆ ಭಾರತದಲ್ಲಿ ಹೃದಯವನ್ನು ಉಚಿತವಾಗಿ ಕಸಿ ಮಾಡಲಾಯಿತು. ಆ ಸಮಯದಲ್ಲಿ ಓರ್ವ ಭಾರತೀಯ ಹಿಂದೂವಿನ ಹೃದಯ ಆಕೆಯ ದೇಹದಲ್ಲಿ ಹಾಕಲಾಯಿತು. ಆ ಹಿಂದೂ ಮೃತ್ಯುವಿನ ಮೊದಲು ತನ್ನ ಅವಯವಗಳನ್ನು ದಾನ ಮಾಡಿದ್ದನು. ಈ ಘಟನೆಯಿಂದ ಪಾಕಿಸ್ತಾನದ ಓರ್ವ ಇಮಾಮನು, ಈ ಹೃದಯ ಓರ್ವ ಕಾಫಿರನದ್ದಾಗಿದೆ. ಆದ್ದರಿಂದ ಅಲ್ಲನ ಬಾಗಿಲು ಆ ವ್ಯಕ್ತಿಗಾಗಿ ತೆರೆಯುವುದಿಲ್ಲ ಎಂದು ಹೇಳಿದನು. ಈ ಇಮಾಮ ಮಾತು ಮುಂದುವರಿಸಿ, ಕಾಫಿರನ ಎಲ್ಲಕ್ಕಿಂತ ಔದಾರ್ಯ ಕೂಡ ಅವನಿಗೆ ಯಾವುದೇ ರೀತಿ ಉಪಯೋಗವಾಗುವುದಿಲ್ಲ. ಅದೇ ಯಾವುದಾದರೂ ಮುಸಲ್ಮಾನನು ಆ ಹುಡುಗಿಗೆ ಅವನ ಹೃದಯ ನೀಡಿದ್ದರೆ, ಆಗ ಅಲ್ಲ ಅವನ ಕಾಳಜಿ ವಹಿಸುತ್ತಿದ್ದನು.

ಈ ಇಮಾಮ್ ಮಾತು ಮುಂದುವರೆಸಿ, ಯಾವುದಾದರೂ ವ್ಯಕ್ತಿಯಿಂದ ಇಸ್ಲಾಮ ಧರ್ಮದ ಪಾಲನೆ ಮಾಡುವಾಗ ಯಾವುದೇ ಒಳ್ಳೆಯ ಕೆಲಸ ಮಾಡಿದರೂ, ಅವನಿಗೆ ಅದರ ಒಳ್ಳೆಯ ಪ್ರತಿಫಲ ದೊರೆಯುತ್ತದೆ; ಆದರೆ ಕಾಫಿರನು ಎಷ್ಟೇ ಒಳ್ಳೆಯ ಕೆಲಸ ಮಾಡಿದರು ಫಲ ದೊರೆಯುವುದಿಲ್ಲ. ಆದ್ದರಿಂದ ದಾನ ನೀಡುವ ವ್ಯಕ್ತಿ ಮುಸಲ್ಮಾನ ಆಗಿರುವುದು ಆವಶ್ಯಕವಾಗಿದೆ ಎಂದು ಹೇಳಿದನು.

ಭಾರತದಲ್ಲಿ ಇಂದಿಗೂ ಮನುಷ್ಯತ್ವ ಉಳಿದಿದೆ ! – ಓರ್ವ ಪಾಕಿಸ್ತಾನಿ ಯುವಕ

ಈ ಘಟನೆಯಿಂದ ಓರ್ವ ಪಾಕಿಸ್ತಾನಿ ಯುವಕನು, ಇಂತಹ ಜನರಿಗೆ ಪಾಕಿಸ್ತಾನದ ಜನತೆಯ ಮನಸ್ಸಿನಲ್ಲಿ ವಿಷ ಬೀರೂರಿರುತ್ತದೆ. ಭಾರತೀಯರಲ್ಲಿ ಎಂದಿಗೂ ಮನುಷ್ಯತ್ವ ಇರುವುದು, ಆದರೆ ನಮ್ಮ ನಾಯಕರಿಗೆ ಭಾರತ ಮತ್ತು ಪಾಕಿಸ್ತಾನಿ ಅಂಶಗಳ ಕುರಿತು ರಾಜಕಾರಣ ಮಾಡುವುದಿರುತ್ತದೆ ಎಂದು ಹೇಳಿದನು.

ಸಂಪಾದಕೀಯ ನಿಲುವು

‘ಹಿಂದೂ ಮುಸಲ್ಮಾನ ಐಕ್ಯತೆ’ಯ ಬಗ್ಗೆ ಮಾತನಾಡುವರ ಬಾಯಿಂದ ಈಗ ಇಮಾಮನ ಹೇಳಿಕೆಯ ಬಗ್ಗೆ ಒಂದು ಚಕಾರ ಶಬ್ದ ಕೂಡ ಬರುವುದಿಲ್ಲ ! ಇಸ್ಲಾಂಅನ್ನು ಹಾಡಿಹೊಗಳುವವರು ಈ ಇಮಾಮಗೆ ವಿರೋಧ ವ್ಯಕ್ತಪಡಿಸುವುದಿಲ್ಲ ಇದನ್ನು ತಿಳಿದುಕೊಳ್ಳಿ !