|

ಬೆಂಗಳೂರು – ರಾಜ್ಯದ ವಿಜಯಪುರ, ಶಿವಮೊಗ್ಗ ಸೇರಿದಂತೆ ಹಲವು ಜಿಲ್ಲೆಗಳ ಶಾಲೆಗಳಲ್ಲಿ ` ಇದು ಜ್ಞಾನಮಂದಿರ, ಕೈಮುಗಿದು ಒಳಗೆ ಬಾ’ ಈ ವಾಕ್ಯವನ್ನು ಬದಲಾಯಿಸಿ ‘ಧೈರ್ಯದಿಂದ ಪ್ರಶ್ನಿಸಿರಿ ‘ ಎಂಬ ವಾಕ್ಯಗಳನ್ನು ಫಲಕಗಳಲ್ಲಿ ಬರೆಯಲಾಗಿದೆ. ಇದಕ್ಕೆ ರಾಜ್ಯದಲ್ಲಿ ಪ್ರತಿಭಟನೆಗಳು ಪ್ರಾರಂಭವಾಗಿವೆ. ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಕರ್ನಾಟಕ ರಾಜ್ಯ ವಕ್ತಾರರಾದ ಶ್ರೀ. ಮೋಹನ್ ಗೌಡ ಅವರು ಪ್ರಕಟಿಸಿರುವ ಪತ್ರಿಕಾ ಪ್ರಕಟಣೆಯಲ್ಲಿ,
‘ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ’: ಕಾಂಗ್ರೆಸ್ ಸರ್ಕಾರದ ಮತ್ತೊಂದು ವಿವಾದ https://t.co/VX5eH6jTr4 @XpressBengaluru
— kannadaprabha (@KannadaPrabha) February 19, 2024
1. ಸರಕಾರ `ಕೈ ಮುಗಿದು’ ಇದನ್ನು ಧರ್ಮದೊಂದಿಗೆ ಜೋಡಿಸಿ, ಮಕ್ಕಳಲ್ಲಿ ಇರುವ ತಮ್ಮ ಆಚಾರ, ವಿಚಾರ, ಸಂಸ್ಕೃತಿಯನ್ನು ನಾಶ ಮಾಡಲು ಸರಕಾರ ಷಡ್ಯಂತ್ರ ನಡೆಸುತ್ತಿದೆ. ಕರೋನಾ ಸಾಂಕ್ರಾಮಿಕ ಸಮಯದಲ್ಲಿ, ಬ್ರಿಟನ್ನ ಆಗಿನ ರಾಜಕುಮಾರ ಚಾರ್ಲ್ಸ್ ಸೇರಿದಂತೆ ವಿಶ್ವದ ಅನೇಕ ರಾಷ್ಟ್ರಗಳ ಮುಖ್ಯಸ್ಥರು ಕೈ ಜೋಡಿಸಿ`ನಮಸ್ಕಾರ’ ಮಾಡಿ ಸ್ವಾಗತ ಮಾಡುತ್ತಿದ್ದರು. ಇದು ನಮ್ಮ ದೇಶದ ಶ್ರೇಷ್ಠ ಸಂಸ್ಕೃತಿಯಾಗಿದೆ. ಇದನ್ನು ನಷ್ಟಗೊಳಿಸಲು ಪ್ರಯತ್ನಿಸುವ ಸರಕಾರದ ಹೇಳಿಕೆ ಅತ್ಯಂತ ಖಂಡನೀಯವಾಗಿದೆ.
2. ಸರ್ವೋಚ್ಚ ನ್ಯಾಯಾಲಯದ ಫಲಕದ ಮೇಲೆ `ಸತ್ಯಮೇವ ಜಯತೆ’ ಎಂದು ಬರೆಯಲಾಗಿದೆ.` ಅದಕ್ಕೂ ಧರ್ಮದ ಬಣ್ಣವನ್ನು ನೀಡುವಿರೇ ?’ ಎನ್ನುವ ಪ್ರಶ್ನೆ ಮೂಡುತ್ತದೆ. `ನಮ್ಮ ದೇಶದ ಮೂಲ ಸಂಸ್ಕೃತಿಯನ್ನೇ ಕಿತ್ತು ಹಾಕಿದ ಬಳಿಕ ಮುಂದೆ ಆ ಮಕ್ಕಳು ಸುಸಂಸ್ಕೃತರಾಗಿ ದೇಶವನ್ನು ಹೇಗೆ ನಡೆಸುತ್ತಾರೆ ?’ ಎನ್ನುವ ಆಕ್ರೋಶ ನಿರ್ಮಾಣವಾಗಿದೆ.
3. ಸರಕಾರ ಹಿಂದೂ ಧರ್ಮದ ಮೇಲಿನ ನಂಬಿಕೆಯನ್ನು ನಾಶಪಡಿಸುವ ಹಿನ್ನಲೆಯನ್ನು ಹೊಂದಿದೆ. ಸರಕಾರದ ಇಂತಹ ಕ್ರಮಗಳಿಗೆ ಈ ಹಿನ್ನೆಲೆ ಕಾರಣೀಭೂತವಾಗಿದೆ. ಪೋಷಕರು ಮತ್ತು ಅವರ ಮಕ್ಕಳು ಸರಕಾರದ ಈ ನಿಂದನೀಯ ಕೃತ್ಯವನ್ನು ತಿಳಿದುಕೊಂಡು ತಕ್ಷಣವೇ ಫಲಕದ ಮೇಲೆ ಪುನಃ ಮೊದಲಿನಂತೆ ಬದಲಾಯಿಸಲು ಆಗ್ರಹಿಸುವುದು ಆವಶ್ಯಕವಾಗಿದೆ.
ಉತ್ತರಾಖಂಡದಲ್ಲಿ ಖಲಿಸ್ತಾನಿ ಉಗ್ರನ ಬಂಧನ: ಭಾರೀ ಶಸ್ತ್ರಾಸ್ತ್ರಗಳ ವಶ: Khalistani Terrorists Nabbed
ಉದ್ಧವ ಬಾಳಾಸಾಹೇಬ ಠಾಕ್ರೆ ಬಣದ 9 ರಲ್ಲಿ 6 ಸಂಸದರು ಬಂಡಾಯ: ಶಿವಸೇನೆಯಲ್ಲಿ ಸೇರುವ ಸಾಧ್ಯತೆ! : Operation Tiger
ಟೆಲಿಗ್ರಾಮ್’ ಆ್ಯಪ್ ಮೇಲಿನ ತಾತ್ಕಾಲಿಕ ನಿಷೇಧವನ್ನು ದೆಹಲಿ ಹೈಕೋರ್ಟ್ನಲ್ಲಿ ಪ್ರಶ್ನಿಸಿದ ಟೆಲಿಗ್ರಾಮ್ : Telegram App
ಪುಣೆಯಲ್ಲಿ ಕ್ರಿಶ್ಚಿಯನ್ ಧರ್ಮಗುರು ಸೇರಿದಂತೆ 8 ಜನರ ವಿರುದ್ಧ ಪ್ರಕರಣ ದಾಖಲು! : Pune Conversion
‘ಸಂಘದವರು ಹಿಂದೂಗಳಲ್ಲ, ಕೇವಲ ಹಿಂದುತ್ವವಾದಿಗಳಂತೆ!’ – ಕಾಂಗ್ರೆಸ್ ಸಚಿವ ಯತೀಂದ್ರ ಸಿದ್ದರಾಮಯ್ಯ
ಸಂಘವು ವ್ಯಕ್ತಿಗೆ ದೇಶಭಕ್ತಿಯನ್ನು ಕಲಿಸುವ ಸಂಸ್ಥೆ: ನೋಂದಣಿಯ ಅಗತ್ಯವಿಲ್ಲ! – ಸಿ.ಟಿ. ರವಿ