ಭರೂಚ (ಗುಜರಾತ) ಇಲ್ಲಿಯ ಪ್ರಸಿದ್ಧ ಶ್ರೀ ಪಶುಪತಿ ಮಹಾದೇವ ದೇವಸ್ಥಾನಕ್ಕೆ ದುಷ್ಕರ್ಮಿಯಿಂದ ಬೆಂಕಿ ಹಚ್ಚುವ ಪ್ರಯತ್ನ !

‘ಸರ್ ತನ ಸೇ ಜುದಾ’ (ಶಿರಚ್ಛೇದ ಮಾಡುವುದು) ಬರೆದಿರುವ ಪತ್ರಗಳು ಪತ್ತೆ !

ಭರೂಚ (ಗುಜರಾತ) – ಇಲ್ಲಿಯ ಪ್ರಸಿದ್ಧ ಶ್ರೀ ಪಶುಪತಿ ಮಹಾದೇವ ದೇವಸ್ಥಾನಕ್ಕೆ ಬೆಂಕಿ ಹಚ್ಚುವ ಪ್ರಯತ್ನ ಮಾರ್ಚ್ ೨೨ ರಂದು ಬೆಳಿಗ್ಗೆ ನಡೆದಿದೆ. ಈ ಘಟನೆಯ ಸಿಸಿಟಿವಿ ಚಿತ್ರೀಕರಣ ಪೊಲೀಸರು ನೋಡುತ್ತಿರುವಾಗ ಓರ್ವ ವ್ಯಕ್ತಿ ದೇವಸ್ಥಾನದಲ್ಲಿ ಸ್ಫೋಟಕ ವಸ್ತುಗಳು ಎಸೆಯುತ್ತಿರುವುದು ಕಾಣುತ್ತಿದೆ. ನಂತರ ಅವನು ಅಲ್ಲಿಂದ ಪರಾರಿಯಾದನು. ಸ್ವಲ್ಪ ಸಮಯದ ನಂತರ ಅಲ್ಲಿ ಬೆಂಕಿ ಹತ್ತಿತು. ಸ್ಥಳೀಯ ಹಿಂದುಗಳು ಅದನ್ನು ನೋಡಿದ ನಂತರ ಬೆಂಕಿಯನ್ನು ಆರಿಸಿದರು. ಈ ಘಟನೆಯ ಬಗ್ಗೆ ಪೊಲೀಸರಿಗೆ ತಿಳಿಸಿದರು. ಇಲ್ಲಿ ಪೊಲೀಸರಿಗೆ ಕೆಲವು ಕರಪತ್ರಗಳು ದೊರೆತಿವೆ. ಅದರಲ್ಲಿ ‘ಸರ ತನ ಸೇ ಜುದಾ’ (ಶಿರಚ್ಛೇದ ಮಾಡುವುದು) ಎಂದು ಬರೆದಿರುವುದು ಕಂಡಿತು. ಪೊಲೀಸರು ಈ ಘಟನೆಯ ತನಿಖೆ ನಡೆಸುತ್ತಿದ್ದಾರೆ. ಕೆಲವು ಸಮಯದ ಹಿಂದೆ ಈ ದೇವಸ್ಥಾನದಿಂದ ೫ ಲಕ್ಷ ರೂಪಾಯ ಆಭರಣಗಳು ಕಳುವಾಗಿದ್ದವು. ಈ ದೇವಸ್ಥಾನದ ವ್ಯವಸ್ಥಾಪನೆ ಶಂಕರಾಚಾರ್ಯರ ದ್ವಾರಕಾಪೀಠದಿಂದ ನಡೆಯುತ್ತದೆ.

ಸಂಪಾದಕೀಯ ನಿಲುವು

ಹಿಂದುಗಳ ದೇಶದಲ್ಲಿ ಮುಸಲ್ಮಾನ ಮತ್ತು ಅವರ ಧಾರ್ಮಿಕ ಸ್ಥಳಗಳು ಅಲ್ಲ, ಹಿಂದುಗಳ ದೇವಸ್ಥಾನಗಳು ಅಸುರಕ್ಷಿತ !