ಕಥಾವಾಚಕ ಪಂಡಿತ್ ಪ್ರದೀಪ್ ಮಿಶ್ರಾ ಇವರಿಗೆ ಕೊಲೆ ಬೆದರಿಕೆ!

ಮಿಶ್ರಾಗೆ ಭದ್ರತೆ ನೀಡುವಂತೆ ಗೃಹ ಸಚಿವರಿಗೆ ನವನೀತ್ ರಾಣಾ ಮನವಿ !

ಸೆಹೋರ್ (ಮಧ್ಯಪ್ರದೇಶ) – ಖ್ಯಾತ ಕಥೆಗಾರ ಪಂಡಿತ್ ಪ್ರದೀಪ್ ಮಿಶ್ರಾ ಅವರಿಗೆ ಜೀವ ಬೆದರಿಕೆ ನೀಡಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ಸಂದರ್ಭದಲ್ಲಿ ಅಮರಾವತಿ ಸಂಸದ ನವನೀತ್ ರವಿ ರಾಣಾ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದು ಪಂಡಿತ್ ಮಿಶ್ರಾ ಅವರಿಗೆ ಭದ್ರತೆ ಒದಗಿಸುವಂತೆ ಒತ್ತಾಯಿಸಿದ್ದರು. ಅದಕ್ಕೆ ಶಾ ಇತ್ತೀಚೆಗೆ ಉತ್ತರ ನೀಡಿದ್ದರು. ಈ ಮಾಹಿತಿಯೂ ಇತ್ತೀಚೆಗೆ ಬೆಳಕಿಗೆ ಬಂದಿದೆ. ಡಿಸೆಂಬರ್ ೨೦೨೩ ರಲ್ಲಿ, ಪಂಡಿತ್ ಮಿಶ್ರಾ ಕಥಾವಾಚನ ಮಾಡಲು ಅಮರಾವತಿಗೆ ಹೋಗಿದ್ದರು. ಆಗ ಅವರಿಗೆ ಬೆದರಿಕೆ ಪತ್ರ ಬಂದಿತ್ತು. ಆಗ ಮಾತ್ರ ರಕ್ಷಣೆ ನೀಡುವಂತೆ ಅಮರಾವತಿ ಸಂಸದ ನವನೀತ್ ರಾಣಾ ಅಮಿತ್ ಶಾಗೆ ಪತ್ರ ಬರೆದಿದ್ದರು. ಫೆಬ್ರವರಿ ೧೦ ರಂದು ಷಾ ಪತ್ರಕ್ಕೆ ಉತ್ತರಿಸಿದರು. ಸಿಹೋರ್ ಪೊಲೀಸ್ ವರಿಷ್ಠಾಧಿಕಾರಿ ಮಯಾಂಕ್ ಅವಸ್ಥಿ ಅವರು ಈ ಪ್ರಕರಣವು ಮಹಾರಾಷ್ಟ್ರಕ್ಕೆ ಸೇರಿದ್ದು, ಆದರೆ ಮಧ್ಯಪ್ರದೇಶ ಪೊಲೀಸ್ ಪ್ರಧಾನ ಕಚೇರಿಯಿಂದ ಪಂಡಿತ್‌ಜಿಗೆ ಈಗಾಗಲೇ ಭದ್ರತೆ ಒದಗಿಸಲಾಗಿದೆ ಎಂದು ಹೇಳಿದರು.