ರಾಮನವಮಿ ಆಚರಣೆ ವೇಳೆ ಮತಾಂಧ ಮುಸ್ಲಿಮರಿಂದ ದಾಳಿ ಇಬ್ಬರು ಹಿಂದೂಗಳಿಗೆ ಗಾಯ !

ದಾವಣಗೆರೆಯಲ್ಲಿನ ಘಟನೆ

ದಾವಣಗೆರೆ – ಜಿಲ್ಲೆಯ ಚನ್ನಗಿರಿ ತಾಲೂಕಿನ ನಲ್ಲೂರು ಕ್ಯಾಂಪ್‌ನಲ್ಲಿ ರಾಮನವಮಿ ಆಚರಣೆ ವೇಳೆ ಕೆಲ ಮತಾಂಧ ಮುಸ್ಲಿಂ ಯುವಕರು ಹಿಂದೂ ಯುವಕರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ. ಇದರಿಂದ ಹನುಮಂತ ಮತ್ತು ಗೋಪಾಲ್ ಎಂಬ ಇಬ್ಬರು ಹಿಂದೂಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಶಿವಮೊಗ್ಗದ ಮೆಗ್ಗಾನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 2022ರಲ್ಲಿ ರಾಮನವಮಿಯ ದಿನವೂ ಹಿಂದೂಗಳ ಮೇಲೆ ಈ ರೀತಿ ಹಲ್ಲೆ ನಡೆಸಲಾಗಿತ್ತು.

ಗಾಯಗೊಂಡ ಗೊಪಾಲನು ಸ್ಥಳಿಯ ವಾರ್ತಾವಾಹಿನಿಗೆ ನೀಡಿದ ಹೇಳಿಕೆಯಲ್ಲಿ, ನಾವು ರಾಮ ನವಮಿಯಂದು ಜನರಿಗೆ ಪಾನಕ ಮತ್ತು ಕೊಸಂಬರಿ ವಿತರಿಸುತ್ತಿದ್ದೇವು ಆಗ ಗ್ರಾಮದ ಇತರ ಧರ್ಮದ ಯುವಕರು ನಮ್ಮನ್ನು ನಿಂದಿಸಿದರು. ಏಕಾಏಕಿ ಯುವಕರು ನನ್ನ ಮೇಲೆ ಹಲ್ಲೆ ನಡೆಸಿ ಹೊಟ್ಟೆಗೆ ಚಾಕುವಿನಿಂದ ಇರಿದಿದ್ದಾರೆ ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಬಹುಸಂಖ್ಯಾತ ಹಿಂದೂಗಳ ದೇಶದಲ್ಲಿ ಹಿಂದೂಗಳು ಅಸುರಕ್ಷಿತರಾಗಿರುವುದು ಹಿಂದೂಗಳಿಗೆ ನಾಚಿಕೆಗೇಡಿನ ಸಂಗತಿ !