Terrorist Arrested in UP: ಉತ್ತರಪ್ರದೇಶದಿಂದ 3 ಜಿಹಾದಿ ಭಯೋತ್ಪಾದಕರ ಬಂಧನ

  • 2 ಪಾಕಿಸ್ತಾನಿಗಳು, ಒಬ್ಬ ಕಾಶ್ಮೀರದ ನಿವಾಸಿ

  • ಚುನಾವಣೆಯ ಸಮಯದಲ್ಲಿ ದೇಶದಲ್ಲಿ ರಕ್ತಪಾತ ನಡೆಸುವವರಿದ್ದರು

ಮಹಾರಾಜಗಂಜ (ಉತ್ತರಪ್ರದೇಶ) – ಉತ್ತರಪ್ರದೇಶದ ಭಯೋತ್ಪಾದನಾ ನಿಗ್ರಹ ದಳವು ಇಲ್ಲಿಂದ 3 ಜಿಹಾದಿ ಭಯೋತ್ಪಾದಕರನ್ನು ಬಂಧಿಸಿದೆ. ಇವರಲ್ಲಿ 2 ಪಾಕಿಸ್ತಾನಿಗಳು ಮತ್ತು ಒಬ್ಬ ಕಾಶ್ಮೀರದವನಾಗಿದ್ದಾನೆ. ಈ ಮೂವರು ನೇಪಾಳದಿಂದ ಭಾರತದಲ್ಲಿ ನುಸುಳುತ್ತಿರುವಾಗ ಬಂಧಿಸಲಾಯಿತು. ಈ ಮೂವರು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐ.ಎಸ್.ಐ.ನ ನೆರವಿನೊಂದಿಗೆ ಭಯೋತ್ಪಾದಕ ಸಂಘಟನೆ ಹಿಜ್ಬುಲ ಮುಜಾಹಿದ್ದೀನನಿಂದ ಭಯೋತ್ಪಾದಕ ಚಟುವಟಿಕೆಯ ತರಬೇತಿ ಪಡೆದಿದ್ದರು ಎಂದು ಹೇಳಲಾಗುತ್ತಿದೆ. ಅವರ ಬಂಧನದ ಬಳಿಕ ಭಾರತ ಮತ್ತು ನೇಪಾಳ ಗಡಿಯಲ್ಲಿ ತೀವ್ರ ನಿಗಾ ವಹಿಸುವಂತೆ ಎಚ್ಚರಿಕೆ ನೀಡಲಾಗಿದೆ. ಈ ವಿಷಯದಲ್ಲಿ ಪೊಲೀಸರು ಮಾತನಾಡಿ, ಕಳೆದ ಕೆಲವು ತಿಂಗಳುಗಳಿಂದ ಐ.ಎಸ್.ಐ. ಪಾಕಿಸ್ತಾನಿ ನಾಗರಿಕರು ಸೇರಿದಂತೆ ಇತರ ಕೆಲವು ಭಯೋತ್ಪಾದಕರನ್ನು ಭಾರತಕ್ಕೆ ಕಳುಹಿಸುವ ಸಿದ್ಧತೆಯಲ್ಲಿರುವ ಬಗ್ಗೆ ಮಾಹಿತಿ ದೊರಕಿತ್ತು. ಚುನಾವಣೆ ವೇಳೆ ಈ ಭಯೋತ್ಪಾದಕರು ರಕ್ತಪಾತ ನಡೆಸಬಹುದು ಎಂಬ ಮಾಹಿತಿ ಇತ್ತು. ಇದಕ್ಕಾಗಿ ಮೂವರನ್ನೂ ಪಾಕಿಸ್ತಾನದಲ್ಲಿರುವ ಹಿಜ್ಬುಲ ಮುಜಾಹಿದೀನ ನೆಲೆಯಲ್ಲಿ ತರಬೇತಿಯನ್ನು ನೀಡಲಾಗಿತ್ತು. ಮೂವರ ವಿಚಾರಣೆ ಮುಂದುವರಿದೆ.

ಸಂಪಾದಕೀಯ ನಿಲುವು

ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಪ್ರಯತ್ನ ಮಾಡುವ ಪಾಕಿಸ್ತಾನಕ್ಕೆ ಭಾರತವು ಯಾವಾಗ ಪಾಠ ಕಲಿಸುವುದು ?