ತಮಿಳುನಾಡಿನಲ್ಲಿ ದ್ರಮುಕ ಸರಕಾರದ ಸಚಿವರಿಂದ ಪ್ರಧಾನಮಂತ್ರಿ ಮೋದಿ ಇವರಿಗೆ ಬೈಗುಳ !

(ದ್ರಮುಕ ಎಂದರೆ ದ್ರವಿಡ ಮುನ್ನೆತ್ರ ಕಳಘಂ, ದ್ರವಿಡ ಪ್ರಗತಿ ಸಂಘ)

ಚೆನ್ನೈ (ತಮಿಳುನಾಡು) – ದ್ರವಿಡ ಮುನ್ನೆತ್ರ ಕಳಘಂ (ದ್ರವಿಡ್ ಪ್ರಗತಿ ಸಂಘ) ಪಕ್ಷದ ರಾಜ್ಯದಲ್ಲಿನ ಸರಕಾರದಲ್ಲಿ ಮೀನುಗಾರಿಕೆ ಮತ್ತು ಪಶುಸಂಗೋಪನೆ ಸಚಿವ ಶ್ರೀ. ಅನಿಥಾ ರಾಧಾಕೃಷ್ಣನ್ ಇವರು ಪ್ರಧಾನಮಂತ್ರಿ ಇವರಿಗೆ ಬೈಗುಳ ಬೈದರು. ಕಳೆದ ವಾರ ಪ್ರಧಾನಮಂತ್ರಿ ಮೋದಿ ಇವರು ತಮಿಳುನಾಡಿನ ಪ್ರವಾಸದಲ್ಲಿರುವಾಗ ಅವರು ಸಾಲೇಂನ ಸಭೆಯಲ್ಲಿ ಭಾಷಣ ಮಾಡಿದ್ದರು. ಇದರಿಂದ ರಾಧಾಕೃಷ್ಣನ್ ಇವರು ಒಂದು ಸಭೆಯಲ್ಲಿ ಬೈಗುಳ ಬೈದರು. ಭಾಜಪದಿಂದ ಅವರ ಹೇಳಿಕೆಯನ್ನು ಖಂಡಿಸುತ್ತಾ ‘ಈ ಪ್ರಕರಣದಲ್ಲಿ ದ್ರಮುಕ ಕ್ಷಮೆ ಕೇಳಬೇಕೆಂದು’, ಆಗ್ರಹಿಸಿದ್ದರು.

ಸಂಪಾದಕೀಯ ನಿಲುವು

ಭಾರತದ ಪ್ರಧಾನ ಮಂತ್ರಿಗಳಿಗೆ ಬೈಗುಳ ಬೈಯ್ಯುವ ಮನೋಪ್ರವೃತ್ತಿ ಎಷ್ಟು ಕೀಳಮಟ್ಟದಾಗಿದೆ ? ಇದು ತಿಳಿದು ಬರುತ್ತದೆ ! ಇತರ ರಾಜಕೀಯ ಪಕ್ಷಗಳು ಇದನ್ನು ಖಂಡಿಸಲಿಲ್ಲ, ಅವರು ಇದಕ್ಕೆ ಬೆಂಬಲ ನೀಡಿದ್ದಾರೆ, ಹೀಗೆಯೇ ಅನಿಸುತ್ತದೆ ! ಇಂತಹ ರಾಜಕೀಯ ಪಕ್ಷಗಳು ಭಾರತಕ್ಕೆ ನಾಚಿಗೇಡು !