ಚೆನ್ನೈನಲ್ಲೂ ನೀರಿನ ಕೊರತೆ

ಚೆನ್ನೈ (ತಮಿಳುನಾಡು) – ಕರ್ನಾಟಕದ ರಾಜಧಾನಿ ಬೆಂಗಳೂರಿನ ನಂತರ ಈಗ ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲೂ ಕೂಡ ನೀರಿನ ಕೊರತೆ ಎದುರಾಗಿದೆ. ಚೆನ್ನೈನ 43 ಪ್ರತಿಶತದಷ್ಟು ಜನಸಂಖ್ಯೆಯ ದಾಹವನ್ನು ನೀಗಿಸುವ ಅತಿ ದೊಡ್ಡ ವೀರನಂ ಸರೋವರವು ಬತ್ತಿಹೋಗುತ್ತಿದೆ. ಈ ಕೆರೆಯ ಕೆಲವು ಭಾಗಗಳಲ್ಲಿ ಮಾತ್ರ ನೀರು ಉಳಿದಿದೆ. ಕಳೆದ ವರ್ಷ ಜುಲೈನಲ್ಲಿ ಇದೇ ಪರಿಸ್ಥಿತಿ ಎದುರಾಗಿತ್ತು. ಈ ವರ್ಷ 3 ತಿಂಗಳ ಹಿಂದೆಯೇ ಜಲಾಶಯಗಳು ಬತ್ತಿ ಹೋಗಲಾರಂಭಿಸಿವೆ. ಫೆಬ್ರವರಿ 28 ರಿಂದ ವೀರನಂ ಸರೋವರದಿಂದ ನೀರು ಸರಬರಾಜು ನಿಲ್ಲಿಸಲಾಗಿದೆ. ಇತರ ಜಲಾಶಯಗಳ ಸಾಮರ್ಥ್ಯವೂ ದಯನೀಯವಾಗಿ ಕಡಿಮೆ ಆಗಿದೆ. ಸರ್ಕಾರದ ಕಡೆಯಿಂದ ನೀರನ್ನು ಪೂರೈಸುವುದಕ್ಕಾಗಿ , ಕೆಲವು ಸ್ಥಳಗಳಲ್ಲಿ ದಿನ ಬಿಟ್ಟು ದಿನ ನೀರನ್ನು ಪೂರೈಸಲಾಗುತ್ತಿದೆ.

1. ಭೂಮಿಯ ಮೇಲಿನ ನೀರಿನ ನಿಕ್ಷೇಪಗಳು ಖಾಲಿಯಾಗುವ ಅಂಚಿನಲ್ಲಿವೆ. ಅಂತರ್ಜಲ ಮಟ್ಟವೂ ವೇಗವಾಗಿ ಕುಸಿಯುತ್ತಿದೆ. ಚೆನ್ನೈ ಸಮೀಪದ ಮೆಡವಕ್ಕಂ ಪಟ್ಟಣದಲ್ಲಿ, ಕೊಳವೆ ಬಾವಿಗಳು (ಬೋರ್ ವೆಲ್) ಏಪ್ರಿಲ್ನಲ್ಲಿಯೇ ಬತ್ತಿ ಹೋಗಿದ್ದು ಅಲ್ಲಿನ ಜನರಿಗೆ ಒಂದು ನೀರಿನ ಟ್ಯಾಂಕರ್ ಗೆ 1,500 ರೂ. ಕೊಡಬೇಕಾಗಿ ಬಂದಿದೆ.
2. ‘ಅಣ್ಣಾ ವಿಶ್ವವಿದ್ಯಾಲಯದ ಹವಾಮಾನ ಬದಲಾವಣೆ ಸಂಶೋಧನಾ ಕೇಂದ್ರ’ದ ಮಾಜಿ ನಿರ್ದೇಶಕರಾದ ಕೆ.ಪಳನಿವೇಲಿ ಮಾತನಾಡಿ, ನೀರಿನ ಅಸಮರ್ಪಕ ನಿರ್ವಹಣೆ ಮತ್ತು ಹವಾಮಾನ ಬದಲಾವಣೆಯಿಂದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ ಎಂದು ಹೇಳಿದರು.
ಪ್ರಧಾನಿ ಮೋದಿ ಅವರ ನಿವಾಸದ ಹೊರಗೆ ಕಾಂಗ್ರೆಸ್ ಆಂದೋಲನ : Delhi Congress Protest
ನೌಕೆಯನ್ನು ವಶಕ್ಕೆ ತೆಗೆದುಕೊಂಡು ನಾವಿಕರನ್ನು ಒತ್ತೆಯಾಳಾಗಿರಿಸಿದ್ದ ಸೊಮಾಲಿಯಾದ 44 ನಾಗರಿಕರಿಗೆ ಜೀವಾವಧಿ ಶಿಕ್ಷೆ! : Somalians Get Life Imprisonment
‘ಕಾಕ್ರೋಚ್ ಜನತಾ ಪಾರ್ಟಿ’ಯ ಪ್ರತಿಭಟನಾಕಾರರು ನಡೆಸಿದ ಕಲ್ಲು ತೂರಾಟದಲ್ಲಿ ಪೊಲೀಸರು ಗಾಯಗೊಂಡಿಲ್ಲವಂತೆ! : Mohammed Zubair AltNews
ಬುಲ್ಡೋಜರ್ ಕ್ರಮಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ನ ವಿಭಜಿತ ತೀರ್ಪು! : Allahabad HC
ಬೀದಿ ನಾಯಿಯ ದಾಳಿಯಿಂದ ಗಾಯಗೊಂಡ ಬಾಲಕಿಗೆ ೧ ಲಕ್ಷ ರೂಪಾಯಿ ಪರಿಹಾರ ನೀಡಲು ಆದೇಶ
ಅಂದಿನ ಸಮಾಜವಾದಿ ಮತ್ತು ಕಾಂಗ್ರೆಸ್ ಸರಕಾರಗಳು ಗೋರಿಗಳ ಗೋಡೆಗಳ ಮೇಲೆ ಹಣ ವ್ಯಯ ಮಾಡುವುದನ್ನೇ ‘ಜಾತ್ಯತೀತತೆ’ ಎಂದು ಭಾವಿಸಿದ್ದವು!