
ತಿರುವನಂತಪುರಂ (ಕೇರಳ) – ರಾಜ್ಯದ ಕೋಝಿಕೋಡ ನಿವಾಸಿ ಅಬ್ದುಲ ರಹೀಮ ಹೆಸರಿನ ವ್ಯಕ್ತಿಗೆ ಸೌದಿ ಅರೇಬಿಯಾದ ಸರ್ವೋಚ್ಚ ನ್ಯಾಯಾಲಯವು ಒಂದು ಪ್ರಕರಣದಲ್ಲಿ ಗಲ್ಲು ಶಿಕ್ಷೆ ವಿಧಿಸಿತ್ತು. ಅದನ್ನು ರದ್ದುಗೊಳಿಸಲು ಕೇರಳ ಮತ್ತು ಪ್ರಪಂಚದಾದ್ಯಂತದ ಕೇರಳಿಗರು ಒಟ್ಟು 34 ಕೋಟಿ ರೂಪಾಯಿಗಳನ್ನು ಚಂದಾ ಜಮಾ ಮಾಡಿದ್ದಾರೆ.
People of Kerala collect Rs 34 crore via crowdfunding to commute the death sentence of one Rahim in Saudi Arabia !
No religious ideology can divide our spirit of brotherhood ! – Kerala CM Vijayan
*Firstly, had it been a Hindu instead of a Muslim, would the same brotherhood be… pic.twitter.com/lspl9I5QGv
— Sanatan Prabhat (@SanatanPrabhat) April 13, 2024
1. ರಹೀಮ್ 18 ವರ್ಷಗಳಿಂದ ಸೌದಿ ಅರೇಬಿಯಾದಲ್ಲಿ ಜೈಲಿನಲ್ಲಿದ್ದಾನೆ. 2006 ರಲ್ಲಿ, ರಹೀಂನ ವಾಹನದಲ್ಲಿ 15 ವರ್ಷದ ಹುಡುಗನ ಶವ ಪತ್ತೆಯಾಗಿತ್ತು, ಅತನ ಸಾವಿಗೆ ಇವನನ್ನೇ ಹೊಣೆಗಾರರನ್ನಾಗಿ ಮಾಡಲಾಗಿತ್ತು. ಬಳಿಕ 2018ರಲ್ಲಿ, ಸೌದಿ ಅರೇಬಿಯಾದ ನ್ಯಾಯಾಲಯವು ಅವನಿಗೆ ಗಲ್ಲು ಶಿಕ್ಷೆ ವಿಧಿಸಿತ್ತು ಹಾಗೂ ಅಲ್ಲಿಯ ಸರ್ವೋಚ್ಚ ನ್ಯಾಯಾಲಯವೂ ಈ ಶಿಕ್ಷೆಯನ್ನು ಎತ್ತಿಹಿಡಿಯಿತು.
2. ಕಳೆದ ವರ್ಷ, ಅವನ ಕುಟುಂಬ ಸದಸ್ಯರು ಬಿಡುಗಡೆಯ ಬದಲಿಗೆ 34 ಕೋಟಿ ರೂಪಾಯಿಗಳನ್ನು ‘ಬ್ಲಡ್ ಮನಿ’ (ಆರೋಪಿಯ ಶಿಕ್ಷೆಯನ್ನು ರದ್ದುಗೊಳಿಸಲು ಸಂತ್ರಸ್ತನ ಕುಟುಂಬ ಸದಸ್ಯರಿಗೆ ನೀಡಲಾಗಿರುವ) ಮೊತ್ತವನ್ನು ನೀಡುವ ಸಿದ್ಧತೆಯನ್ನು ತೋರಿಸಿದರು. ಈ ಮೊತ್ತವನ್ನು ನೀಡಲು ಮಧ್ಯಸ್ಥರು ಎಪ್ರಿಲ್ 16 ರ ಗಡುವನ್ನು ನೀಡಿದ್ದರು.
3. ಸೌದಿ ಅರೇಬಿಯಾದಲ್ಲಿ, ಗಲ್ಲುಶಿಕ್ಷೆಯಿಂದ ಪಾರಾಗಬೇಕಾದರೆ, ಆರೋಪಿಯು ‘ಬ್ಲಡ್ ಮನಿ’ ಎಂಬ ಪರ್ಯಾಯವು ಆರೋಪಿಯ ಎದುರಿಗೆ ಇರುತ್ತದೆ. ಮೃತ ವ್ಯಕ್ತಿಯ ಕುಟುಂಬದವರು ‘ಬ್ಲಡ ಮನಿ’ ಮೊತ್ತವನ್ನು ಸ್ವೀಕರಿಸಿದರೆ, ಆರೋಪಿಯನ್ನು ಖುಲಾಸೆಗೊಳಿಸಲಾಗುತ್ತದೆ. ಆರೋಪಿಯನ್ನು ಕ್ಷಮಿಸುವ ಬದಲಿನಲ್ಲಿ ಈ ಮೊತ್ತವನ್ನು ನೀಡಲಾಗುತ್ತದೆ.
4. ಕಳೆದ ವಾರದವರೆಗೆ ಬರೋಬ್ಬರಿ 5 ಕೋಟಿ ಮಾತ್ರ ಜಮಾ ಮಾಡಲಾಗಿತ್ತು. ಇದಾದ ಬಳಿಕ ಎಲ್ಲೆಡೆ ಜಾಗೃತಿ ಮೂಡಿಸಿ 34 ಕೋಟಿ ರೂಪಾಯಿಗಳನ್ನು ಸಂಗ್ರಹಿಸಲಾಗಿದೆ. ಇದರಲ್ಲಿ ವಿವಿಧ ರಾಜಕಾರಣಿಗಳು, ಗಣ್ಯರು ಮತ್ತು ವಿದೇಶದಲ್ಲಿ ನೆಲೆಸಿರುವ ಕೇರಳದ ಜನರು ಸಹಭಾಗಿತ್ವವಿದೆ.
‘ಯಾವುದೇ ಧಾರ್ಮಿಕ ಸಿದ್ಧಾಂತವನ್ನು ನಮ್ಮ ಸಹೋದರತ್ವದಲ್ಲಿ ಬಿರುಕು ಮೂಡಿಸಲು ಸಾಧ್ಯವಿಲ್ಲವಂತೆ !’ – ಕೇರಳ ಮುಖ್ಯಮಂತ್ರಿ ವಿಜಯನ
ರಹೀಮನ ಬದಲು ಹಿಂದೂಗಳ ಸಂದರ್ಭದಲ್ಲಿ ಅಂತಹ ಘಟನೆ ಸಂಭವಿಸಿದ್ದರೆ, ಅಂತಹ ಸಹೋದರತ್ವವನ್ನು ತೋರಿಸುತ್ತಿದ್ದರೇ ? ಎನ್ನುವುದು ಮೊದಲ ಪ್ರಶ್ನೆ ! ‘ಹಿಂದೂ ದ್ವೇಷ ಮತ್ತು ಮುಸ್ಲಿಂ ಪ್ರೇಮ’ ಎಂಬುದು ಭಾರತೀಯ ಕಮ್ಯುನಿಸಂನ ವ್ಯಾಖ್ಯಾನ ಇರುವುದರಿಂದ ವಿಜಯನ್ ಇವರು ಸಂತ್ರಸ್ತ ಹಿಂದೂಗಳ ರಕ್ಷಣೆಗಾಗಿ ಮುಸ್ಲಿಮರಲ್ಲಿ ಕರೆ ನೀಡುತ್ತಿದ್ದರೆ? ಎಂಬುದು ಇನ್ನೊಂದು ಪ್ರಶ್ನೆ ! ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ ಇವರು ಫೇಸ್ಬುಕ್ ಮೂಲಕ ಸಹಾಯಕ್ಕಾಗಿ ಮನವಿ ಮಾಡಿದ್ದಾರೆ ಮತ್ತು ಅಬ್ದುಲ್ ರಹೀಮನ ಬಿಡುಗಡೆಗಾಗಿ ಜಗತ್ತಿನಾದ್ಯಂತವಿರುವ ಕೇರಳ ನಾಗರಿಕರು ಒಂದುಗೂಡಿದರು. ಕೇರಳದ ಜನರು ತೆಗೆದುಕೊಂಡ ಕ್ರಮ ಪ್ರೀತಿಯ ಪರಿಪೂರ್ಣ ಉದಾಹರಣೆಯಾಗಿದೆ. ಕೇರಳದಲ್ಲಿ ಸಹೋದರತ್ವ ಬಲವಾಗಿ ಬೇರೂರಿದೆ ಎಂಬುದನ್ನು ಇದು ತೋರಿಸುತ್ತದೆ. ಯಾವುದೇ ಧಾರ್ಮಿಕ ಸಿದ್ಧಾಂತವು ನಮ್ಮ ಸಹೋದರತ್ವವನ್ನು ಛಿದ್ರಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿದರು! |

FIR Against Kunal Kamra : ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಹಾಸ್ಯ ಕಲಾವಿದ ಕುಣಾಲ ಕಮ್ರಾ ವಿರುದ್ಧ ದೂರು ದಾಖಲು!
Fake Currency Racket : ಜಾಲದಿಂದ ನಕಲಿ ಭಾರತೀಯ ಕರೆನ್ಸಿ ನೋಟುಗಳ ಮುದ್ರಣ ಪತ್ತೆ!
Kerala HC on Waqf : ಕೇರಳ ಹೈಕೋರ್ಟ್ನಿಂದ ರಾಜ್ಯ ವಕ್ಫ್ ಮಂಡಳಿಗೆ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ತಡೆ
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath