ಪಾಕಿಸ್ತಾನದಿಂದ ಶ್ರೀಕೃಷ್ಣ ಜನ್ಮಭೂಮಿ ಪ್ರಕರಣದಲ್ಲಿ ಹಿಂದೂ ಕಕ್ಷಿದಾರರಿಗೆ ಬಾಂಬ್ ನಿಂದ ಸ್ಫೋಟಿಸುವುದಾಗಿ ಬೆದರಿಕೆ !

ಲಕ್ಷಣಪುರಿ (ಉತ್ತರಪ್ರದೇಶ) – ಮಥುರಾದ ಶ್ರೀಕೃಷ್ಣ ಜನ್ಮಭೂಮಿ ಪ್ರಕರಣದ ಅರ್ಜಿದಾರ ಅಶುತೋಷ ಪಾಂಡೆ ಅವರಿಗೆ ‘ಮೊಕದ್ದಮೆಯನ್ನು ಹಿಂಪಡೆಯದಿದ್ದರೆ ಬಾಂಬ್‌ನಿಂದ ಸ್ಫೋಟಿಸಲಾಗುವುದು‘, ಎಂದು ಬೆದರಿಕೆ ಬಂದಿದೆ. ಪಾಕಿಸ್ತಾನದ ಮೊಬೈಲ್ ಸಂಖ್ಯೆಯಿಂದ ಬೆದರಿಕೆ ಕರೆ ಬಂದಿದೆ. ಬೆದರಿಕೆ ಹಾಕಿರುವ ವ್ಯಕ್ತಿ ಭಾರತದ ವಿರುದ್ಧ ಘೋಷಣೆ ನೀಡಿದ್ದಾನೆ ಎಂದು ಪಾಂಡೆ ಹೇಳಿದ್ದಾರೆ. ಪಾಂಡೆ ಪೋಲೀಸರಿಗೆ ದೂರು ನೀಡಿದ ನಂತರ ಪೋಲೀಸರು ಈ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಅಶುತೋಷ ಪಾಂಡೆ ಶ್ರೀಕೃಷ್ಣ ಜನ್ಮಭೂಮಿಯ ಪಕ್ಷಾಕಾರರಾಗಿದ್ದಾರೆ. ಅವರು ಶ್ರೀಕೃಷ್ಣ ಜನ್ಮಭೂಮಿ ಮುಕ್ತಿ ನಿರ್ಮಾಣ ಟ್ರಸ್ಟ್ ಮಥುರಾದ ಅಧ್ಯಕ್ಷರೂ ಆಗಿದ್ದಾರೆ.

ಸಂಪಾದಕೀಯ ನಿಲುವು

ಮುಸಲ್ಮಾನ ಪಕ್ಷಕಾರರಿಗೆ ಎಂದಿಗೂ ಹೀಗೆ ಬೆದರಿಕೆ ಬರುವುದಿಲ್ಲ, ಇದನ್ನು ಗಮನದಲ್ಲಿಡಿ ! ಹಿಂದೂಗಳ ದೇವಾಲಯಗಳನ್ನು ನ್ಯಾಯಸಮ್ಮತವಾಗಿ ಮುಕ್ತಗೊಳಿಸಲು ಪ್ರಯತ್ನಿಸುವವರು ಎಷ್ಟು ಕಷ್ಟಗಳನ್ನು ಎದುರಿಸಬೇಕಾಗುತ್ತದೆ, ಎಂಬುದಕ್ಕೆ ಇದೊಂದು ಉದಾಹರಣೆ !