ಭಾರತ ವಿರೋಧಿ ಬ್ರಿಟನ ಪ್ರಾಧ್ಯಾಪಕಿ ನಿತಾಶಾ ಕೌಲ್ ಅವರಿಗೆ ಭಾರತಕ್ಕೆ ಪ್ರವೇಶ ನಿರಾಕರರಣೆ!

  • ಬೆಂಗಳೂರು ವಿಮಾನ ನಿಲ್ದಾಣದಿಂದ ಬ್ರಿಟನ್ನಿಗೆ ಮರಳಿ ಕಳುಹಿಸಿದರು!

  • ಕಾಂಗ್ರೆಸ್ ಸರ್ಕಾರ ಆಹ್ವಾನಿಸಿತ್ತು !

ನವದೆಹಲಿ : ಭಾರತೀಯ ಸೇನೆಯ ಮೇಲೆ ಆರೋಪ ಮಾಡುವ ಬ್ರಿಟನ ಪ್ರಾಧ್ಯಾಪಕಿ ನಿತಾಶಾ ಕೌಲ್ ಅವರನ್ನು ಬೆಂಗಳೂರು ವಿಮಾನ ನಿಲ್ದಾಣದಿಂದ ಮರಳಿ ಅವರ ದೇಶಕ್ಕೆ ಕಳುಹಿಸಲಾಗಿದೆ. ಪ್ರಾಧ್ಯಾಪಕಿ ಕೌಲ್ ಅವರನ್ನು ಕರ್ನಾಟಕದ ಕಾಂಗ್ರೆಸ್ ಸರಕಾರವು `ಸಂವಿಧಾನ ಮತ್ತು ರಾಷ್ಟ್ರೀಯ ಏಕತಾ ಪರಿಷತ್ – 2024′ ಕಾರ್ಯಕ್ರಮಕ್ಕೆ ಆಹ್ವಾನಿಸಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಪ್ರಾಧ್ಯಾಪಕಿ ಕೌಲ ಇವರು `ನನಗೆ ಭಾರತದಲ್ಲಿ ಪ್ರವೇಶವನ್ನು ನಿರಾಕರಿಸಲಾಗಿದೆ’ ಎಂದು ಆರೋಪಿಸಿದ್ದಾರೆ. ವಿಶೇಷ ಎಂದರೆ ಪ್ರಾಧ್ಯಾಪಕಿ ಕೌಲ್ ಅವರನ್ನು ಆಹ್ವಾನಿಸಿರುವ ಕರ್ನಾಟಕ ಸರಕಾರ ಈ ಘಟನೆ ಬಗ್ಗೆ ಮೌನ ವಹಿಸಿದೆ. ನಿತಾಶಾ ಕೌಲ್ ಲಂಡನ್‌ನ ವೆಸ್ಟ್‌ಮಿನಿಸ್ಟರ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕಿಯಾಗಿದ್ದಾರೆ . ಅವರು ಅಂತರರಾಷ್ಟ್ರೀಯ ಸಂಬಂಧಗಳು ಮತ್ತು ರಾಜಕೀಯವನ್ನು ಕಲಿಸುತ್ತಾರೆ.

1. ಪ್ರಾಧ್ಯಾಪಕಿ ನಿತಾಶಾ ಕೌಲ ತಮ್ಮ ಹೇಳಿಕೆಯಲ್ಲಿ, ನಾನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೇಲೆ ನಿರಂತರವಾಗಿ ಟೀಕಿಸುತ್ತಿದ್ದೇನೆ; ಆದ್ದರಿಂದ ಹೀಗೆ ಮಾಡಲಾಗಿದೆ. ನನಗೆ ‘ಪ್ರಜಾಪ್ರಭುತ್ವ ಮತ್ತು ಘಟನಾತ್ಮಕ ಮೌಲ್ಯಗಳು’ ಈ ವಿಷಯದ ಕುರಿತು ಮಾತನಾಡಲು ಭಾರತದಲ್ಲಿ ಪ್ರವೇಶವನ್ನು ನಿರಾಕರಿಸಲಾಯಿತು. ನನಗೆ ಕರ್ನಾಟಕ ಸರ್ಕಾರವು ಗೌರವಾನ್ವಿತ ಪ್ರತಿನಿಧಿಯೆಂದು ಒಂದು ಪರಿಷತ್ತಿಗೆ ಆಹ್ವಾನಿಸಿತ್ತು; ಆದರೆ ಕೇಂದ್ರ ಸರಕಾರ ಭಾರತಕ್ಕೆ ಪ್ರವೇಶ ನೀಡಲು ನಿರಾಕರಿಸಿದೆ ಎಂದು ತಿಳಿಸಿದ್ದಾರೆ.

2. ಈ ಘಟನೆಯ ನಂತರ ಪ್ರಾಧ್ಯಾಪಕಿ ಕೌಲ್ ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದರಲ್ಲಿ ಅವರು ಪಾಕಿಸ್ತಾನಿ ಗಾಯಕ ಮೆಹದಿ ಹಸನ್ ಅವರೊಂದಿಗೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದಾರೆ. ಇದರಲ್ಲಿ ಅವರು ಕಾಶ್ಮೀರದಲ್ಲಿ ಜನರ ಹತ್ಯೆ ಮಾಡಲು ಸಮಾಧಿಗಳನ್ನು ಅಗೆಯಲಾಯಿತು. ನೂರಾರು ಮಹಿಳೆಯರು ಅತ್ಯಾಚಾರಕ್ಕೊಳಗಾದರು, ಭಾರತೀಯ ಸೇನೆಯಿಂದ ಅಲ್ಲಿ ದೌರ್ಜನ್ಯಗಳು ಮಿತಿ ಮೀರಿದೆ. ಚುನಾವಣಾ ಗಲಭೆಯ ನಂತರ, ಕಾಶ್ಮೀರದಲ್ಲಿ ಜನರು ಶಸ್ತ್ರಾಸ್ತ್ರಗಳನ್ನು ಕೈಗೆ ತೆಗೆದುಕೊಂಡರು, ಆದ್ದರಿಂದ ಕಾಶ್ಮೀರಿ ಹಿಂದೂಗಳು ವಲಸೆ ಹೋದರು ಎಂದು ಹೇಳಿದ್ದಾರೆ.

3. ಒಂದು ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕಿ ಕೌಲ್ ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ಸಂಬಂಧಿಸಿದಂತೆ, ರಾಷ್ಟ್ರೀಯ ಸ್ವಯಂಸೇವಕ ಸಂಘವು ಭಾರತದ ಬಲಪಂಥೀಯ ಅರೆಸೈನಿಕ ಪಡೆಯಾಗಿದೆ. ಇದು ಭಯೋತ್ಪಾದಕರಿಗೆ ಜನ್ಮ ನೀಡುತ್ತದೆ, ಅದರ ಬಹುಪಾಲು ಸದಸ್ಯರು ಭಾರತದ ಪ್ರಧಾನಿ ನರೇಂದ್ರ ಮೋದಿ ಆಗಿದ್ದಾರೆ. ಭಾಜಪ ರಾಜಕೀಯ ಶಾಖೆಯೇ ಅಲ್ಲ ಎಂದು ಹೇಳಿದ್ದಾರೆ.