ಈ ಸಂಘಟನೆಗೆ ಮ್ಯಾನ್ಮಾರ್ ಸೇನೆಯು ಬೆಂಬಲ

ಯಾಂಗೂನ್ (ಮ್ಯಾನ್ಮಾರ್) – 2017 ರಲ್ಲಿ ಮ್ಯಾನ್ಮಾರ್ನ ರಾಖೀನ್ ರಾಜ್ಯದಲ್ಲಿ ರೋಹಿಂಗ್ಯಾ ಮುಸಲ್ಮಾನರು ಅನೇಕ ಹಿಂದೂ ಮತ್ತು ಬೌದ್ಧರನ್ನು ಹತ್ಯೆಗೈದಿದ್ದರು. ಈಗ ಅರಕಾನ ಪ್ರಾಂತ್ಯದ ಬುತಿದುಆಂಗ್ ನಲ್ಲಿ ರೊಹಿಂಗ್ಯಾ ಮುಸ್ಲಿಮರ ಸಶಸ್ತ್ರ ಸಂಘಟನೆಯೊಂದು 1,600ಕ್ಕೂ ಹೆಚ್ಚು ಹಿಂದೂಗಳು ಮತ್ತು 120 ಬೌದ್ಧರನ್ನು ಒತ್ತೆಯಾಳಾಗಿ ಇರಿಸಿಕೊಂಡಿದೆ ಎಂಬ ಸುದ್ದಿಯನ್ನು ‘ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ. ವಿಶೇಷ ಅಂದರೆ, ಈ ಕೆಲಸವನ್ನು ಮಾಡಿದವರಿಗೆ ಮ್ಯಾನ್ಮಾರ ನ ಸೈನ್ಯವು ಬೆಂಬಲಿಸಿದೆ ಎಂದು ಹೇಳಲಾಗಿದೆ.
ಮ್ಯಾನ್ಮಾರ್ನ ಸೇನೆಯು ಸ್ಥಳೀಯ ಸಮುದಾಯಗಳನ್ನು ಭಯಭೀತಗೊಳಿಸುವ ಕೆಲಸವನ್ನು ಮತಾಂಧ ಮುಸಲ್ಮಾನರಿಗೆ ವಹಿಸಿದೆ. ನವೆಂಬರ್ 2023 ರಿಂದ ಮ್ಯಾನ್ಮಾರ್ ಸೇನೆಯು ‘ಅರಾಕನ್ ಆರ್ಮಿ’ ವಿರುದ್ಧ ಹೋರಾಡುತ್ತಿದೆ. ಮ್ಯಾನ್ಮಾರ್ ಸೇನೆಯು ‘ಅರಕಾನ್ ರೋಹಿಂಗ್ಯಾ ಸಾಲ್ವೇಶನ್ ಆರ್ಮಿ’ ಮತ್ತು ‘ಅರಾಕನ್ ರೋಹಿಂಗ್ಯಾ ಆರ್ಮಿ’ಗೆ ‘ಅರಾಕನ್ ಆರ್ಮಿ’ ವಿರುದ್ಧ ಹೋರಾಡಲು ಶಸ್ತ್ರಾಸ್ತ್ರ ಮತ್ತು ಮಿಲಿಟರಿ ತರಬೇತಿಯನ್ನು ನೀಡಿದೆ. ರೋಹಿಂಗ್ಯಾ ಭಯೋತ್ಪಾದಕರು ಮನೆಗಳನ್ನು ಲೂಟಿ ಮಾಡುವುದಲ್ಲದೆ, ಜನರನ್ನು ಅಪಹರಿಸಿ ಅವರ ಮನೆಗಳನ್ನು ಸುಡುತ್ತಿದ್ದಾರೆ.
ಸಂಪಾದಕೀಯ ನಿಲುವುಈ ಹಿಂದೂಗಳ ರಕ್ಷಣೆಗಾಗಿ ಭಾರತ ಸರ್ಕಾರವು ಮ್ಯಾನ್ಮಾರ್ ಸರ್ಕಾರದ ಜೊತೆ ಮಾತುಕತೆ ನಡೆಸಬೇಕೆಂದು ಧರ್ಮಾಭಿಮಾನಿ ಹಿಂದೂಗಳಿಗೆ ಅನಿಸುತ್ತಿದೆ ! |
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಪ್ರಧಾನಿ ಮೋದಿ ನನಗೆ ತುಂಬಾ ಇಷ್ಟ, ಅವರು ನನ್ನ ಒಳ್ಳೆಯ ಸ್ನೇಹಿತ ! : Donald Trump
ಭಾರತವು ಬಲವಂತವಾಗಿ ನುಸುಳುಕೋರರನ್ನು ಬಾಂಗ್ಲಾದೇಶಕ್ಕೆ ತಳ್ಳುತ್ತಿದೆ ! – ಬಾಂಗ್ಲಾದೇಶದ ಆರೋಪ : Bangladesh Allegation
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !